ಭಾರತ ಸೇನೆಯ ವಿಜಯಗಾಥೆ ಸರಣಿ: ಪಾಕ್‌ ಸೈನಿಕರ ಹೆಣಗಳ ರಾಶಿ ಮೇಲೆ ನಡೆದಿದ್ದೆವು!


Team Udayavani, Dec 16, 2021, 10:05 AM IST

ಪಾಕ್‌ ಸೈನಿಕರ ಹೆಣಗಳ ರಾಶಿ ಮೇಲೆ ನಡೆದಿದ್ದೆವು!

ಭಾರತೀಯ ಸೇನೆಯ ಸೇವೆಗೆ ಸೇರಿದ ವರ್ಷದಲ್ಲೇ ಪಾಕ್‌ ವಿರುದ್ಧ ಯುದ್ಧ ಎದುರಿಸಿದ ಸೇನೆಯಲ್ಲಿದ್ದೆ. ಸೇವೆಯಿಂದ ನಿವೃತ್ತಿಯಾಗುವ ವರ್ಷಕ್ಕೆ ಮೊದಲು ಕಾರ್ಗಿಲ್‌ ಯುದ್ಧದಲ್ಲೂ ಪಾಲ್ಗೊಂಡು ಗೆದ್ದಿರುವ ಸಂತಸ ನನ್ನದು.

ಹೀಗೆಂದು ಅಪ್ರತಿಮ ದೇಶಾಭಿಮಾನದಿಂದ ಎದೆ ಯುಬ್ಬಿಸಿದವರು ಸೇನೆಯಲ್ಲಿನ ಸ್ಮರಣೀಯ ಸೇವೆಗೆ 12 ಪದಕ ಪಡೆದಿರುವ ನಿವೃತ್ತ ಸೇನಾ ಕ್ಯಾಪ್ಟನ್‌ ಬಸಲಿಂಗಪ್ಪ ಶಂಕ್ರಪ್ಪ ಖೋತ. ವಿಜಯಪುರ ಜಿಲ್ಲೆಯ ಸಿದ್ಧಾಪುರ ಕೆ. ಗ್ರಾಮದ ಇವರು 1970, ಜೂ.12ರಂದು ಮರಾಠಾ ಲೈಟ್‌ ಇನ್‌ಫೆಂಟ್ರಿ ಸೆಂಟರ್‌ನ 19ನೇ ಯುನಿಟ್‌ಗೆ ಸಿಪಾಯಿಯಾಗಿ ಸೇರ್ಪಡೆಯಾದರು. ಸೇವೆಗೆ ಸೇರಿದ ವರ್ಷದಲ್ಲೇ 1970, ಡಿ.3ರಂದು ದೇಶ ರಕ್ಷಣೆಗಾಗಿ ವೈರಿ ಪಾಕಿ ಸ್ಥಾನ ವಿರುದ್ಧ ಎದೆಯೊಡ್ಡಿ ನಿಲ್ಲುವ ಅವಕಾಶ ಬಂತು.

ಯುದ್ಧದ ಮಾತಿರಲಿ ಸೇನೆಯ ಪೂರ್ಣ ಪ್ರಮಾಣದ ಅನುಭವವೂ ಇಲ್ಲದ ಹಂತದಲ್ಲಿ ಪಾಕ್‌ ವಿರುದ್ಧ ಯುದ್ಧ ಎದುರಾಗಿತ್ತು. ಪ್ರಧಾನಿ ಇಂದಿರಾಗಾಂಧಿ  ಯುದ್ಧಕ್ಕೆ ಸನ್ನದ್ಧರಾಗುವಂತೆ ಘೋಷಿಸುತ್ತಲೇ ಭೈರಾಂಪುರದಿಂದ ಆರ್‌ಪಾರ್‌ ಪ್ರದೇಶಕ್ಕೆ ಬಿ.ಎಸ್‌. ಖೋತ ವರ್ಗವಾದರು. ಪಾಕ್‌ ಸೈನಿಕರ ಜತೆಗೆ ಬಾಂಗ್ಲಾ ಉಗ್ರರೂ ವಿರೋಧಿ ಪಾಳೆಯದಲ್ಲಿದ್ದರು. ಇವರ ತಂಡದಲ್ಲಿದ್ದ 11 ಜನರಲ್ಲಿ ಕಂಪೆನಿ ಕಮಾಂಡರ್‌ ಮಧುಕರ ಪಾಟೀಲ ಸೇರಿದಂತೆ 3 ಜನರು ಹುತಾತ್ಮರಾದಾಗ ಸಹಜವಾಗಿ ಯುವ ಸೈನಿಕ ಖೋತ ಅವರ ಎದೆಯಲ್ಲಿ ಭಯ ತುಂಬಿತ್ತು. ಆದರೆ ಇವರ ತಂಡದ ಹವಲ್ದಾರ್‌ ಕಾಂಬಳೆ ಅವರು ತನ್ನ ಇಡೀ ತಂಡಕ್ಕೆ ವೈರಿಗಳ ವಿರುದ್ಧ ಗೆಲ್ಲಲು ಆತ್ಮವಿಶ್ವಾಸ ತುಂಬಿದರು. ಆಗ ತಂಡದ ನಾಯಕ ವೆಂಕಟ ಚವ್ಹಾಣ ಅವರು ನೀಡಿದ ಕೆಚ್ಚೆದೆಯ ದೇಶಪ್ರೇಮದ ಮಾತುಗಳು ಎಂಎಲ್‌ಐಸಿ 19ನೇ ಯುನಿಟ್‌ ಬಾಂಗ್ಲಾ ಗಡಿಯಲ್ಲಿದ್ದ ಜೈಸೂರು ದಾಟಿ ವೈರಿಗಳನ್ನು ಸದೆಬಡಿಯುವಲ್ಲಿ ಯಶಸ್ಸು ತಂದುಕೊಟ್ಟಿತ್ತು.

ಇದನ್ನೂ ಓದಿ:ಎನ್‌ಕೌಂಟರ್‌: ಎ+ ಕೆಟಗರಿಯ ಹಿಜ್ಬುಲ್‌ ಉಗ್ರನ ಹತ್ಯೆ

ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆ ಪರಾಕ್ರಮ ಮೆರೆದಿತ್ತು. ಹೀಗಾಗಿ ವೈರಿ ಪಡೆಯ ಸಾವಿರಾರು ಸೈನಿಕರ ಹೆಣಗಳ ರಾಶಿ ದಾಟಿಕೊಂಡು ಢಾಕಾವರೆಗೂ ಮುನ್ನುಗ್ಗಿ ವಿಜಯ ಸಾಧಿಸಿದ್ದೇ ಒಂದು ರೋಚಕ ಅನುಭವ.

ಪಾಕ್‌ ವಿರುದ್ಧ ಯುದ್ಧ ಗೆದ್ದುದಲ್ಲದೇ ವೈರಿ ಪಾಳೆಯದ ಸುಮಾರು 6,000 ಯುದ್ಧ ಕೈದಿಗಳನ್ನು ಸೆರೆ ಹಿಡಿದಿದ್ದಕ್ಕೆ ಭಾರತ ಸರಕಾರ ಇವರ ಮೇಲೆ ಕಾಪ್ಟರ್‌ಗಳ ಮೂಲಕ ಹೂಮಳೆ ಸುರಿಸಿ ವಿಶೇಷ ಗೌರವ ನೀಡಿತ್ತು ಎಂದು ಹೆಮ್ಮೆ ಪಡುತ್ತಾರೆ ಕ್ಯಾ| ಖೋತ.

ಇದಲ್ಲದೇ 30 ವರ್ಷಗಳ ಸುದೀರ್ಘ‌ ಸೇವೆಯ ನಿವೃತ್ತಿ ಹಂತದಲ್ಲಿ 1999ರಲ್ಲಿ ಮತ್ತೆ ಕಾರ್ಗಿಲ್‌ ಯುದ್ಧ ಘೋಷಣೆ ಆಗಿತ್ತು. ಅರುಣಾಚಲ ಪ್ರದೇಶದಲ್ಲಿ ಸುಬೇದಾರ್‌ ಮೇಜರ್‌ ಆಗಿದ್ದ ಖೋತ್‌ ಅವರಿಗೆ ಕಾಶ್ಮೀರಕ್ಕೆ ವರ್ಗವಾಯಿತು. ಆಗಲೂ ಪಾಕ್‌ ವಿರುದ್ಧ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ್ದು, ಈ ಯುದ್ಧದಲ್ಲೂ ಖೋತ ದೇಶಕ್ಕಾಗಿ ತಮ್ಮ ಸೇವೆ ನೀಡಿದ್ದರು.

-ಜಿ.ಎಸ್‌. ಕಮತರ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.