ಎಚ್ಡಿಕೆಗೆ ಬಿಜೆಪಿಯ ಆಂತರಿಕ ಮಾಹಿತಿ ಕೊಡುತ್ತಿರುವವರು ಯಾರು?
Team Udayavani, Feb 9, 2023, 6:15 AM IST
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿಯ ಆಂತರಿಕ ವಿಚಾರಗಳ ಬಗೆಗೆ ಮಾಹಿತಿ ನೀಡುತ್ತಿರುವವರು ಯಾರು? ಎಂಬ ಪ್ರಶ್ನೆ ಇದೀಗ ಬಿಜೆಪಿ ಪಾಳಯವನ್ನು ಕಾಡತೊಡಗಿದೆಯಂತೆ. ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೆ ಟವಲ್ ಹಾಕಿರುವವರದೇ ಈ ಕೆಲಸ ಎಂಬುದು ನಂಬಲರ್ಹ ಮೂಲಗಳ ಮಾಹಿತಿ. ಈ ನಾಯಕರು ಕುಮಾರಸ್ವಾಮಿ ಅವರ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದಲ್ಲಿನ ಎಲ್ಲ ಆಗು-ಹೋಗುಗಳು ಮತ್ತು ಬೆಳವಣಿಗೆಗಳ ಬಗೆಗೆ ಕ್ಷಣಕ್ಷಣದ ವರದಿ ಒಪ್ಪಿಸುತ್ತಿದ್ದಾರೆ ಎನ್ನುತ್ತಿವೆ ಈ ಮೂಲಗಳು.
ಇಷ್ಟು ಮಾತ್ರವಲ್ಲದೆ ಸರಕಾರದ ಮಟ್ಟದಲ್ಲಿ ಕೈಗೊಳ್ಳಲಾಗುವ ತೀರ್ಮಾನಗಳ ಬಗ್ಗೆಯೂ ಜೆಡಿಎಸ್ ನಾಯಕರಿಗೆ ಬಿಜೆಪಿ ಮುಖಂಡರೇ ತಿಳಿಸುತ್ತಿದ್ದಾರಂತೆ. ಈ ವಿಚಾರ ಬಿಜೆಪಿ ಮತ್ತು ಪಕ್ಷದ ಹಿರಿಯ ನಾಯಕರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆಯಂತೆ.
ಪಕ್ಷದ ಕೆಲವು ನಾಯಕರಂತೂ ವರಿಷ್ಠರು ಅಥವಾ ಸರಕಾರದ ಮಟ್ಟದಲ್ಲಾಗುವ ನಿರ್ಧಾರಗಳ ಬಗೆಗೆ ತಮಗೆ ಯಾವುದೇ ಮಾಹಿತಿ ಲಭಿಸದೇ ಇರುವಾಗ ಕುಮಾರಸ್ವಾಮಿ ಅವರಿಗೆ ಅಷ್ಟೊಂದು ಬೇಗ ಪಕ್ಷದ ವಿಚಾರಗಳು ಹೇಗೆತಿಳಿಯುತ್ತವೆ ಎಂದು ತಲೆಕೆಡಿಸಿಕೊಳ್ಳಲಾರಂಭಿಸಿದ್ದಾರಂತೆ.
ಪಕ್ಷದ ಆಂತರಿಕ ವಿಚಾರಗಳು ಸೋರಿಕೆಯಾಗುತ್ತಿರುವುದು ಮತ್ತು ಇದರಲ್ಲಿ ಪಕ್ಷದ ಕೆಲವು ಮುಖಂಡರೇ ಶಾಮೀಲಾಗಿರುವ ಬಗೆಗೆ ಮಾಹಿತಿಗಳು ಲಭಿಸಿದ ಬಳಿಕ ಬಿಜೆಪಿ ನಾಯಕರು ಮದ್ದು ಅರೆಯುವ ಕೆಲಸಕ್ಕೆ ಇಳಿದಿದ್ದಾರಂತೆ. ಮಾಹಿತಿ ಸೋರಿಕೆಯ ಮೂಲ ಕೆದಕುವ ಕೆಲಸ ಆರಂಭಿಸಿದ್ದಾರಂತೆ. ಈ ಎಲ್ಲ ಅಂತೆಕಂತೆಗಳ ನಡುವೆ ಈ ಮಾಹಿತಿಯೂ ಸೋರಿಕೆಯಾದದ್ದು ಹೇಗೆ? ಎಂಬುದು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ