ಮಹಾ ಕಾಲದ ಎದುರು ತಲೆಬಾಗುವ!


Team Udayavani, May 5, 2021, 6:00 AM IST

ಮಹಾ ಕಾಲದ ಎದುರು ತಲೆಬಾಗುವ!

ಕಾಲದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದು ಅಷ್ಟು ಸುಲಭವಾಗಿ ತಿಳಿವಳಿಕೆಗೆ ನಿಲುಕುವಂಥದ್ದಲ್ಲ. ಪಾಶ್ಚಾ ತ್ಯರ ಪ್ರಕಾರ ಕಾಲ ಸರಳ ರೇಖೆಯ ಹಾಗೆ; ಬೆಳಕಿನ ಕಿರಣದ ಹಾಗೆ – ಮುಂದು ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಆದರೆ ಭಾರತೀಯರ ಚಿಂತನೆಯ ಪ್ರಕಾರ ಅದು ವರ್ತುಲ ಸ್ವರೂಪದ್ದು. ಹೀಗಾಗಿಯೇ ಕಾಲಚಕ್ರ ಎನ್ನುತ್ತಾರೆ. ಕಾಲಚಕ್ರಕ್ಕೆ ಎಲ್ಲವನ್ನೂ ಮರೆಯಿಸುವ ಶಕ್ತಿ ಇದೆ. ಸುಖ-ದುಃಖ, ನೋವು-ನಲಿವು, ಹಿಗ್ಗು-ಕುಗ್ಗು ಎಲ್ಲವೂ ಅನಂತವಾದ ಕಾಲಚಕ್ರ ದಲ್ಲಿ ಸರಿದುಹೋಗು ತ್ತವೆ. ಕಾಲದ ಮುಂದೆ ವಿನೀತವಾಗಿ, ಆಗುವು ದೆಲ್ಲವೂ ಒಳ್ಳೆಯದಕ್ಕೆ ಎಂಬ ಆಶಾಭಾವನೆ ಯೊಂದಿಗೆ, ಕಾಲದಲ್ಲಿ ಒಳ್ಳೆಯ ಘಟ್ಟ ಬರಲಿದೆ ಎಂಬ ವಿಶ್ವಾಸದೊಂದಿಗೆ ಬದುಕುವುದಷ್ಟೇ ನಮ್ಮ ದಾರಿ.

ದೇವರನ್ನು ಕಾಲ ಎಂದು ಕಲ್ಪಿಸಿ ಕೊಂಡ ಪರಂಪರೆ ನಮ್ಮದು. ಆದ್ದರಿಂದ ಶಿವನಿಗೆ ಮಹಾಕಾಲ ಎಂಬ ಹೆಸರು. ಕಾಲದ ಬಗ್ಗೆ ನಮ್ಮ ಪೂರ್ವಸೂರಿಗಳು ನಡೆಸಿದಷ್ಟು ಚಿಂತನೆ ಪ್ರಪಂಚದ ಬೇರಾವ ಭಾಗ, ಸಂಸ್ಕೃತಿ, ನಾಗರಿಕತೆಗಳಲ್ಲೂ ಆಗಿಲ್ಲ. ಭಾರತೀಯ ಪುರಾಣಗಳಲ್ಲಿ ಕಾಲವು ಚಕ್ರ ಸ್ವರೂಪದ್ದು ಎನ್ನುವುದನ್ನು ಒತ್ತಿಹೇಳುವ ಅನೇಕ ಕಥೆಗಳಿವೆ. ಅವುಗಳಲ್ಲಿ ಕೆಲವನ್ನು ನೋಡೋಣ.

ಇದು ವಿಷ್ಣು ಪುರಾಣದಲ್ಲಿ ಬರುವ ಒಂದು ಕಥೆ. ವಿಷ್ಣು ಮತ್ತು ನಾರದರು ಒಮ್ಮೆ ಪ್ರಪಂಚ ಪರ್ಯಟನೆಗೆ ಹೊರಟಿದ್ದರಂತೆ. ಒಂದು ಕಡೆ ವಿಷ್ಣುವಿಗೆ ಬಾಯಾರಿಕೆಯಾಯಿತು. ಹತ್ತಿರದ ಗ್ರಾಮದಿಂದ ನೀರು ತಂದುಕೊಡುವಂತೆ ಅವನು ನಾರದನಿಗೆ ಹೇಳಿದ. ಹಾಗೆ ಹೋದ ನಾರದ ಹಳ್ಳಿಯ ಒಂದು ಮನೆ ಬಾಗಿಲನ್ನು ತಟ್ಟಿದಾಗ ತೆರೆದವಳು ಒಬ್ಬಳು ಸುಂದರ ಯುವತಿ. ನಾರದನಿಗೆ ಅವಳ ಮೇಲೆ ಪ್ರೇಮವಾಯಿತು. ಆಕೆ ಯನ್ನು ಮದುವೆಯಾದ. ಮಕ್ಕಳಾದವು. ಸುಖವಾಗಿ ದಿನಗಳೆಯತೊಡಗಿದರು. ಎಷ್ಟೋ ವರ್ಷಗಳು ಸಂದ ಬಳಿಕ ಒಂದು ಬಾರಿ ಭಾರೀ ಮಳೆ ಬಂದು ಆ ಹಳ್ಳಿ ಯನ್ನು ಪ್ರವಾಹ ಆವರಿಸಿತು. ನಾರದನೂ ಅವನ ಸಂಸಾರವೂ ಅದರಲ್ಲಿ ಕೊಚ್ಚಿಹೋದರು. ಎಲ್ಲೆಲ್ಲೋ ತೇಲಿ ಹೋದ ನಾರದ ಕೊನೆಗೆ ಒಂದು ಕಡೆ ದಡ ಸೇರಿದಾಗ ಅಲ್ಲಿದ್ದ ಮಹಾವಿಷ್ಣು ಕುಡಿಯಲು ನೀರೆಲ್ಲಿ ಎಂದು ಕೇಳಿದನಂತೆ!

ಇಲ್ಲಿ ಸಂದುಹೋದ ಕಾಲವು ವಿಷ್ಣುವಿಗೂ ನಾರದನಿಗೂ ಬೇರೆ ಬೇರೆಯಾದದ್ದು.

ಲೀಲಾಶುಕನ ಬಾಲ ಗೋಪಾಲಸ್ತುತಿಯಲ್ಲಿ ಸುಂದರವಾದ ಒಂದು ವಿವರಣೆಯಿದೆ. ಒಮ್ಮೆ ಯಶೋದೆಯು ಬಾಲ ಕೃಷ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡು ರಾಮಾಯಣದ ಕಥೆ ಹೇಳುತ್ತ ತಟ್ಟುತ್ತಿದ್ದಳಂತೆ. ಕಥೆ ಮುಂದು ವರಿಯುತ್ತ ಸೀತೆಯನ್ನು ಮಾರೀಚನು ಚಿನ್ನದ ಜಿಂಕೆಯಾಗಿ ಆಕರ್ಷಿಸಿದ, ರಾಮನು ಅದರ ಹಿಂದೆ ಹೋದಾಗ ರಾವಣನು ಕಪಟ ಸನ್ಯಾಸಿಯಾಗಿ ಸೀತೆಯ ಮುಂದೆ ಸುಳಿದ ವಿವರಣೆ ಬಂತು. ಅರೆಗಣ್ಣಿನಲ್ಲಿದ್ದ ಪುಟ್ಟ ಶ್ರೀಕೃಷ್ಣ ಥಟ್ಟನೆದ್ದು, “ಲಕ್ಷ್ಮಣ, ಓ ಲಕ್ಷ್ಮಣ, ನನ್ನ ಬಿಲ್ಲುಬಾಣಗಳೆಲ್ಲಿ’ ಎಂದು ಕೇಳಿದನಂತೆ.

ಕೃಷ್ಣನಿಗೆ ತನ್ನ ಪೂರ್ವಾವತಾರದ ಸ್ಮತಿ ಮನಃಪಟಲದಲ್ಲಿ ಮೂಡಿಬಂದ ಕಥೆ ಇದು. ಇಲ್ಲಿ ಕಾಲವು ಒಂದು ಯುಗದಿಂದ ಇನ್ನೊಂದರೊಳಗೆ ಹೊಕ್ಕು-ಹೊರಡುತ್ತದೆ!

ಇನ್ನೊಂದು ಕಥೆ ಬ್ರಹ್ಮವೈವರ್ತ ಪುರಾಣದ್ದು. ಇಂದ್ರನು ಒಮ್ಮೆ ತನ್ನ ಆಸ್ಥಾನದಲ್ಲಿ ವೈಭವದ ಒಡ್ಡೋಲಗದಲ್ಲಿ ಮಂಡಿಸಿದ್ದ. ಆತ ಇಂದ್ರಸಭೆಯ ಪ್ರಾಮುಖ್ಯದ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಿ ದ್ದಾಗ ನೆಲದಲ್ಲಿ ಹತ್ತಾರು ಇರುವೆಗಳು ಸಾಲುಗಟ್ಟಿ ಹೊರಟದ್ದು ಕಾಣಿಸಿತು. ಎಲ್ಲರೂ ಇದೇನು ವಿಚಿತ್ರ ಎಂದು ಕೊಂಡರು. ಆದರೆ ಜ್ಞಾನದೃಷ್ಟಿ ಹೊಂದಿದ್ದ ಒಬ್ಬ ಮಾತ್ರ ಕಿಸಕ್ಕನೆ ನಕ್ಕುಬಿಟ್ಟ. ನಗಲು ಕಾರಣವೇನು ಎಂದು ಇಂದ್ರ ಪ್ರಶ್ನಿಸಿ ದಾಗ, “ಈ ಪ್ರತೀಯೊಂದು ಇರುವೆಯೂ ಹಿಂದಿನ ಜನ್ಮದಲ್ಲಿ ಒಬ್ಬೊಬ್ಬ ಇಂದ್ರನಾಗಿದ್ದವು’ ಎಂದನಂತೆ ಆತ.

ಕಾಲವೆಂದರೆ ಹೀಗೆ!

( ಸಾರ ಸಂಗ್ರಹ)

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.