ವೀಲ್ಚೇರ್ ರೋಮಿಯೋಗೆ ಸಿಕ್ಕ ರೆಸ್ಪಾನ್ಸ್ ಕಂಡು ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ..?
ನಟರಾಜ್ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿದ್ದರು.
Team Udayavani, May 30, 2022, 2:43 PM IST
ಬೆಂಗಳೂರು: ಇತ್ತೀಚೆಗೆ ನಟರಾಜ್ ನಿರ್ದೇಶನದ ವೀಲ್ ಚೇರ್ ರೋಮಿಯೋ ಸಖತ್ ಸದ್ದು ಮಾಡ್ತಾ ಇದೆ. ಗಾಂಧಿ ನಗರದ ಗಲ್ಲಿ ಗಲ್ಲಿಯಲ್ಲೂ ವೀಲ್ ಚೇರ್ ರೋಮಿಯೋ ಸಿನಿಮಾದ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿದೆ. ಈ ಸುದ್ದಿ ಅಭಿನಯ ಚಕ್ರವರ್ತಿ ಸುದೀಪ್ ಅವರ ಕಿವಿಗೂ ಬಿದ್ದಿದೆ. ಇದೇ ಖುಷಿಯಲ್ಲಿ ಸಿನಿಮಾದ ಬಗ್ಗೆ ಒಂದೆರಡು ಮಾತನಾಡಿ, ಬೆಸ್ಟ್ ವಿಷಸ್ ತಿಳಿಸಿದ್ದಾರೆ.
ಇದನ್ನೂ ಓದಿ:ಯುಪಿಎಸ್ ಸಿ ಫಲಿತಾಂಶ ಪ್ರಕಟ; ಮೊದಲ 4 ರ್ಯಾಂಕ್ ಮಹಿಳೆಯರಿಗೆ
ಸದ್ಯ ಸುದೀಪ್ ಅವರು ತಮ್ಮ ವಿಕ್ರಾಂತ್ ರೋಣಾ ಸಿನಿಮಾ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಇತ್ತೀಚೆಗೆ ರಾ..ರಾ..ರಕ್ಕಮ್ಮ ಹಾಡು ಕೂಡಾ ಹಿಟ್ ಆಗಿದೆ. ತಮ್ಮ ಸಿನಿಮಾ ತೆರೆಗೆ ಬರುವ ಸಮಯದಲ್ಲೂ ಇಂಡಸ್ಟ್ರಿಯವರ ಯಶಸ್ಸಿಗೆ ಹುಮ್ಮಸ್ಸು ತುಂಬುವುದನ್ನು ನಿರ್ಲಕ್ಷ್ಯ ಮಾಡಿಲ್ಲ. ವೀಲ್ ಚೇರ್ ರೋಮಿಯೋ ಬಗ್ಗೆ ಕೇಳಿ ಬರುತ್ತಿರುವ ಪಾಸಿಟಿವ್ ರೆಸ್ಪಾನ್ಸ್ ಬಗ್ಗೆ ಸುದೀಪ್ ಅವರು ಮಾತನಾಡಿದ್ದು, ಸಿನಿಮಾಗೆ ಬಗ್ಗೆ ಉತ್ತಮ ರೆಸ್ಪಾನ್ಸ್ ಕೇಳಿ ಬರುತ್ತಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲು ಎಂದು ಶುಭಕೋರಿದ್ದಾರೆ. ಜೊತೆಗೆ ನಿರ್ದೇಶಕ, ನಟ, ನಟಿಯನ್ನು ಟ್ಯಾಗ್ ಮಾಡಿದ್ದಾರೆ.
ಚಿತ್ರರಂಗದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಅನುಭವ ಪಡೆದ ನಟರಾಜ್ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆಯನ್ನು ಮೂಡಿಸಿದ್ದಾರೆ. ಟೈಟಲ್ ಗೆ ತಕ್ಕಂತೆ ವೀಲ್ ಚೇರ್ ಮೇಲೆಯೇ ಕೂತು ನಟನ ಕಥೆ ಸಾಗುತ್ತದೆ.
ಆತನ ಬಾಳಿಗೆ ಬೆಳಕಾಗಲೂ ಅಂಧ ಹುಡುಗಿಯೊಬ್ಬಳ ಎಂಟ್ರಿಯಾಗುವ, ಒಂದಷ್ಟು ಚಾಲೆಂಜಸ್ ಇರುವ ಜೀವನವೇ ವೀಲ್ ಚೇರ್ ರೋಮಿಯೋ ಸಿನಿಮಾದ ಕಥೆ. ಈ ಸಿನಿಮಾದಲ್ಲಿ ಸಂಭಾಷಣೆ ಹೈಲೇಟ್. ಸದ್ಯ ರಾಜ್ಯಾದ್ಯಂತ ರಿಲೀಸ್ ಆದಾಗಿನಿಂದ ಒಳ್ಳೆಯ ಸಿಬಿಮಾವೆಂದೆ ಎಲ್ಲರಿಂದ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…