ಮಹಿಳಾ ಕ್ರಿಕೆಟ್‌ನ ಭರವಸೆಯ ಕಿರಣ; ಶಫಾಲಿ ವರ್ಮಾ


Team Udayavani, Jun 11, 2020, 7:45 PM IST

ಮಹಿಳಾ ಕ್ರಿಕೆಟ್‌ನ ಭರವಸೆಯ ಕಿರಣ; ಶಫಾಲಿ ವರ್ಮಾ

ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾಟದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಅರ್ಧ ಶತಕ ಬಾರಿಸಿದ ಭಾರತದ ಕ್ರೀಡಾಪಟು ಯಾರೆಂದು ಕೇಳಿದರೆ ಬಹುತೇಕರ ಉತ್ತರ ಸಚಿನ್‌ ತೆಂಡೂಲ್ಕರ್‌. ನೀವೂ ಹಾಗೆಂದುಕೊಂಡರೆ ಮಾತ್ರ ನಿಮ್ಮ ಉತ್ತರ ತಪ್ಪು. ಈ ಸಾಧನೆ ಮಾಡಿದವರು ಮಹಿಳಾ ಕ್ರಿಕೆಟ್‌ ಆಟಗಾರ್ತಿ ಶಫಾಲಿ ವರ್ಮಾ.

ತಮ್ಮ 16 ವರ್ಷ 216 ದಿನಗಳ ಪ್ರಾಯದಲ್ಲಿದ್ದ ಸಚಿನ್‌ ತೆಂಡೂಲ್ಕರ್‌ 1989ರಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಪಂದ್ಯಾಟದಲ್ಲಿ 59 ರನ್‌ಗಳನ್ನು ಭಾರಿಸಿದ್ದರು. ಇದಾದ 30 ವರ್ಷಗಳ ಬಳಿಕ ಶಫಾಲಿ ಶರ್ಮಾ ಈ ದಾಖಲೆ ಮುರಿದಿದ್ದು ತಮ್ಮ 15 ವರ್ಷ 285 ದಿನಗಳ ಪ್ರಾಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ 73 ರನ್‌ಗಳನ್ನು ಬಾರಿಸುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಆದರೆ ಕೇವಲ 18 ದಿನಗಳ ಅಂತರದಲ್ಲಿ ಯುಎಇಯ ಕವಿಶಾ ಎಗೊಡೇಜ್‌ ಅವರ ದಾಖಲೆ ಮುರಿಯುವ ಅವಕಾಶ ಇವರ ಕೈತಪ್ಪಿತು.

ಕವಿಶಾ ಅವರು ತಮ್ಮ 15 ವರ್ಷ 267 ದಿನಗಳ ಪ್ರಾಯದಲ್ಲಿ ಮಲೇಷ್ಯಾ ವಿರುದ್ಧ 57 ರನ್‌ಗಳನ್ನು ಬಾರಿಸುವ ಮೂಲಕ ದಾಖಲೆ ಮಾಡಿದ್ದರು.

ಜನವರಿ 28, 2003ರಲ್ಲಿ ಜನಿಸಿದ ಶಫಾಲಿ ಶರ್ಮ, 2019ರ ಸೆಪ್ಟೆಂಬರ್‌ 24ರಂದು ಸೌತ್‌ಆಫ್ರಿಕಾ ವಿರುದ್ಧ ಸೂರತ್‌ನಲ್ಲಿ ನಡೆದ ಟಿಟ್ವೆಂಟಿ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ದೀಪ್ತಿ ಶರ್ಮಾ ಅವರ ಬೌಲಿಂಗ್‌ನ ಮ್ಯಾಜಿಕ್‌ನಿಂದಾಗಿ ಆ ಪಂದ್ಯವನ್ನು ಭಾರತ ಗೆದ್ದಿತ್ತಾದರೂ ನಾಲ್ಕು ಬಾಲ್‌ಗ‌ಳನ್ನು ಎದುರಿಸಿದ್ದ ಶಫಾಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಖಾತೆ ತೆರೆಯುವಲ್ಲಿ ವಿಫ‌ಲರಾಗಿದ್ದರು.

ಇದಾದ ಕೆಲ ಸಮಯದಲ್ಲಿಯೇ ವೆಸ್ಟ್‌ಇಂಡೀಸ್‌ ವಿರುದ್ಧ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದರು.

ಈ ವೇಳೆಗಾಗಲೇ ಆರಂಭಿಕ ಆಟಗಾರರಾಗಿ ತಮ್ಮದೇ ಆದ ಹೆಸರು ಸಂಪಾದಿಸಿದ್ದ ಸ್ಮತಿ ಮಂದಣ್ಣ, ಐಸಿಸಿ ವರ್ಷದ ಮಹಿಳಾ ಕ್ರೀಡಾಪಟುವಾಗಿಯೂ ಹೆಸರು ಪಡೆದಿದ್ದರು. ಶಫಾಲಿ ಶರ್ಮಾ ಇವರಿವರಿಗೆ ಉತ್ತಮ ಜತೆಯಾದರು. ವೆಸ್ಟ್‌ಇಂಡೀಸ್‌ ವಿರುದ್ಧ ತಮ್ಮ ಮೊದಲ ಟಿಟ್ವೆಂಟಿ ಪಂದ್ಯದಲ್ಲೇ 73 ರನ್‌ ಬಾರಿಸುವ ಮೂಲಕ ಸ್ಮತಿ ಮಂದಣ್ಣ ಅವರ ಆಟಕ್ಕೆ ಜತೆಯಾಗಿದ್ದರು. ಆರಂಭಿಕ ಆಟಗಾರರಾದ ಇವರ ಜತೆಯಾಟದ 143ರನ್‌ಗಳು ಮಹಿಳಾ ಟಿಟ್ವೆಂಟಿಯಲ್ಲಿ ಹೊಸ ದಾಖಲಾಯಿತು.

ಟಾಪ್ ನ್ಯೂಸ್

shirwa

ಕುರ್ಕಾಲು:ಯುವತಿ ನಾಪತ್ತೆ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

cm-bommai

ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ

ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್

ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

hd-kumarswamy

26ರಂದು ಪಂಚರತ್ನ ಸಮಾರೋಪ ಸಮಾವೇಶ: ಎಚ್.ಡಿ.ಕುಮಾರಸ್ವಾಮಿ

ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್

ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

tdy-19

ಹಬ್ಬದ ದಿನ ದೋಸೆ ಕದ್ದು ತಿಂದ ನೆನಪು

ಪುರಾಣಗಳ ಸತ್ವ, ಬೆಳಕಿನ ಮಹತ್ವ ತಿಳಿಸುವ ಸಂಭ್ರಮದ ದೀಪಾವಳಿ 

ದೀಪಾವಳಿ ವಿಶೇಷ ಲೇಖನ: ಪುರಾಣಗಳ ಸತ್ವ, ಬೆಳಕಿನ ಮಹತ್ವ ತಿಳಿಸುವ ಸಂಭ್ರಮದ ದೀಪಾವಳಿ 

tdy-17

ಕತ್ತಲೆಯಿಂದ ಬೆಳಕಿನೆಡೆಗೆ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಹಾವೇರಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸರು

ಹಾವೇರಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸರು

shirwa

ಕುರ್ಕಾಲು:ಯುವತಿ ನಾಪತ್ತೆ

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತಸ್ವೀಪ್‌ ಚಿತ್ತ!

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್‌ ಚಿತ್ತ!

ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !

ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.