ಮೆಟ್ರೋದಲ್ಲೇ “ಬೆಂಗಳೂರು ರೌಂಡ್ಸ್‌’ಗೆ ಚಿಂತನೆ; ‌ ಪ್ರವಾಸಿ ತಾಣಗಳ ದರ್ಶನ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುತ್ತಿದೆ.

Team Udayavani, Apr 8, 2022, 3:50 PM IST

ಮೆಟ್ರೋದಲ್ಲೇ “ಬೆಂಗಳೂರು ರೌಂಡ್ಸ್‌’ಗೆ ಚಿಂತನೆ; ‌ ಪ್ರವಾಸಿ ತಾಣಗಳ ದರ್ಶನ

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಒಂದು ದಿನ ಹಾಗೂ ಮೂರು ದಿನಗಳ ಪಾಸು ವ್ಯವಸ್ಥೆ ಜಾರಿಗೊಳಿಸಿದ ಬೆನ್ನಲ್ಲೇ ಈ ಮಾದರಿಯ ಪಾಸುಗಳಿಗೆ ಹೆಚ್ಚು ಜನರನ್ನು ಕರೆತರಲು ಹೊಸ ಪ್ರಯಾಣಿಕರ ವರ್ಗದ ಕಡೆಗೆ ನೋಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಏಜೆನ್ಸಿಗಳೊಂದಿಗೆ ಕೈಜೋಡಿಸಲು ಚಿಂತನೆ ನಡೆಸಿದೆ.

ಈ ಪ್ರಯತ್ನ ಯಶಸ್ವಿಯಾದರೆ, ನಗರಕ್ಕೆ ಬರುವ ಪ್ರವಾಸಿಗರು ಮೆಟ್ರೋದಲ್ಲೇ “ಬೆಂಗಳೂರು ರೌಂಡ್ಸ್‌’ ಹಾಕಬಹುದು. ಇದರಿಂದ ಸಮಯವೂ ಉಳಿತಾಯ ಆಗುತ್ತದೆ. ಜತೆಗೆ ಸಂಚಾರ ‌ದಟ್ಟಣೆ ಕಿರಿಕಿರಿಯೂ ಇರುವುದಿಲ್ಲ. ಖರ್ಚು ತುಸು ಕಡಿಮೆ ಆಗಲಿದೆ. ಈ ಎಲ್ಲ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಟ್ರಾವೆಲ್‌ ಏಜೆನ್ಸಿಗಳೊಂದಿಗೆ ಕೈಜೋಡಿಸುವ ಆಲೋಚನೆ ನಡೆಸಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಪ್ರಸ್ತುತ ನಿತ್ಯ ಸಾವಿರಾರು ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಇದರಲ್ಲಿ ಬಹುತೇಕರು “ಪ್ಯಾಕೇಜ್‌ ಟೂರ್‌’ನಲ್ಲಿ ಬಂದು, ಇಲ್ಲಿನ ಪ್ರವಾಸಿ ತಾಣಗಳಿಗೆ ಟೂರಿಸ್ಟ್‌ ಬಸ್‌ಗಳಲ್ಲೇ ಭೇಟಿ ನೀಡುತ್ತಾರೆ. ಹೀಗೆ ಪ್ರವಾಸಿಗರನ್ನು ಕರೆತರುವ ಏಜೆನ್ಸಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು, ಮೆಟ್ರೋ ಮೂಲಕ ಪ್ರವಾಸಿ ತಾಣಗಳ ದರ್ಶನ ಮಾಡಿ ಸುವ ಐಡಿಯಾ ಇದೆ. ಇದರಿಂದ ಪ್ರವಾಸಿಗರಿಗೂ ಹೊಸ ಅನುಭವ ಸಿಗಲಿದೆ. ತನಗೆ ಆದಾಯವೂ ಬರಲಿದೆ ಎಂಬ ಲೆಕ್ಕಾಚಾರ ನಿಗಮದ್ದಾಗಿದೆ.

ಈ ಚಿಂತನೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಒಂದೆರಡು ತಿಂಗಳಲ್ಲಿ ಇದಕ್ಕೊಂದು ರೂಪುರೇಷೆ ನೀಡಲಾಗುವುದು. ಒಂದು ವೇಳೆ ಮಾತುಕತೆ ಫ‌ಲಿಸಿದರೆ, ಟ್ರಾವೆಲ್‌ ಏಜೆನ್ಸಿಗಳು ಇದಕ್ಕೆ ಪೂರಕ ವಾಗಿ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರತ್ಯೇಕ ನಕ್ಷೆ ಹಾಕಿಕೊಳ್ಳಲಿವೆ. ಇನ್ನು “ನಮ್ಮ ಮೆಟ್ರೋ’ ಹಾದುಹೋಗುವ ಮಾರ್ಗದಲ್ಲೇ ವಿಧಾನಸೌಧ, ಲಾಲ್‌ಬಾಗ್‌, ಕಬ್ಬನ್‌ ಉದ್ಯಾನ, ಮಾರುಕಟ್ಟೆಗೆ ಸಮೀಪ ಇರುವ ಟಿಪ್ಪು ಬೇಸಿಗೆ ಅರಮನೆ, ಇಸ್ಕಾನ್‌ ಒಳಗೊಂಡಂತೆ
ಹಲವು ಪ್ರವಾಸಿ ತಾಣಗಳು ಬರುತ್ತವೆ. ಮಂತ್ರಿಸ್ಕ್ವೇರ್‌, ಒರಾಯನ್‌ ನಂತಹ ಮಾಲ್‌ಗ‌ಳಿಗೆ ಕೂಡ ಸಂಪರ್ಕ ಕಲ್ಪಿಸುವುದರಿಂದ ಶಾಪಿಂಗ್‌ ಗೂ ಅನುಕೂಲ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಪ್ರಯೋಗದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಎಷ್ಟು ಏರಿಕೆ ಆಗಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ, ಮುಂಬ ರುವ ದಿನಗಳಲ್ಲಿ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆ ಆಗಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇದು ಉತ್ತಮ ಫ‌ಲ ನೀಡಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಏಜೆನ್ಸಿಗಳಿಗೆ ಏನು ಲಾಭ?: ಟೂರಿಸ್ಟ್‌ ಟ್ರಾವೆಲ್‌ ಏಜೆನ್ಸಿಗಳಿಗೆ ಸಗಟು ದಿನದ ಪಾಸುಗಳನ್ನು ಖರೀದಿಸಿದರೆ ರಿಯಾಯ್ತಿ ನೀಡಲು ಅವಕಾಶ ಇದೆ. ಅಥವಾ ಇಂತಿಷ್ಟು ಪ್ರವಾಸಿಗರನ್ನು ಕರೆತಂದರೆ ರಿಯಾಯ್ತಿಗಳನ್ನು ನೀಡಬಹುದು. ಆದರೆ, ಇದೆಲ್ಲವೂ ಮಾತುಕತೆ ಮತ್ತು ಅದಕ್ಕೆ ದೊರೆಯುವ ಸ್ಪಂದನೆಯನ್ನು ಅವಲಂಬಿಸಿದೆ.

ಇನ್ನೂ ಯಾವುದೇ ಚರ್ಚೆಗಳು ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಏಜೆನ್ಸಿಗಳೊಂದಿಗೆ ನಡೆದಿಲ್ಲ. ಈಗ ಪರಿಚಯಿಸಿರುವ ಒಂದು ದಿನದ ಮತ್ತು ಮೂರು ದಿನಗಳ ಪಾಸಿಗೆ ಪ್ರತಿಕ್ರಿಯೆ ನೋಡಿಕೊಂಡು ಮುಂದುವರಿಯಲು ಉದ್ದೇಶಿಸಲಾಗಿದೆ. ಈ ಮಧ್ಯೆ ಏಪ್ರಿಲ್‌ 2ರಿಂದ ಪರಿಚಯಿಸಲಾದ ದೈನಂದಿನ ಮೆಟ್ರೋ ಪಾಸುಗಳ ಮಾರಾಟ ಅಷ್ಟಕ್ಕಷ್ಟೇ ಇದೆ. ದಿನದ ಪಾಸಿಗೆ 150 ರೂ. ಇದ್ದರೆ, ಮೂರು ದಿನದ ಪಾಸಿಗೆ 350 ರೂ. ನಿಗದಿಪಡಿಸಲಾಗಿದೆ (50 ರೂ. ಠೇವಣಿ ಹೊರತುಪಡಿಸಿ). ನಿತ್ಯ ಅಬ್ಬಬ್ಟಾ ಎಂದರೆ 50 ಪಾಸುಗಳು ಮಾರಾಟ ಆಗುತ್ತಿವೆ. ಇದರಲ್ಲಿ ಒಂದು ದಿನದ ಪಾಸು 30ರಿಂದ 40 ಇದ್ದರೆ, ಉಳಿದವು ಮೂರು ದಿನಗಳ ಪಾಸು ಆಗಿವೆ. ಆದರೆ, ಈಗಲೇ ನಿರೀಕ್ಷಿತ ಸ್ಪಂದನೆ ಇಲ್ಲ ಎಂಬ ನಿರ್ಧಾರಕ್ಕೆ ಬರಲಾಗದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಬಿಎಂಟಿಸಿ ಬೆಂಗಳೂರು ರೌಂಡ್ಸ್‌ಬಹುತೇಕ ಸ್ಥಗಿತ
ಬಿಎಂಟಿಸಿ ವತಿಯಿಂದ ಕೂಡ “ಬೆಂಗಳೂರು ರೌಂಡ್ಸ್‌’ ಇದ್ದು, ವೋಲ್ವೋ ಬಸ್‌ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 15ರಿಂದ 20 ತಾಣಗಳ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಕೋವಿಡ್‌ ಪರಿಣಾಮ ನೀರಸ ಸ್ಪಂದನೆ ದೊರಕಿದ್ದು, ಬಹುತೇಕ ಸ್ಥಗಿತಗೊಂಡಿದೆ

ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಟೂರಿಸ್ಟ್‌ ಟ್ರಾವೆಲ್‌ ಏಜೆನ್ಸಿಗಳ ಜತೆ ಕೈಜೋಡಿಸುವ ಆಲೋಚನೆ ಇದೆ. ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಪ್ರಯತ್ನದಿಂದ ಪ್ರವಾಸಿಗರಿಗೆ ಸಮಯ ಉಳಿತಾಯ, ನಗರದ ಪ್ರವಾಸಿ ತಾಣಗಳ ಪರಿಚಯ, ಏಜೆನ್ಸಿಗಳಿಗೂ ಅನುಕೂಲ ಆಗಲಿದೆ.
●ಅಂಜುಂ ಪರ್ವೇಜ್‌,
ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್

*ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.