Udupi ಸ್ಕೂಟರ್ ಢಿಕ್ಕಿ: ಪಾದಚಾರಿಗೆ ಗಾಯ
Team Udayavani, Sep 27, 2023, 12:08 AM IST
ಉಡುಪಿ: ಸ್ಕೂಟರ್ ಢಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡ ಘಟನೆ ನಡೆದಿದೆ.
ಉಡುಪಿಯ ನರಸಿಂಹ ರಾವ್ ಅವರು ಅಂಬಾಗಿಲು -ಕಲ್ಸಂಕ ರಸ್ತೆಯನ್ನು ದಾಟಿ ಬದಿಯಲ್ಲಿದ್ದ ವೇಳೆ ಅತೀವೇಗದಿಂದ ಬಂದ ಸ್ಕೂಟರ್ ಸವಾರ ಢಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಇವರ ಎಡಕಾಲು ಮೂಳೆ ಮುರಿತದ ಗಾಯವಾಗಿದೆ. ಸ್ಕೂಟರ್ ಸವಾರ ಪರಾರಿಯಾಗಿದ್ದಾನೆ.
ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.