ಕೆ.ಎಲ್.ರಾಹುಲ್ ಭವಿಷ್ಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಬಹುದು : ಗಾವಸ್ಕರ್
Team Udayavani, Sep 19, 2020, 2:12 PM IST
ನವದೆಹಲಿ : ಈ ಬಾರಿಯ ಐಪಿಎಲ್ ನಲ್ಲಿ ಕೆ.ಎಲ್. ರಾಹುಲ್ ಖಂಡಿತವಾಗಿ ಒಳ್ಳೆ ಪ್ರದರ್ಶನ ನೀಡುವ ವಿಶ್ವಾಸವಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿ ಜವಬ್ದಾರಿ ನಿಭಾಯಿದ್ರೆ ಅವರು ಮುಂದೆ ಭಾರತ ತಂಡದ ಉಪನಾಯಕನಾಗಿ ಕರ್ತವ್ಯ ನಿಭಾಯಿಸಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.
ರಾಹುಲ್ ಗೆ ಇದೊಂದು ಒಳ್ಳೆಯ ಅವಕಾಶ, ರನ್ ಗಳಿಸುವುದರ ಜೊತೆ ಜೊತೆಗೆ ತಂಡವನ್ನು ಹೇಗೆ ಮುನ್ನೆಡಿಸಿಕೊಂಡು ಹೋಗುವ ಅವರ ಸಾಮಾರ್ಥ್ಯವನ್ನು ಕಾಣಬಹುದು. ರಾಹುಲ್ ತನ್ನ ಆಟ ಹಾಗೂ ಕಪ್ತಾನನ ಜವಾಬ್ದಾರಿ ಎರಡನ್ನೂ ಸಮಬಲವಾಗಿ ನಿಭಾಯಿದ್ರೆ ಅವರು ಮುಂದೆ ಭಾರತ ತಂಡದ ಉಪನಾಯಕನ ಸ್ಥಾನದಲ್ಲಿ ಕಾಣಬಹುದೆಂದು ಗಾವಸ್ಕರ್ ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ತಂಡದ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ ಅಂಥ ಅನುಭವಿಯ ಬೆಂಬಲೂ ರಾಹುಲ್ ಗೆ ಇರುವುದರಿಂದ ಮುಂದೆ ಭಾರತ ತಂಡ ಕಪ್ತಾನನಾಗಿಯೂ ಕಾಣಿಸಿಕೊಂಡರೆ ಅಚ್ಚರಿಪಡಬೇಕಿಲ್ಲ ಎಂದಿದ್ದಾರೆ. ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ,ಅಜಿಂಕ್ಯಾ ರಹಾನೆ ಯಂಥ ಆಟಗಾರರು ಇದ್ದಾರೆ ಆದರೆ ಇವರ ಮುಂದೆ ಸಮಿತಿಗೆ ರಾಹುಲ್ ಆಯ್ಕೆಯಾಗಿ ನಿಲ್ಲಬಹುದು ಆದ್ದರಿಂದ ಈ ಬಾರಿಯ ಐಪಿಎಲ್ ನಾಯಕಾಗಿ ಜವಬ್ದಾರಿ ನಿಭಾಯಿಸುವ ರಾಹುಲ್ ಗೆ ಮುಖ್ಯವಾದದ್ದು ಎಂದು ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಈ ಬಾರಿ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಪ್ಪೆಂಬರ್ 20ರಂದು ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ