ಗೇಲ್ ಈಗ ಸಾವಿರ ಸಿಕ್ಸರ್ ಒಡೆಯ:ಆರ್ ಸಿಬಿ, ಪಂಜಾಬ್ ಪರ ಗೇಲ್ ಎಷ್ಟು ಸಿಕ್ಸರ್ ಬಾರಿಸಿದ್ದಾರೆ?
Team Udayavani, Oct 31, 2020, 11:16 AM IST
ಅಬುಧಾಬಿ: ಯುನಿವರ್ಸಲ್ ಬಾಸ್, ಸಿಕ್ಸರ್ ಕಿಂಗ್, ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಕ್ರಿಸ್ ಗೇಲ್ ಶುಕ್ರವಾರದ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ದ ಮೈದಾನದ ಮೂಲೆಗೆ ಸಿಕ್ಸರ್ ಅಟ್ಟಿದ ಗೇಲ್ ಟಿ20 ಕ್ರಿಕೆಟ್ ನಲ್ಲಿ ಒಂದು ಸಾವಿರ ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಸೇರಿದಂತೆ ವಿಶ್ವದೆಲ್ಲೆಡೆಯ ಟಿ20 ಫ್ರಾಂಚೈಸಿ ಕೂಟಗಳ ಪರವಾಗಿ ಆಡುವ ಕ್ರಿಸ್ ಗೇಲ್ ಸಿಕ್ಸರ್ ಗಳ ಮಳೆಯನ್ನೇ ಸುರಿಸುತ್ತಾರೆ. ರಾಜಸ್ಥಾನ ವಿರುದ್ಧದ ಶುಕ್ರವಾರದ ಪಂದ್ಯದಲ್ಲಿ ಗೇಲ್ ಎಂಟು ಸಿಕ್ಸರ್ ಬಾರಿಸಿ ಮಿಂಚಿದರು. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಒಂದು ಸಾವಿರ ಸಿಕ್ಸರ್ ಬಾರಿಸಿದ ಆಟಗಾರನಾಗಿ ಮೂಡಿಬಂದರು. ಈ ಸಾಧನೆ ಮಾಡಿದ ಏಕೈಕ ಆಟಗಾರ ಕ್ರಿಸ್ ಗೇಲ್.
ಐಪಿಎಲ್ ನಲ್ಲಿ ಇದುವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಆಡಿರುವ ಕ್ರಿಸ್ಟೋಫರ್ ಹೆನ್ರಿ ಗೇಲ್ ಎಲ್ಲಾ ತಂಡಗಳ ಪರವಾಗಿ ಮಿಂಚಿದ್ದಾರೆ. ಇದರಲ್ಲಿ ಆರ್ ಸಿಬಿಯ ಪರವಾಗಿ ಗೇಲ್ ಹೆಚ್ಚು ಸಿಕ್ಸರ್ ಬಾರಿಸಿದ್ದಾರೆ.
ಇದನ್ನೂ ಓದಿ:ಪ್ಲೇ ಆಫ್ ಸ್ಥಾನ: ರಾಜಸ್ಥಾನ್ ವಿರುದ್ಧ ಪಂಜಾಬ್ ಸೋತಿದ್ದರಿಂದ ಶುರುವಾಗಿದೆ ತೀವ್ರ ಲೆಕ್ಕಾಚಾರ
ಹಾಗಾದರೆ ಕ್ರಿಸ್ ಗೇಲ್ ಯಾವ ತಂಡದ ಪರ ಎಷ್ಟು ಸಿಕ್ಸರ್ ಬಾರಿಸಿದ್ದಾರೆ? ಇಲ್ಲಿದೆ ಪಟ್ಟಿ
ಆರ್ಸಿಬಿ 263
ಜಮೈಕಾ ತಲ್ಲವಾಸ್ 124
ವೆಸ್ಟ್ ಇಂಡೀಸ್ 105
ಕಿಂಗ್ಸ್ ಇಲವೆನ್ ಪಂಜಾಬ್ 84
ರಂಗ್ಪುರ್ ರೈಡರ್ಸ್ 60
ಸಾಮರ್ ಸೆಟ್ 42
ಸೈಂಟ್ ಕಿಟ್ಸ್ ಮತ್ತು ಎನ್ಪಿ 38
ಸಿಡ್ನಿ ಥಂಡರ್ 31
ಬಲ್ಖ್ ಲೆಜೆಂಡ್ಸ್ 27
ಬರಿಸಲ್ ಬರ್ನರ್ಸ್ 26
ಜಮೈಕಾ 26
ಕೆಕೆಆರ್ 26
ಮೆಲ್ಬರ್ನ್ ರೆನೆಗೆಡ್ಸ್ 20
ಮ್ಯಾಟಾಬೆಲೆಲ್ಯಾಂಡ್ ಟಸ್ಕರ್ಸ್ 19
ವೆಸ್ಟ್ರನ್ ಆಸ್ಟ್ರೇಲಿಯಾ 17
ಕರಾಚಿ ಕಿಂಗ್ಸ್ 14
ಬರಿಸಲ್ ಬುಲ್ಸ್ 12
ಚಟ್ಟೋಗ್ರಾಮ್ ಚಾಲೆಂಜರ್ಸ್ 12
ಢಾಕಾ ಗ್ಲಾಡಿಯೇಟರ್ಸ್ 12
ಲಯನ್ಸ್ 12
ಚಿತ್ತಗಾಂಗ್ ವೀಕಿಂಗ್ಸ್ 10
ಜೋಝಿ ಸ್ಟಾರ್ಸ್ 8
ಲಾಹೋರ್ ಕ್ವಾಲಂಡರ್ಸ್ 8
ಸ್ಟ್ಯಾಂಡ್ಫೋರ್ಡ್ ಸೂಪರ್ ಸ್ಟಾರ್ಸ್ 5
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್