Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ


Team Udayavani, Sep 27, 2023, 11:48 PM IST

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

ಉಡುಪಿ: ಅಗ್ನಿಶಾಮಕ ಇಲಾಖೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಉಡುಪಿ ಜಿಲ್ಲೆಯ 6 ಮಂದಿ ಅಧಿಕಾರಿ, ಸಿಬಂದಿಗೆ 2021-22, 2022-23ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ಬೆಂಗಳೂರಿನಲ್ಲಿ ನಡೆದ ಅಗ್ನಿಶಾಮಕ ಸೇವಾ ಸಪ್ತಾಹದಲ್ಲಿ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಪ್ರದಾನ ಮಾಡಿದರು.

ಉಡುಪಿ ಅಗ್ನಿಶಾಮಕ ಠಾಣೆಯ ಜಿಲ್ಲಾ ಅಧಿಕಾರಿ ವಿನಾಯಕ ಯು. ಕಲ್ಗುಟ್ಕರ್‌ ಸಿಬಂದಿಗಳಾದ ಅಶೋಕ್‌ ಕುಮಾರ್‌ ಎಸ್‌.ಜಿ., ಸುಧೀರ್‌ ಉಡುಪಿ ಮತ್ತು ಅಲ್ಬಾಡಿ ಕೃಷ್ಣ ನಾಯ್ಕ, ಕಾರ್ಕಳ ಠಾಣೆಯ ಅಚ್ಯುತ ಕರ್ಕೇರ, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ. ಸುಂದರ್‌, ಮಲ್ಪೆ -ಬೈಲಕರೆಯ ಎಸ್‌. ರಮೇಶ್‌ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿನಾಯಕ ಯು. ಕಲ್ಗುಟ್ಕರ್‌ ಉತ್ತರ ಕನ್ನಡದ ಕಾರವಾರದವರು. 2008ರಲ್ಲಿ ಅಗ್ನಿಶಾಮಕ ಇಲಾಖೆಗೆ ಸೇರ್ಪಡೆಗೊಂಡು ಧಾರವಾಡ ಜಿಲ್ಲೆಯ ಕಲ್ಲಘಟಗಿಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಉಡುಪಿಯಲ್ಲಿದ್ದಾರೆ.

ಬಾರಕೂರಿನವರಾದ ಅಶೋಕ್‌ ಕುಮಾರ್‌ ಎಸ್‌.ಜಿ. 2005ರಲ್ಲಿ, ಉಡುಪಿಯ ಬಡಾನಿಡಿಯೂರಿನವರಾದ ಸುಧೀರ್‌ ಉಡುಪಿ 2008ರಲ್ಲಿ, ಮಲ್ಪೆಯ ವಡಭಾಂಡೇಶ್ವರದವರಾದ ಅಚ್ಯುತ ಕರ್ಕೇರ 1997ರಲ್ಲಿ ಇಲಾಖೆಗೆ ಸೇರಿದ್ದಾರೆ. ಉಡುಪಿ ಹಾಗೂ ಮಲ್ಪೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಪದೋನ್ನತಿ ಹೊಂದಿ ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿದ್ದಾರೆ.

ಸುಂದರ್‌ ಕುಂದಾಪುರ, ಪುತ್ತೂರು, ಬಂಟ್ವಾಳ, ಸಾಗರ ಮೊದಲಾದೆಡೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಕುಂದಾಪುರದ ಅಗ್ನಿ ಶಾಮಕ ದಳ ಠಾಣಾಧಿಕಾರಿಯಾಗಿದ್ದಾರೆ.ಎಸ್‌. ರಮೇಶ್‌ ಮಲ್ಪೆ -ಬೈಲಕರೆ ಅವರು ಭಟ್ಕಳದ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿದ್ದಾರೆ.ಕೃಷ್ಣ ನಾಯ್ಕ ಈ ಹಿಂದೆ ಕುಂದಾಪುರದಲ್ಲಿ ಸೇವೆ ಸಲ್ಲಿಸಿ, ಈಗ ಉಡುಪಿಯ ಅಗ್ನಿ ಶಾಮಕ ಠಾಣೆಯಲ್ಲಿದ್ದಾರೆ.

ಟಾಪ್ ನ್ಯೂಸ್

1-wewqqwe

ICC T20 ಬೌಲಿಂಗ್ ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲಿ ರವಿ ಬಿಷ್ಣೋಯ್

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

1-sada-d

KMC Manipal: ಸಂಕೀರ್ಣ ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ MMA

Forbes List: ನಿರ್ಮಲಾ ಸೀತಾರಾಮನ್‌ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

Forbes List: ನಿರ್ಮಲಾ ಸೀತಾರಾಮನ್‌ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

1-puttige-1

Udupi: ಪುತ್ತಿಗೆ ‘ವಿಶ್ವ ಗೀತಾ ಪರ್ಯಾಯ’ ಪೂರ್ವಭಾವಿ ಧಾನ್ಯ ಮುಹೂರ್ತ ವೈಭವ

web-halim

Halim Seeds: ಪೌಷ್ಠಿಕಾಂಶದ ಶಕ್ತಿ ಕೇಂದ್ರ… ಹಲೀಮ್‌ ಬೀಜಗಳ ಪ್ರಯೋಜನವೇನು?

1-sdsadasd

RSS ವಿರುದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪ: ಸ್ಪಷ್ಟನೆ ನೀಡಿದ ಸಂಘ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sada-d

KMC Manipal: ಸಂಕೀರ್ಣ ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ MMA

1-puttige-1

Udupi: ಪುತ್ತಿಗೆ ‘ವಿಶ್ವ ಗೀತಾ ಪರ್ಯಾಯ’ ಪೂರ್ವಭಾವಿ ಧಾನ್ಯ ಮುಹೂರ್ತ ವೈಭವ

State Govt ಇನ್ನೂ ಬಗೆಹರಿಯದ ಕೆಪಿಎಸ್‌ “ಕಾರ್ಯಭಾರ’ ಗೊಂದಲ

State Govt ಇನ್ನೂ ಬಗೆಹರಿಯದ ಕೆಪಿಎಸ್‌ “ಕಾರ್ಯಭಾರ’ ಗೊಂದಲ

Udupi ಶ್ರೀ ಪುತ್ತಿಗೆ ಮಠ ಪರ್ಯಾಯ:ಇಂದು “ಧಾನ್ಯ ಮುಹೂರ್ತ’

Udupi ಶ್ರೀ ಪುತ್ತಿಗೆ ಮಠ ಪರ್ಯಾಯ:ಇಂದು “ಧಾನ್ಯ ಮುಹೂರ್ತ’

Udupi ರಾಜೇಶ್ವರಿ ಶೆಟ್ಟಿ ವಿರುದ್ಧ ಸಲ್ಲಿಸಿದ್ದ ದಾವೆ ವಜಾ

Udupi ರಾಜೇಶ್ವರಿ ಶೆಟ್ಟಿ ವಿರುದ್ಧ ಸಲ್ಲಿಸಿದ್ದ ದಾವೆ ವಜಾ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

1-wewqqwe

ICC T20 ಬೌಲಿಂಗ್ ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲಿ ರವಿ ಬಿಷ್ಣೋಯ್

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

ಸಾವಯವ ಗೊಬ್ಬರ ಬಳಕೆಗೆ ಮುಂದಾಗಿ: ಡಾ.ಕೆ.ಸಂಧ್ಯಾ

ಸಾವಯವ ಗೊಬ್ಬರ ಬಳಕೆಗೆ ಮುಂದಾಗಿ: ಡಾ.ಕೆ.ಸಂಧ್ಯಾ

ರಸ್ತೆ ಅಗಲೀಕರಣ: ಕಟ್ಟಡ ತೆರವಿಗೆ ‌ತಡೆಯಾಜ್ಞೆ

ರಸ್ತೆ ಅಗಲೀಕರಣ: ಕಟ್ಟಡ ತೆರವಿಗೆ ‌ತಡೆಯಾಜ್ಞೆ

1-sada-d

KMC Manipal: ಸಂಕೀರ್ಣ ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ MMA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.