ಅಜೆಕಾರು: ರಸ್ತೆ ಬದಿ ಹಾಳಾಗುತ್ತಿರುವ ಮರದ ದಿಮ್ಮಿಗಳು
Team Udayavani, Feb 22, 2021, 4:45 AM IST
ಅಜೆಕಾರು: ಅಜೆಕಾರು ಪೇಟೆಯ ಸಮೀಪ ಮುಖ್ಯ ರಸ್ತೆಯ ಅಂಚಿನಲ್ಲಿಯೇ ಮರದ ದಿಮ್ಮಿಗಳನ್ನು ಹಾಕಲಾಗಿದ್ದು ದಿಮ್ಮಿಗಳು ಹಾಳಾಗುತ್ತಿವೆ.
ಕಳೆದ 7, 8 ತಿಂಗಳ ಹಿಂದೆ ರಸ್ತೆ ಅಂಚಿನ ಅಪಾಯಕಾರಿ ಮರವನ್ನು ಅರಣ್ಯ ಇಲಾಖೆ ತೆರವು ಮಾಡಿದ್ದು ಈ ದಿಮ್ಮಿಗಳನ್ನು ವಿಲೇವಾರಿ ಮಾಡದೆ ರಸ್ತೆ ಅಂಚಿನಲ್ಲಿಯೇ ಬಿಡಲಾಗಿದೆ.
ದಿಮ್ಮಿಗಳಿಂದಾಗಿ ವಾಹನ ಸವಾರರಿಗೆ, ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ದಿಮ್ಮಿಗಳು ಹಾಳಾಗುತ್ತಿರುವುದರಿಂದ ಅರಣ್ಯ ಇಲಾಖೆಗೂ ನಷ್ಟ ಉಂಟಾಗುತ್ತದೆ.
ಅಜೆಕಾರು ಹೋಬಳಿಯ ನಾಡಕಚೇರಿ, ಬ್ಯಾಂಕ್, ವಾಣಿಜ್ಯ ಕಟ್ಟಡಗಳಿಗೆ ತೆರಳುವ ರಸ್ತೆ ಇದಾಗಿದ್ದು ಈ ರಸ್ತೆ ಅಂಚಿನ ಮರದ ದಿಮ್ಮಿಗಳನ್ನು ಕೂಡಲೇ ಅರಣ್ಯ ಇಲಾಖೆ ವಿಲೇವಾರಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್