ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು 2ನೇ ಸ್ಥಾನಕ್ಕೇರಿದ ರಾಜಸ್ಥಾನ್‌ ರಾಯಲ್ಸ್‌

ಕ್ವಾಲಿಫೈಯರ್‌ನಲ್ಲಿ ಸೋತರೂ ಫೈನಲ್‌ಗೇರಲು ಸಂಜು ಸ್ಯಾಮ್ಸನ್‌ ಪಡೆಗೆ ಇನ್ನೊಂದು ಅವಕಾಶ

Team Udayavani, May 20, 2022, 11:28 PM IST

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು 2ನೇ ಸ್ಥಾನಕ್ಕೇರಿದ ರಾಜಸ್ಥಾನ್‌ ರಾಯಲ್ಸ್‌

ಮುಂಬೈ: ಅಗ್ರಸ್ಥಾನಿಯಾಗಿ ಐಪಿಎಲ್‌ ಪ್ಲೇಗೇರಲು ಶುಕ್ರವಾರದ ಪಂದ್ಯ ರಾಜಸ್ಥಾನ್‌ ರಾಯಲ್ಸ್‌ಗೆ ಮಹತ್ವದ್ದಾಗಿತ್ತು. ಇದರಲ್ಲಿ ರಾಜಸ್ಥಾನ್‌ ಯಶಸ್ಸು ಪಡೆದು 2ನೇ ಸ್ಥಾನಕ್ಕೇರಿದೆ. ಇದರಿಂದ ರಾಜಸ್ಥಾನ್‌ ಒಂದು ವೇಳೆ ಕ್ವಾಲಿಫೈಯರ್‌ನಲ್ಲಿ ಸೋತರೂ, ಫೈನಲ್‌ಗೇರಲು ಇನ್ನೊಂದು ಅವಕಾಶ ಪಡೆಯಲಿದೆ. ಲಕ್ನೋ 3ನೇ ಸ್ಥಾನಕ್ಕೆ ಕುಸಿದು ಈ ಅವಕಾಶ ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಸೋತ ಚೆನ್ನೈ ಕಿಂಗ್ಸ್‌ಗೆ ಯಾವುದೇ ನಷ್ಟವಾಗಿಲ್ಲ.

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟಿಗೆ 150 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ರಾಜಸ್ಥಾನ್‌ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 151 ರನ್‌ ಗಳಿಸಿತು. ರಾಜಸ್ಥಾನ್‌ ಪರ ಯಶಸ್ವಿ ಜೈಸ್ವಾಲ್‌ (59), ಆರ್‌.ಅಶ್ವಿ‌ನ್‌ (40) ಅತ್ಯುತ್ತಮ ಬ್ಯಾಟಿಂಗ್‌ ಮಾಡಿದರು. ಚೆನ್ನೈ ಪರ ಪ್ರಶಾಂತ್‌ ಸೋಲಂಕಿ 20 ರನ್‌ ನೀಡಿ 2 ವಿಕೆಟ್‌ ಪಡೆದರು.

ಮಿಂಚಿದ ಮೊಯಿನ್‌ ಅಲಿ: ಮೊದಲು ಬ್ಯಾಟಿಂಗ್‌ ಚೆನ್ನೈ ಪರ ಮೊಯಿನ್‌ ಅಲಿ ಮಿಂಚಿದರು. ಅವರು 93 ರನ್‌ ಚಚ್ಚಿದರು. ಮೊದಲ 6 ಓವರ್‌ಗಳಲ್ಲಿ 75 ರನ್‌ ಸಿಡಿಸಿದ ಧೋನಿ ಪಡೆಗೆ, ಅನಂತರದ 75 ರನ್‌ ಗಳಿಸಲು 14 ಓವರ್‌ ಬೇಕಾಯಿತೆಂಬುದೊಂದು ವಿಪರ್ಯಾಸ. ರಾಜಸ್ಥಾನ್‌ ಬೌಲರ್ ಅಷ್ಟರ ಮಟ್ಟಿಗೆ ಬಿಗಿ ದಾಳಿ ಸಂಘಟಿಸಿ ಚೆನ್ನೈಗೆ ಕಡಿವಾಣ ಹಾಕಿ ಪಂದ್ಯಕ್ಕೆ ಮರಳಿದರು. ಸ್ಫೋಟಕ ಆರಂಭ ಒದಗಿಸಿದ ಮೊಯಿನ್‌ ಅಲಿಗೆ ಶತಕ ಒಲಿಯದೇ ಹೋಯಿತು. ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಇವರ ವಿಕೆಟ್‌ ಉರುಳಿತು. 57 ಎಸೆತ ಎದುರಿಸಿದ ಅಲಿ 13 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿದರು.

ಚೆನ್ನೈ ಸ್ಫೋಟಕ ಆರಂಭ: ಟಾಸ್‌ ಗೆದ್ದ ಚೆನ್ನೈ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ಮೊದಲ ಓವರ್‌ನಲ್ಲೇ ಋತುರಾಜ್‌ ಗಾಯಕ್ವಾಡ್‌ (2) ಅವರನ್ನು ಕಳೆದುಕೊಂಡಿತು. ಟ್ರೆಂಟ್‌ ಬೌಲ್ಟ್ ವಿಕೆಟ್‌ ಟೇಕರ್‌. ಪ್ರಸಿದ್ಧ್ ಕೃಷ್ಣ ಅವರ ಮೊದಲ ಓವರ್‌ ಕೂಡ ಬಿಗಿಯಾಗಿತ್ತು. 2 ಓವರ್‌ಗಳಲ್ಲಿ ಚೆನ್ನೈಗೆ ಗಳಿಸಲು ಸಾಧ್ಯವಾದದ್ದು ಮೂರೇ ರನ್‌.

ಮುಂದಿನದ್ದೆಲ್ಲ ಮೊಯಿನ್‌ ಅಲಿ ಆರ್ಭಟ. ಇವರಿಗೆ ಡೆವೋನ್‌ ಕಾನ್ವೆ ಉತ್ತಮ ಬೆಂಬಲವಿತ್ತರು. ರನ್‌ ಪ್ರವಾಹದ ರೀತಿಯಲ್ಲಿ ಹರಿದು ಬರತೊಡಗಿತು. ಬೌಲ್ಟ್ ಅವರ ದ್ವಿತೀಯ ಓವರ್‌ನಲ್ಲಿ ಕಾನ್ವೆ 12 ರನ್‌ ಬಾರಿಸಿದರು. ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ 18 ರನ್‌ ಸೋರಿಹೋಯಿತು. ಮೊಯಿನ್‌ ಅಲಿ 3 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿದರು. ಆರ್‌. ಅಶ್ವಿ‌ನ್‌ ಅವರ ಸ್ಪಿನ್‌ ಕೂಡ ನಡೆಯಲಿಲ್ಲ. ಅವರ ಮೊದಲ ಓವರ್‌ನಲ್ಲಿ ಬರೋಬ್ಬರಿ 16 ರನ್‌ ಬಂತು.

ಬೌಲ್ಟ್ ಅವರ 3ನೇ ಓವರ್‌ನಲ್ಲಂತೂ 26 ರನ್‌ ಸಿಡಿಯಲ್ಪಟ್ಟಿತು. ಎಲ್ಲವೂ ಅಲಿ ಬ್ಯಾಟ್‌ನಿಂದಲೇ ಬಂತು. ಮೊದಲ ಎಸೆತವನ್ನು ಸಿಕ್ಸರ್‌ಗೆ ರವಾನಿಸಿದ ಅಲಿ, ಬಳಿಕ ಸತತ 5 ಬೌಂಡರಿ ಬಾರಿಸಿ ಮೆರೆದರು. 19 ಎಸೆತಗಳಲ್ಲಿ ಅವರ ಅರ್ಧಶತಕ ಪೂರ್ತಿಗೊಂಡಿತು. ಪವರ್‌ ಪ್ಲೇಯಲ್ಲಿ ಚೆನ್ನೈ ಒಂದಕ್ಕೆ 75 ರನ್‌ ಗಳಿಸಿ ಬೃಹತ್‌ ಮೊತ್ತದ ಸೂಚನೆ ನೀಡಿತು. ಕಾನ್ವೆ-ಅಲಿ ದ್ವಿತೀಯ ವಿಕೆಟಿಗೆ 6.3 ಓವರ್‌ಗಳಿಂದ 83 ರನ್‌ ಪೇರಿಸಿ ರಾಜಸ್ಥಾನವನ್ನು ನಡುಗಿಸಿದರು. ಆದರೆ ಇಲ್ಲಿಂದ ಮುಂದೆ ರಾಜಸ್ಥಾನ್‌ ಬೌಲರ್‌ಗಳ ಹಿಡಿತ ಬಿಗಿಗೊಂಡಿತು.

ಕಾನ್ವೆ ಬೆನ್ನಲ್ಲೇ ಜಗದೀಶನ್‌ (1), ಅಂಬಾಟಿ ರಾಯುಡು (3) ಪೆವಿಲಿಯನ್‌ ಸೇರಿಕೊಂಡರು. 10 ರನ್‌ ಅಂತರದಲ್ಲಿ 3 ವಿಕೆಟ್‌ ಬಿತ್ತು. 7ರಿಂದ 10ನೇ ಓವರ್‌ ಅವಧಿಯಲ್ಲಿ ಚೆನ್ನೈ ಗಳಿಸಿದ್ದು ಕೇವಲ 19 ರನ್‌. 15 ಓವರ್‌ ಮುಕ್ತಾಯಕ್ಕೆ 4ಕ್ಕೆ 117 ರನ್ನಷ್ಟೇ ಆಗಿತ್ತು. ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಅಲಿಗೆ ನಾಯಕ ಧೋನಿ ಜತೆಯಾದರು. ಆದರೆ ಆರಂಭದ ಅಬ್ಬರ ಕಂಡುಬರಲಿಲ್ಲ. ಅಲಿ ಹಾಗೂ ಚೆನ್ನೈಗೆ ಕಡಿವಾಣ ಹಾಕುವಲ್ಲಿ ರಾಜಸ್ಥಾನ್‌ ಬೌಲರ್ ಧಾರಾಳ ಯಶಸ್ಸು ಕಂಡಿದ್ದರು. 5ನೇ ವಿಕೆಟಿಗೆ 51 ರನ್‌ ಬಂತಾದರೂ ಇದಕ್ಕೆ 52 ಎಸೆತ ಬೇಕಾಯಿತು. ಅಲಿ ಹೊರತುಪಡಿಸಿದರೆ 26 ರನ್‌ ಮಾಡಿದ ಧೋನಿ ಅವರದೇ ಹೆಚ್ಚಿನ ಗಳಿಕೆ. ರಾಜಸ್ಥಾನ್‌ ಪರ ಮೆಕಾಯ್‌ ಮತ್ತು ಚಹಲ್‌ ಅಮೋಘ ದಾಳಿ ಸಂಘಟಿಸಿದರು.

ದುಬೆ ಬದಲು ರಾಯುಡು: ಎರಡೂ ತಂಡಗಳು ಒಂದೊಂದು ಬದಲಾವಣೆಯೊಂದಿಗೆ ಆಡಲಿಳಿದವು. ಚೆನ್ನೈ ಪರ ಅಂಬಾಟಿ ರಾಯುಡು ಅವಕಾಶ ಪಡೆದರು. ಶಿವಂ ದುಬೆ ಹೊರಗುಳಿದರು. ಕೆಕೆಆರ್‌ ಶಿಮ್ರಾನ್‌ ಹೆಟ್‌ಮೈರ್‌ ಅವರನ್ನು ಸೇರಿಸಿಕೊಂಡಿತು. ಇವರಿಗಾಗಿ ಜಾಗ ಬಿಟ್ಟವರು ಜಿಮ್ಮಿ ನೀಶಮ್‌.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ ಕಿಂಗ್ಸ್‌ 20 ಓವರ್‌, 150/6 (ಮೊಯಿನ್‌ ಅಲಿ 93, ಚಹಲ್‌ 26ಕ್ಕೆ 2, ಒಬೆದ್‌ ಮೆಕಾಯ್‌ 20ಕ್ಕೆ 2). ರಾಜಸ್ಥಾನ್‌ 20 ಓವರ್‌, 19.4 ಓವರ್‌, 151/5 (ಜೈಸ್ವಾಲ್‌ 59, ಆರ್‌.ಅಶ್ವಿ‌ನ್‌ 40, ಪ್ರಶಾಂತ್‌ ಸೋಲಂಕಿ 20ಕ್ಕೆ 2)

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.