ಕೆಟ್ಟವನೆನೆಸಿಯೂ ಪ್ರೀತಿ ಉಣಿಸುವ ನೈಜ ಗೆಳೆತನ


Team Udayavani, Nov 19, 2020, 6:02 AM IST

fRIENDSHIP

ನಮಗೆಲ್ಲರಿಗೂ ಗೆಳೆಯರು, ಗೆಳತಿಯರು ಇದ್ದಾರೆ. ನಾವೇನು ಮಾಡುತ್ತೇವೆಯೋ ಅದನ್ನು ಅವರು ಬೆಂಬಲಿಸಬೇಕು ಎಂಬುದು ಸಾಮಾನ್ಯವಾಗಿ ನಮ್ಮ ನಿರೀಕ್ಷೆ.

ಇದು ವಿದೇಶದಲ್ಲಿ ಚಳಿಗಾಲ ಆರಂಭ ವಾಗುವುದಕ್ಕೆ ಮುನ್ನ ನಡೆದ ಒಂದು ಕಥೆ. ಪುಟ್ಟ ಪಕ್ಷಿಯೊಂದು ಚಳಿ ಕಾಲಿಡುವುದಕ್ಕೆ ಮುನ್ನವೇ ಬೆಚ್ಚಗಿನ ಪ್ರದೇಶಕ್ಕೆ ವಲಸೆ ಹೋಗಬೇಕಿತ್ತು. ವಾತಾವರಣವನ್ನು ಸ್ವಲ್ಪ ಹೆಚ್ಚು ಕಾಲ ಆಸ್ವಾದಿಸುತ್ತ ಅಲ್ಲೇ ಉಳಿಯಿ ತದು. ಅಷ್ಟರಲ್ಲಿ ಚಳಿ ಆರಂಭವಾಗಿಯೇ ಬಿಟ್ಟಿತು, ಮಂಜು ಬೀಳಲಾರಂಭವಾಯಿತು. ಹಕ್ಕಿ ಸ್ವಲ್ಪ ದೂರ ಹಾರುವಷ್ಟರಲ್ಲಿ ಮರಗಟ್ಟಿ ಕೆಳಕ್ಕೆ ಬಿದ್ದುಬಿಟ್ಟಿತು.

ಸ್ವಲ್ಪ ಹೊತ್ತಿನಲ್ಲಿ ಅದೇ ದಾರಿಯಾಗಿ ಬಂದ ಹಸುವೊಂದು ಸರಿಯಾಗಿ ಆ ಹಕ್ಕಿಯ ಮೇಲೆಯೇ ಸೆಗಣಿ ಹಾಕಿತು. ಮರಗಟ್ಟಿದ ಪಕ್ಷಿ ಸೆಗಣಿಯಲ್ಲಿ ಮುಚ್ಚಿಹೋಯಿತು. ಆಗಷ್ಟೇ ದನದ ಹೊಟ್ಟೆಯಿಂದ ಹೊರಬಂದ ಸೆಗಣಿಯಾದ್ದರಿಂದ ಬಿಸಿಯಾಗಿತ್ತು, ಆ ಬಿಸಿಯಿಂದಾಗಿ ಪಕ್ಷಿಗೆ ಎಚ್ಚರವಾಯಿತು. ಅದು ಚಿಲಿಪಿಲಿಗುಟ್ಟಿತು.

ಅದೇ ದಾರಿಯಾಗಿ ಬರುತ್ತಿದ್ದ ಬೆಕ್ಕಿಗೆ ಹಕ್ಕಿಯ ಚಿಲಿಪಿಲಿ ಕೇಳಿಸಿತು. ಎಲ್ಲಿಂದ ಇದು ಎಂದು ಕಿವಿಯಗಲಿಸಿ ಕೇಳಿದ ಅದು ಸಗಣಿ ಮುದ್ದೆಯ ಅಡಿಯಿಂದಲೇ ಸದ್ದು ಕೇಳುತ್ತಿರುವುದು ಎಂದು ತಿಳಿದುಕೊಂಡು ಹಕ್ಕಿಯನ್ನು ಹೊರಕ್ಕೆಳೆದು ತಿಂದುಬಿಟ್ಟಿತು.

ನಮ್ಮ ಮಿತ್ರರು, ಶತ್ರುಗಳು ಹೀಗೆಯೇ. ನಮ್ಮ ಮೇಲೆ ಹೊಲಸು ಸುರಿದವರೆಲ್ಲ ಶತ್ರು ಗಳಾಗಬೇಕಿಲ್ಲ; ಕೆಸರಿನಿಂದ ಹೊರಗೆಳೆದ ವರೆಲ್ಲ ಮಿತ್ರರಾಗಬೇಕಿಲ್ಲ. ಉತ್ತಮ ಮಿತ್ರರು ನಮ್ಮ ಪಾಲಿಗೆ ಸದಾ ಪ್ರಿಯವಾದದ್ದನ್ನೇ ಆಡ ಬೇಕಿಲ್ಲ, ಮಾಡಬೇಕಿಲ್ಲ. ನಮ್ಮ ಗುಣವನ್ನು ಹೊಗಳಿ, ಅವಗುಣವನ್ನು ಎತ್ತಿ ತೋರಿಸಿ, ತಿದ್ದಿಕೋ ಎನ್ನುವವನೇ ನಿಜವಾದ ಗೆಳೆಯ.

ನಾವೂ ಹಲವರಿಗೆ ಗೆಳೆಯರಾಗಿರುತ್ತೇವೆ. ಅವರ ದುರ್ಗುಣಗಳನ್ನು ಸದಾ ಎತ್ತಿ ತೋರಿಸಬೇಕು ಎಂಬುದು ಇದರರ್ಥವಲ್ಲ. ಆದರೆ ಗೆಳೆಯರ ನಡುವೆ, ಜನರ ದೃಷ್ಟಿಯಲ್ಲಿ ಕೆಟ್ಟವರಾಗಲು ನಾವು ಸದಾ ಸಿದ್ಧರಾಗಿರ ಬೇಕು, ಆ ಧೈರ್ಯ ನಮಗಿರಬೇಕು. ನಾವು ಎಲ್ಲರಿಗೂ ಎಲ್ಲ ಕಾಲಗಳಲ್ಲಿಯೂ ಒಳ್ಳೆಯ ವರಾಗಿಯೇ ಇರಲು ಸಾಧ್ಯವಿಲ್ಲ. ಎಲ್ಲರಿಗೂ ಸಂತೋಷವಾಗುವ ಹಾಗೆ ಇರಬೇಕಾದರೆ ಎಷ್ಟೋ ಅಸಂತೋಷಗಳನ್ನು ನಾವು ನುಂಗಿ ಕೊಳ್ಳಬೇಕಾಗುತ್ತದೆ. ಕೊನೆಗೆ ನಾವು ಅಸಂತೋಷಗಳ ಮೂಟೆ ಆಗಬೇಕಾದೀತು.

ನಮ್ಮ ಗೆಳೆಯನ ಹುಳುಕನ್ನು ಹೇಳಿಯೂ ಆತನನ್ನು ಪ್ರೀತಿಸುವ, ಆತನಿಗಾಗಿ ಸಹಾನು ಭೂತಿ ಹೊಂದುವ ಧೈರ್ಯ ನಮ್ಮಲ್ಲಿರಬೇಕು. ಅದುವೇ ನಿಜವಾದ ಗೆಳೆತನ. “ನಿನ್ನ ಬೆನ್ನನ್ನು ನಾನು, ನನ್ನ ಬೆನ್ನನ್ನು ನೀನು ತಟ್ಟು’ ಎಂಬಂಥದ್ದು ನೈಜ ಸ್ನೇಹವಲ್ಲ.

ಸ್ನೇಹಿತರಾದ ಮೂವರು ಅರಸರು ತಮ್ಮ ತಮ್ಮ ಸೈನ್ಯ ತುಕಡಿಗಳ ಜತೆಗೆ ಪ್ರವಾಸ ಹೊರಟಿದ್ದರು. ಮಾರ್ಗ ಮಧ್ಯೆ ತಮ್ಮ ಯೋಧರ ನಿಷ್ಠೆ, ಧೈರ್ಯಗಳ ಮಾತು ಬಂತು. ಒಂದನೇ ರಾಜ, “ನನ್ನ ಸೈನಿಕರು ಈ ಬೆಟ್ಟದ ಮೇಲಿಂದ ಹಾರು ಎಂದರೂ ಹಿಂದೆ ಮುಂದೆ ನೋಡದೆ ಹಾರುತ್ತಾರೆ’ ಎಂದ. ಪರೀಕ್ಷೆಗಾಗಿ ಹಾಗೆ ಆದೇಶಿಸಿದಾಗ ಅವನ ಯೋಧ ಹಾಗೆಯೇ ಮಾಡಿದ. ಎರಡನೆಯ ವನದೂ ಅದೇ ಕಥೆ. ಮೂರನೆಯ ರಾಜ ಮಾತ್ರ ಮೌನವಾಗಿದ್ದ. ಉಳಿದಿಬ್ಬರು ಕುಟುಕಿದಾಗ ಆತನೂ ತನ್ನ ಸೈನಿಕರ ಲ್ಲೊಬ್ಬನನ್ನು ಕರೆದು ಬೆಟ್ಟದ ಮೇಲಿಂದ ಹಾರುವಂತೆ ಆದೇಶಿಸಿದ.

ಆಗ ಆ ಸೈನಿಕ, “ದೊರೆಯೇ, ನೀವು ಈ ದಿನವೂ ಅಮಲು ಪದಾರ್ಥ ಸೇವಿಸಿದ ಹಾಗಿದೆ. ಕ್ಷಮಿಸಿ, ಇಲ್ಲಿಂದ ಹಾರಲಾರೆ, ಹಾರಿದರೆ ನಿಷ್ಠಾವಂತ ಯೋಧನೊಬ್ಬನನ್ನು ನೀವು ಕಳೆದುಕೊಳ್ಳುತ್ತೀರಿ’ ಎಂದ.

ಧೈರ್ಯ, ಕೆಚ್ಚು ಎಂದರೆ ಇದು. ಗೆಳೆತನ, ಅಧಿಕಾರಿ- ದುಡಿಮೆಗಾರ, ಮಾಲಕ- ನೌಕರ ತಂದೆ- ಮಕ್ಕಳು… ಹೀಗೆ ಎಲ್ಲ ಬಗೆಯ ಸಂಬಂಧಗಳಲ್ಲೂ ಇರಬೇಕಾದಂಥದ್ದು.

( ಸಾರ ಸಂಗ್ರಹ)

ಟಾಪ್ ನ್ಯೂಸ್

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.