ಬದುಕಿನಲ್ಲಿ ಅತ್ಯಮೂಲ್ಯವಾದುದು ಸ್ವತಃ ಬದುಕೇ !


Team Udayavani, Sep 17, 2020, 6:34 AM IST

ಬದುಕಿನಲ್ಲಿ ಅತ್ಯಮೂಲ್ಯವಾದುದು ಸ್ವತಃ ಬದುಕೇ !

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬದುಕಿನಲ್ಲಿ ಅತ್ಯಮೂಲ್ಯವಾದುದು ಯಾವುದು ಎಂದು ಕೇಳಿದನೊಬ್ಬ ವಿದ್ಯಾರ್ಥಿ ತನ್ನ ಗುರುಗಳನ್ನು. ಗುರುಗಳು ಒಮ್ಮೆ ದೀರ್ಘ‌ವಾಗಿ ಆಲೋಚಿಸಿ, ಒಂದು ಕೆಲಸ ಮಾಡು. ನಾಳೆ ನೀನು ನಿಮ್ಮ ತಂದೆಯನ್ನು ಒಂದು ಪ್ರಶ್ನೆ ಕೇಳಿಕೊಂಡು ಬಾ. ಅದು ಏನೆಂದರೆ, “ನೀವು ನಿಮ್ಮ ಜೀವನದಲ್ಲಿ ಏನೇನು ಮಾಡಿದ್ದೀರಿ? ಏನೇನು ಸಾಧಿಸಿದ್ದೀರಿ?’ ಎಂದು ಹೇಳಿದರು.

ಆಯಿತೆಂದು ಹೋದ ಆ ಬಾಲಕ, ತನ್ನ ತಂದೆಯಲ್ಲಿ ಗುರುಗಳ ಪ್ರಶ್ನೆಯನ್ನು ವಿವರಿಸಿದ. ಅದನ್ನು ಶಾಂತವಾಗಿ ಕೇಳಿಸಿಕೊಂಡ ತಂದೆ, ತನ್ನ ಬದುಕು, ಅದರಲ್ಲಿ ಬಂದ ಅವಕಾಶ, ಬಳಸಿಕೊಂಡ ಬಗೆ, ಈಗ ಇರುವ ಉತ್ತಮ ಸ್ಥಿತಿ-ಸಂಸಾರ, ಸುಖ ಎಲ್ಲವನ್ನೂ ವಿವರಿಸಿದ. ಬಾಲಕ ಎಲ್ಲವನ್ನೂ ಬರೆದುಕೊಂಡು ಮರುದಿನ ತನ್ನ ಗುರುಗಳಲ್ಲಿ ವಿವರಿಸಿದ.

ಗುರುಗಳು ಎಲ್ಲವನ್ನೂ ಕೇಳಿ ಅವನನ್ನು ಎದುರು ಕುಳ್ಳಿರಿಸಿ ಕೊಂಡರು. “ಈಗ ಹೇಳು, ನೀನು ಮುಂದೆ ಏನಾಗಬೇಕೆಂದು ಕೊಂಡಿದ್ದೀ?’ ಎಂದು ಕೇಳಿದರು. ಅದಕ್ಕೆ ತನ್ನ ಕನಸೆಲ್ಲವನ್ನೂ ಬಾಲಕ ಸಾದ್ಯಂತವಾಗಿ ವಿವರಿಸಿದ. ಅವನ ಕನಸು ಏನೆಂದರೆ ಗಗನಯಾತ್ರಿಯಾಗಬೇಕೆಂಬುದು.

ಬಹಳ ಖುಷಿಯಾಯಿತು ಗುರುಗಳಿಗೆ. “ನೋಡು, ನಿಮ್ಮ ತಂದೆ ಏನಾಗಿದ್ದರು? ಎಷ್ಟು ಕಷ್ಟದಲ್ಲಿದ್ದರು? ಎಷ್ಟೆಲ್ಲಾ ಅವಕಾಶಗಳನ್ನು ಬಳಸಿಕೊಂಡು ಮೇಲೆ ಹೇಗೆ ಬಂದರು? ನೀನೂ ಅಷ್ಟೇ. ಮುಂದೊಂದು ದಿನ ನಿನ್ನ ಕನಸಿನಂತೆ ಗಗನಯಾತ್ರಿಯಾಗುತ್ತೀ ಎಂದು ಇಟ್ಟುಕೋ. ಆಗ ಎಷ್ಟು ಖುಷಿಯಾಗುತ್ತದೆ ಅಲ್ಲವೇ?’ ಎಂದು ಪ್ರಶ್ನಿಸಿದರು ಗುರುಗಳು.

ನನ್ನ ಕನಸು ಈಡೇರಿದರೆ ಅದಕ್ಕಿಂತ ದೊಡ್ಡ ಖುಷಿ ಏನಿದೆ ಗುರುಗಳೇ ಎಂದು ಹೇಳಿದ ಬಾಲಕ. ಆಗ ಗುರುಗಳು, ಅಲ್ಲಿಗೆ ಯೋಚನೆ ಮಾಡು. ನಿನಗೂ ಮತ್ತು ನಿನ್ನ ತಂದೆಗೂ ಖುಷಿಯಾಗುವಂತ ವಾತಾವರಣ ಸೃಷ್ಟಿಸಿದ್ದು ಯಾರು ? ಅದು ಬದುಕು. ಹೌದು ತಾನೇ? ಎಂದು ಕೇಳಿದರು. “ಹೌದು’ ಎಂದು ಉತ್ತರಿಸಿದ ಬಾಲಕ.

ಬದುಕಿನಲ್ಲಿ ಅಮೂಲ್ಯವಾದುದು ಎಂದರೆ ಸ್ವತಃ ಬದುಕೇ. ಅದೇ ದೊಡ್ಡದು. ಅದಕ್ಕಿಂತ ಅಮೂಲ್ಯ ಮತ್ತು ದೊಡ್ಡದು ಜಗತ್ತಿನಲ್ಲಿ ಬೇರಾವುದೂ ಇಲ್ಲ. ಸಣ್ಣದೊಂದು ಕಷ್ಟ ಬಂದಾಗಲೂ ದೊಡ್ಡದೊಂದು ಸುಖ ಮುಂದಿದೆ ಎಂದುಕೊಂಡು ಬದುಕಿನಲ್ಲಿ ಸಾಗಬೇಕು. ಬದುಕನ್ನು ಗೆಲ್ಲುವುದು ಎಂದರೆ ಅದೇ ಅರ್ಥ. ನಿತ್ಯವೂ ಎದುರಾಗುವ ಕಡ್ಡಿಯಂಥ ಕಷ್ಟಗಳನ್ನು ಗುಡ್ಡದಂತೆ ಬಿಂಬಿಸಿಕೊಂಡು, ಅರ್ಥೈಸಿಕೊಂಡು, ಗೊಂದಲ ಮಾಡಿಕೊಂಡು, ನನ್ನ ಬದುಕೇ ಹೀಗೆ ಎಂದು ಹಳಿಯುತ್ತಾ ಸಾಗುವುದಲ್ಲ ಎಂದರು ಗುರುಗಳು.

ಅದಕ್ಕೇ ದಾಸರು ಹೇಳಿದ್ದು ಈಸಬೇಕು ಇದ್ದು ಜೈಸಬೇಕು ಎಂದು. ನಾವು ಬದುಕಿನಲ್ಲಿ ಸೋಲುವ ಭ್ರಮೆಯಲ್ಲೇ ಸದಾ ಇದ್ದು ಬಿಡುತ್ತೇವೆ, ಅದರ ಬದಲಾಗಿ ಗೆಲ್ಲುವ ಕನಸಿನಲ್ಲಿ ಬದುಕುವುದನ್ನು ಕಲಿಯಬೇಕು. ಆಗ ಬದುಕನ್ನು ಗೆಲ್ಲಲು ಸಾಧ್ಯ. ಧನಾತ್ಮಕವಾಗಿ ಆಲೋಚಿಸುತ್ತಾ ಬದುಕಿನ ಸಂಕಷ್ಟಗಳಿಗೆ ಪರಿಹಾರ ಹುಡುಕಬೇಕು, ಕೆಲವು ಸಮಯ ಹಿಡಿಯಬಹುದಷ್ಟೇ. ಆದರೆ ಪರಿಹಾರ ಸಿಕ್ಕೇ ಸಿಗುತ್ತದೆ, ಅದಕ್ಕೆ ಸಂಶಯ ಬೇಡ.

(ಸಂಗ್ರಹ)

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.