Udupi Harsha Showroom: ‘ಐಎಫ್ ಬಿ ಡೀಪ್ ಕ್ಲೀನ್’ ವಾಷಿಂಗ್ ಮೆಷಿನ್ ಬಿಡುಗಡೆ
Team Udayavani, Jun 10, 2023, 12:59 PM IST
ಉಡುಪಿ: ನಗರದ ಸಿಟಿ ಬಸ್ನಿಲ್ದಾಣ ಬಳಿಯ ಹರ್ಷ ಶೋರೂಂನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಐಎಫ್ಬಿ ಡೀಪ್ ಕ್ಲೀನ್’ ವಾಷಿಂಗ್ ಮೆಷಿನ್ ಅನ್ನು ಶುಕ್ರವಾರ ಸಂಸ್ಥೆಯ ನಿರ್ದೇಶಕ (ಆಪರೇಶನ್) ಅಶೋಕ್ ಕುಮಾರ್ ಬಿಡುಗಡೆಗೊಳಿಸಿದರು.
ಭಾರತದ ನಂ. 1 ಬ್ರ್ಯಾಂಡ್ ಆಗಿರುವ ಅತ್ಯಾಧುನಿಕ ತಂತ್ರಜ್ಞಾನ ದಿಂದ ಕೂಡಿದ ಐಎಪ್ಬಿ ಕಂಪೆನಿಯ ವಾಷಿಂಗ್ ಮೆಷಿನ್ ಅನ್ನು ಒಮ್ಮೆ ಖರೀದಿಸಿದರೆ 4 ವರ್ಷ ಬದಲಾವಣೆ ಮಾಡುವ ಅಗತ್ಯವಿರುವುದಿಲ್ಲ. ಈ ವಾಷಿಂಗ್ ಮೆಷಿನ್ ಉಪಯೋಗಿಸುವುದರಿಂದ ಸಮಯ, ನೀರು, ಡಿಟರ್ಜೆಂಟ್ ಉಳಿತಾಯ ಮಾಡಬಹುದು ಎಂದವರು ತಿಳಿಸಿದರು.
ಸ್ವದೇಶಿ ಉತ್ಪನ್ನವಾದ ಇದನ್ನು ಗ್ರಾಹಕರು ಖರೀದಿಸಿದರೆ ಹೆಚ್ಚು ಶ್ರಮ ಪಡದೆ ಬಳಸಬಹುದಾದ ಉತ್ತಮ ಸಾಧನವಾಗಿ ಉಪಯೋಗಕ್ಕೆ ಸಿಗಲಿದೆ ಎಂದು ಮಾರುಕಟ್ಟೆ ನಿರ್ದೇಶಕ ಹರೀಶ್ ಕುಮಾರ್ ಹೇಳಿದರು.
ಐಎಪ್ಬಿ ಕಂಪೆನಿಯ ಸೌತ್ ಬಿಸಿನೆಸ್ ಹೆಡ್ ಸೂರಜ್ ಮಾತನಾಡಿ, ಗ್ರಾಹಕರ ಇಚ್ಛೆಗೆ ಅನುಗುಣವಾದ ಉತ್ಕೃಷ್ಟ ಗುಣಮಟ್ಟದ ಗೃಹೋಪಕರಣಗಳನ್ನು ಹರ್ಷ ಸಂಸ್ಥೆ ಪೂರೈಸುವ ಮೂಲಕ ಜನರ ವಿಶ್ವಾಸ ಗಳಿಸಿದೆ. ಅಲ್ಲದೆ ಗ್ರಾಹಕಸ್ನೇಹಿ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಐಎಫ್ ಬಿ ಟ್ರೈನರ್ ವಿಜಯ ಕುಮಾರ್ ಅವರು, ಈ ವಾಷಿಂಗ್ ಮೆಷಿನ್ ಬಳಕೆಯಿಂದ ಶೇ. 40 ರಷ್ಟು ವಿದ್ಯುತ್ ಉಳಿತಾಯ, ಶೇ.25ರಿಂದ 30ರ ತನಕ ನೀರಿನ ಉಳಿತಾಯವಾಗಲಿದೆ. ಇದು ಭಾರತದ ಪ್ರಥಮ ಡೀಪ್ ಕ್ಲೀನ್ ಟೆಕ್ನಾಲಜಿ ಮೆಷಿನ್ ಆಗಿದ್ದು, ಪರಿಸರ ಸ್ನೇಹಿಯಾಗಿದೆ. ಯಾವ ಬಗೆಯ ಬಟ್ಟೆ, ಬಟ್ಟೆಯ ಗಾತ್ರ ಮತ್ತಿತರ ಎಲ್ಲ ಅಂಶಗಳನ್ನು ಗಮನಿಸಿ ಸ್ವಯಂ ಕಾರ್ಯನಿರ್ವಹಿಸುವ ಮೆಷಿನ್ ಇದಾಗಿದೆ ಎಂದರು.
ಹರ್ಷ ಸಂಸ್ಥೆಯ ನಿರ್ದೇಶಕ (ಇನ್ ಫ್ರಾಸ್ಟ್ರಕ್ಚರ್) ರಾಜೇಶ್ ಕೆ., ಎಜಿಎಂ (ಮರ್ಚಂಡೈಸ್) ರಮೇಶ್ ಕಲ್ಮಂಜೆ, ಹೆಡ್ ಆಫ್ ಆಪರೇಶನ್ ಸಮೃದ್ಧ್, ಮಾರುಕಟ್ಟೆ ಮುಖ್ಯಸ್ಥ ಅಭಿಷೇಕ್ ಎನ್. ರಾವ್, ಬ್ರ್ಯಾಂಚ್ ಮ್ಯಾನೇಜರ್ ಸ್ಟೀವನ್, ಹರ್ಷ ಹಾಗೂ ಐಎಫ್ಬಿ ಸಂಸ್ಥೆಯ ಸಿಬಂದಿ ಉಪಸ್ಥಿತರಿದ್ದರು.
ವಿಜೇಶ್ ತೇಜಸ್ ಪೂಜಾರಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ