ಉತ್ತರ ಪ್ರದೇಶ: ಹೆದ್ದಾರಿಯಲ್ಲಿ ಮನೆಗೆ ನುಗ್ಗಿದ ಬಸ್; 25 ಮಂದಿಗೆ ಗಾಯ
Team Udayavani, Nov 22, 2021, 1:13 PM IST
ಮುಜಾಫರ್ನಗರ: ಶಾಮ್ಲಿ ಜಿಲ್ಲೆಯ ದೆಹಲಿ-ಸಹಾರಣ್ ಪುರ ಹೆದ್ದಾರಿಯಲ್ಲಿ ಬಸ್ಸೊಂದು ನಿಯಂತ್ರಣ ಕಳೆದುಕೊಂಡು ಮನೆಗೆ ನುಗ್ಗಿದ ಪರಿಣಾಮ 25 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಭಾನುವಾರ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶ ರೋಡ್ವೇಸ್ ನ ಬಸ್ ಸುಮಾರು 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಸೇರಿದಂತೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.