ಭರವಸೆ ತುಂಬುವಂತೆ ಮಾತು ಮುತ್ತು


Team Udayavani, May 19, 2021, 6:30 AM IST

ಭರವಸೆ ತುಂಬುವಂತೆ ಮಾತು ಮುತ್ತು

ಮಾತು ಬಹಳ ಶಕ್ತಿಶಾಲಿಯಾದ ಸಾಧನ. ಮಾತಿನಿಂದ ಕೊಲ್ಲಬಹುದು, ಬದುಕಿಸಲೂ ಬಹುದು. ಹತಾಶೆ, ನೈರಾಶ್ಯ ಭಾವಗಳಿಂದ ಇನ್ನೇನು ಪ್ರಪಂಚವೇ ಮುಳುಗಿ ಹೋಯಿತು ಎಂಬ ಸ್ಥಿತಿಯಲ್ಲಿ ಇರುವವನನ್ನು ಆಶಾವಾದದ, ಧೈರ್ಯ ತುಂಬುವ ಮಾತುಗಳಿಂದ ಚೇತರಿಸಿಕೊಳ್ಳುವಂತೆ ಮಾಡಬಹುದು. ಈಗಿನ ವಿಷಮ ಪರಿಸ್ಥಿತಿಯಲ್ಲಂತೂ ಸಕಾರಾತ್ಮಕವಾದ, ಭರವಸೆ ತುಂಬುವ ಒಂದೊಂದು ಮಾತು ಕೂಡ ಮುತ್ತಿನಂತೆ.

ಇಲ್ಲೊಂದು ಕಥೆ ಯಿದೆ. ನಾವು ಮಾತು ಗಳನ್ನು ಯಾವುದೇ ಸಂದರ್ಭದಲ್ಲಿಯೂ ಹೇಗೆ ಅಳೆದು, ತೂಗಿ ಆಡಬೇಕು ಎಂಬುದನ್ನು ಇದು ಸೂಚ್ಯವಾಗಿ ಹೇಳುತ್ತದೆ. ಇಂತಹ ಸಂದರ್ಭಗಳು ನಾವು ಪ್ರತೀ ನಿತ್ಯ ಎದುರಿಸುವಂಥವು. ಮಾತು ಆಡುವ ಮುನ್ನ ನೂರು ಬಾರಿ ಯೋಚಿಸಬೇಕು ಎನ್ನುವುದಾಗಿ ನಮ್ಮ ಹಿರಿಯರು ಹೇಳುತ್ತಿದ್ದರು. ಅದಕ್ಕೂ ಕಾರಣ ಮಾತು ಎಂಬುದು ಪ್ರಬಲ ಸಾಧನ ಎನ್ನುವುದು.

ಒಂದು ಹಳ್ಳಿಯಲ್ಲೊಬ್ಬ ಪುಟ್ಟ ಹುಡುಗ ಇದ್ದ. ಎಂಟು ವರ್ಷ ವಯಸ್ಸು ಅವನಿಗೆ. ಮಹಾ ತಂಟೆಕೋರನಾತ. ದಿನ ಬೆಳಗಾದರೆ ಎಲ್ಲೆಲ್ಲೋ ಹೋಗಿ ಆಟವಾಡುವುದು, ಸದಾ ಸುತ್ತಾಡುತ್ತ ಇರುವುದು ಅವನ ದಿನಚರಿ. ಸಾಹಸದ ಆಟಗಳನ್ನು ಆಡುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಎತ್ತರೆತ್ತರದ ಮರಗಳನ್ನು ಏರಿ ಜೋಕಾಲಿ ಆಡುತ್ತಿದ್ದ. ಕೊಂಬೆಗಳಲ್ಲಿ ತಲೆಕೆಳಗಾಗಿ ತೂಗಾಡುತ್ತಿದ್ದ. ಅಮ್ಮ ಅಪ್ಪ ಎಷ್ಟು ಬಾರಿ ತಿಳಿಹೇಳಿದರೂ ಕೇಳದ ಪೋರ.

ಅವನಿಗೊಬ್ಬ ಅಕ್ಕ ಇದ್ದಳು. ಅವಳಿಗೆ ಹನ್ನೆರಡು ವರ್ಷ ಪ್ರಾಯ. ತಮ್ಮನೊಂದಿಗೆ ಅವಳೂ ಆಡಿಕೊಳ್ಳುವುದಿತ್ತು. ಆದರೆ ಅಣ್ಣನಂತೆ ಪೋಕರಿ ಅವಳಲ್ಲ.

ಒಂದು ಬಾರಿ ತಮ್ಮ ಒಂದು ಎತ್ತರದ ಮರವನ್ನೇರಿ ತಲೆಕೆಳಗಾಗಿ ತೂಗಾಡುತ್ತಿದ್ದ. ತಗ್ಗಿದ ಒಂದು ಕೊಂಬೆಯಲ್ಲಿ ಅಕ್ಕನೂ ಜೀಕುತ್ತಿದ್ದಳು. ಅಷ್ಟರಲ್ಲಿ ಅಪ್ಪ ಮತ್ತು ಅಮ್ಮ ಅತ್ತಲಾಗಿ ಬಂದರು. ಅವರು ಬರುವುದೂ ಬಲವಾದ ಒಂದು ಗಾಳಿ ಬೀಸುವುದೂ ಏಕಕಾಲದಲ್ಲಾಯಿತು.

“ಬಿಗಿಯಾಗಿ ಹಿಡಿದುಕೊಳ್ಳೋ ಪೋಕ್ರೀ’ ಎಂದು ಅಪ್ಪ ಕೂಗಿದರು. “ಅಯ್ಯೋ ಬೀಳುತ್ತೀ ಹುಡುಗೀ’ ಎಂದು ಅಮ್ಮ ಕಿರುಚಿದರು.
ಗಾಳಿ ಬೀಸಿ ಹೋಯಿತು. ತಮ್ಮ ಎತ್ತರದ ಕೊಂಬೆಯನ್ನು ಬಲವಾಗಿ ಹಿಡಿದು ಕೊಂಡು ಬಚಾವಾದ. ಅಕ್ಕ ಮಾತ್ರ ಕೆಳಗೆ ಬಿದ್ದಳು. ಅವಳು ಹೆಚ್ಚು ಎತ್ತರಕ್ಕೆ ಏರಿರಲಿಲ್ಲವಾದ ಕಾರಣ ಅಪಾಯ ಉಂಟಾಗಲಿಲ್ಲ.

ಇದು ಮಾತಿನ ಶಕ್ತಿ. ಅಪ್ಪ ಕೂಗಿ ಹೇಳಿದ್ದು ರಕ್ಷಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂದಾಗಿತ್ತು. ಗಾಳಿ ಬೀಸುವ, ಎಲೆಗಳು ಅಲ್ಲಾಡುವ ಸದ್ದನ್ನು ಅದಾಗಲೇ ಕೇಳಿದ್ದ ತಮ್ಮನಿಗೆ ಮುಂದೆ ಏನು ಮಾಡಬೇಕು ಎಂಬುದನ್ನು ಅಪ್ಪನ ಕೂಗು ಕ್ಷಣಮಾತ್ರದಲ್ಲಿ ಸ್ಪಷ್ಟವಾಗಿ ತಿಳಿಸಿಕೊಟ್ಟಿತ್ತು. ಆತ ಕೊಂಬೆಯನ್ನು ಬಿಗಿ ಯಾಗಿ ಹಿಡಿದುಕೊಂಡ, ಬಚಾವಾದ.

ಆದರೆ ಅಮ್ಮ ಕೂಗಿದ್ದು ಬಿಗಿಯಾಗಿ ಹಿಡಿದುಕೊಳ್ಳದಿದ್ದರೆ ಏನಾಗುತ್ತದೆ ಎಂಬ ಅಪಾಯದ ಚಿತ್ರಣವನ್ನು ಅಕ್ಕನ ಮನಸ್ಸಿಗೆ ತಿಳಿಸುವಂಥದ್ದು; ಏನು ಮಾಡಬೇಕು ಎಂಬುದನ್ನಲ್ಲ. ಅದು ಆಕೆಯ ಮನಸ್ಸನ್ನು ಇನ್ನಷ್ಟು ಗೊಂದಲಕ್ಕೆ ಕೆಡವಿ ಆಗಬಾರದ್ದು ಆಗುವಂತೆ ಮಾಡಿತು.

ಇದು ಒಂದು ಉದಾಹರಣೆ ಮಾತ್ರ. ಜೀವನದ ಪ್ರತೀ ಸಂದರ್ಭದಲ್ಲಿಯೂ ನಮ್ಮ ಪ್ರತೀ ಮಾತು ಕೂಡ ಎದುರಿನವನಲ್ಲಿ ಭರವಸೆ, ಉತ್ಸಾಹ, ಜೀವನೋಲ್ಲಾಸ ತುಂಬುವಂತಿರಬೇಕು. ಹೆದರಿದವನ ಮೇಲೆ ಕಪ್ಪೆ ಎಸೆಯುವಂತಹ ಮಾತು ಎಂದಿಗೂ ಸಲ್ಲದು. ಮುಂದೆ ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ, ಧನಾತ್ಮಕವಾಗಿ ತಿಳಿಸಿಕೊಡುವ ಮಾತುಗಳು ಕೇಳುಗನಿಗೂ ಹಿತ, ಆಡುವ ನಮಗೂ ಶ್ರೇಷ್ಠ.

(ಸಾರ ಸಂಗ್ರಹ)

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.