ವಿಶ್ವ ಪರಿಸರ ದಿನಕ್ಕೊಂದು ಜಾಗೃತಿ ಗೀತೆ
ಸಿಎಂ ಬಿಡುಗಡೆ, ವಿಜಯಪ್ರಕಾಶ್-ಅನನ್ಯಾಭಟ್ ಹಾಡಿಗೆ ಮೆಚ್ಚುಗೆ
Team Udayavani, Jun 8, 2020, 4:23 AM IST
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದು ಪರಿಸರ ಕುರಿತು ಜಾಗೃತಿ ಮೂಡಿಸುವ ಹಾಡನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ ಬಳಿಕ ಹಾಡು ಕೇಳಿ ಎಲ್ಲರೂ ಪರಿಸರದ ಬಗ್ಗೆ ಕಾಳಜಿ ವಹಿಸೋಣ ಎಂದಿದ್ದಾರೆ.
ಅಂದಹಾಗೆ, ಸಂಗೀತ ನಿರ್ದೇಶಕ ವೀರ್ಸಮರ್ಥ್ ಅವರು ರಾಗ ಸಂಯೋಜಿಸಿರುವ “ಜಡದಿಂದ ತಳೆದ ಜೀವ, ಜಡವಾಗದಿರಲಿ, ಕಾಲದೊಡನೆ ಬೆಳೆದ ಜೀವ, ಕಾಲವಾಗದಿರಲಿ ವಿಕಾಸದ ಹಾದಿಯಲ್ಲಿ ಅರಳೀತೀ ಜಗತ್ತು… ಎಚ್ಚರ ಆಗದಿದ್ದರೆ ಈಗ ಭುವಿಗೆ ಆಪತ್ತು…’ ಎಂಬ ಗೀತೆಗೆ ಭರಪೂರ ಮೆಚ್ಚುಗೆಯೂ ಸಿಕ್ಕಿದೆ. ಇನ್ನು ಈ ಜಾಗೃತಿ ಗೀತೆಗೆ ಹಿನ್ನೆಲೆ ಗಾಯಕರಾದ ವಿಜಯಪ್ರಕಾಶ್ ಮತ್ತು ಅನನ್ಯಾಭಟ್ ಧ್ವನಿಯಾಗಿದ್ದಾರೆ.
ವೀರ್ಸಮರ್ಥ್ ಅವರೂ ಸಹ ಧ್ವನಿಗೂಡಿಸಿದ್ದಾರೆ. ಈ ಹಾಡನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆಯಾಗಿದ್ದು, ಉತ್ತಮ ಮೆಚ್ಚುಗೆ ಸಿಗುತ್ತಿದೆ. ಹಾಡಿಗೆ ಡಾ.ಪ್ರಸನ್ನಕುಮಾರ್ ಅವರ ಸಾಹಿತ್ಯವಿದೆ. ಐಎಎಸ್ ಅಧಿಕಾರಿ ಶ್ರೀನಿವಾಸಲು ಈ ಜಾಗೃತಿ ಮೂಡಿಸುವ ಹಾಡಿಗೆ ಮಾರ್ಗದರ್ಶನ ಬೆಂಬಲ ನೀಡಿದ್ದಾರೆ. ಸಂತೋಷ್ ಸುತಾರ್ ಅವರ ಪರಿಕಲ್ಪನೆಯೊಂದಿಗೆ ಹಾಡು ಮೂಡಿಬಂದಿದೆ.
ಈ ಹಾಡಿಗೆ ಸಂಜೀವ ಬೆಳವಲ್, ಮಂಜುನಾಥ್ ಇತರರು ಸಹಕಾರ ನೀಡಿದ್ದಾರೆ. ಸದ್ಯಕ್ಕೆ ವಿಜಯಪ್ರಕಾಶ್ ಮತ್ತು ಅನನ್ಯಾಭಟ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡಿಗೆ ಎಲ್ಲೆಡೆಯಿಂದಲೂ ಸಿಕ್ಕಾಪಟ್ಟೆ ಮೆಚ್ಚುಗೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ