ಉಳ್ಳಾಲ: ಆರೋಗ್ಯ ಕೇಂದ್ರ ಹರೇಕಳ ಗ್ರಾ. ಪಂ.ಗೆ ಹಸ್ತಾಂತರ


Team Udayavani, Feb 5, 2023, 7:05 AM IST

ಉಳ್ಳಾಲ: ಆರೋಗ್ಯ ಕೇಂದ್ರ ಹರೇಕಳ ಗ್ರಾ. ಪಂ.ಗೆ ಹಸ್ತಾಂತರ

ಉಳ್ಳಾಲ: ಸ್ಥಳೀಯ ಶಾಸಕರು, ಹರೇಕಳ ಗ್ರಾ. ಪಂ.ನ ಆಡಳಿತ ವರ್ಗ, ಗ್ರಾಮಸ್ಥರು ಉತ್ತಮ ಸಹಕಾರ ನೀಡಿದ್ದರಿಂದ ಹರೇಕಳದಲ್ಲಿ ಗುಣ ಮಟ್ಟದ ಬ್ರಿಡ್ಜ್ ನಿರ್ಮಾಣ ಸಾಧ್ಯವಾಗಿದೆ. ಇಲ್ಲಿನ ಜನರ ಪ್ರೀತಿಯನ್ನು ಗಮನಿಸಿ ಸರ್ವ ವೈದ್ಯಕೀಯ ಸಲಕರಣೆಗಳನ್ನೊಳಗೊಂಡ ಹರೇಕಳ ಆರೋಗ್ಯ ಕೇಂದ್ರವನ್ನು ನಿರ್ಮಿಸಿ ಹಸ್ತಾಂತರ ಮಾಡುತ್ತಿದ್ದೇನೆ ಎಂದು ಉಡುಪಿ ಅಂಬಲಪಾಡಿಯ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಹೇಳಿದ್ದಾರೆ.

ಹರೇಕಳ ಗ್ರಾಮದಲ್ಲಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹರೇಕಳ ಆರೋಗ್ಯ ಕೇಂದ್ರದ ಉದ್ಘಾಟನೆ ಮತ್ತು ಕೇಂದ್ರದ ಕೀಲಿಕೈಯನ್ನು ಶನಿವಾರ ಗ್ರಾ. ಪಂ.ಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ಕಷ್ಟದಲ್ಲಿರುವವರಿಗೆ, ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಆರೋಗ್ಯ ಕೇಂದ್ರ ನಿರ್ಮಾಣವಾಗಿದೆ. ಶಾಸಕರು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಈ ಕೇಂದ್ರ ನಿರ್ಮಾಣಗೊಂಡಿದೆ ಎಂದರು.

ಯೇನಪೊಯ ವಿ.ವಿ.ಯ ಕುಲಾಧಿಪತಿ ಯೇನಪೊಯ ಅಬ್ದುಲ್ಲಾ ಕುಂಞಿ ಮಾತನಾಡಿ, ಜಿ. ಶಂಕರ್‌ ಅವರು ಹಲವಾರು ಸಮಾಜ ಮುಖೀ ಕಾರ್ಯಕ್ರಮಗಳಿಗೆ ಕೊಡುಗೆ ನೀಡಿದವರು. ಅವರು ಫ್ಯಾಮಿಲಿ ಟ್ರಸ್ಟ್‌ ಮೂಲಕ ಜಾತಿಮತ ಬೇಧವಿಲ್ಲದೆ ಸಮಾಜಸೇವೆ ಮಾಡುತ್ತಿದ್ದಾರೆ. ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಅವರ ಈ ಕೊಡುಗೆ ಪ್ರೇರಣೆಯಾಗಲಿ ಎಂದರು.

ಶಾಸಕ ಯು.ಟಿ. ಖಾದರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಆರೋಗ್ಯ ಕೇಂದ್ರ ಮಾದರಿ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ ಎಂದರು. ಜಿ. ಶಂಕರ್‌ ಹಾಗೂ ಯೇನಪೊಯ ಅಬ್ದುಲ್ಲಾ ಕುಂಞಿ ಅವರನ್ನು ಸಮ್ಮಾನಿಸಲಾಯಿತು. ಪಂ. ಅಧ್ಯಕ್ಷ ಬದ್ರುದ್ದೀನ್‌, ಕಟ್ಟಡ ಉಸ್ತುವಾರಿ ವಹಿಸಿದ ಎನ್‌ಐಟಿಕೆ ಸುರತ್ಕಲ್‌ನ ಪ್ರೊ| ಸುಭಾಷ್‌ ಇವರನ್ನು ಜಿ. ಶಂಕರ್‌ ಗೌರವಿಸಿದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಉಪಾಧ್ಯಕ್ಷೆ ಕಲ್ಯಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಜೇಶ್‌ ಬಿ.ವಿ., ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಪ್ರಮುಖರಾದ ರಾಮದಾಸ್‌ ಪೂಂಜ, ಎಚ್‌. ಶಾಲಿ, ಎಡ್ವರ್ಡ್‌ ಮಥಾಯಿಸ್‌, ರೂಪರಾಜ್‌ ರೈ ಮುದಲೆಮಾರ್‌, ರಫೀಕ್‌ ಹರೇಕಳ, ಬಶೀರ್‌, ಸುಧಾಕರ ಗಟ್ಟಿ, ಬಶೀರ್‌ ಉಂಬುದ, ತಾರಾಕ್ಷಿ ಉಪಸ್ಥಿತರಿದ್ದರು.

ಹರೇಕಳ ಗ್ರಾ. ಪಂ. ಅಧ್ಯಕ್ಷ ಬದ್ರುದ್ದೀನ್‌ ಹರೇಕಳ ಸ್ವಾಗತಿಸಿದರು. ಮಹಮ್ಮದ್‌ ಮುಸ್ತಫಾ ವಂದಿಸಿದರು. ದೈಹಿಕ ಶಿಕ್ಷಕ ತ್ಯಾಗಂ ಹರೇಕಳ ನಿರೂಪಿಸಿದರು.

ಟಾಪ್ ನ್ಯೂಸ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ

ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!

ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fqweeqwe

ಮಂಗಳೂರು: ಪೊಲೀಸರಿಂದ 11 ಕೆಜಿ ಗಾಂಜಾ ಸಹಿತ ಮಾದಕ ವಸ್ತು ನಾಶ

ಮಂಗಳೂರು ಸೆಂಟ್ರಲ್‌: ರೈಲ್ವೇ ಯುಟಿಎಸ್‌ ಕೌಂಟರ್‌ ಪುನರಾರಂಭ

ಮಂಗಳೂರು ಸೆಂಟ್ರಲ್‌: ರೈಲ್ವೇ ಯುಟಿಎಸ್‌ ಕೌಂಟರ್‌ ಪುನರಾರಂಭ

MOULYA

ಮಾ. 27ರಿಂದ ಐದು ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ

ದ.ಕ.: ಎಂಟು ಮತಗಟ್ಟೆಗಳ ಬದಲಾವಣೆ: ಚುನಾವಣ ಆಯೋಗ ಅನುಮೋದನೆ

ದ.ಕ.: ಎಂಟು ಮತಗಟ್ಟೆಗಳ ಬದಲಾವಣೆ: ಚುನಾವಣ ಆಯೋಗ ಅನುಮೋದನೆ

accuident

ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ; ಗಾಯ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.