ಈ ಕ್ಷಣದ ಅವಕಾಶ ಮತ್ತೆಂದೂ ಒದಗಲಾರದು


Team Udayavani, Dec 22, 2020, 5:45 AM IST

ಈ ಕ್ಷಣದ ಅವಕಾಶ ಮತ್ತೆಂದೂ ಒದಗಲಾರದು

ಜಗತ್ತನ್ನು ಗೆಲ್ಲಲು ಹೊರಟ ಚಕ್ರವರ್ತಿ ಅಲೆಕ್ಸಾಂಡರ್‌ ನಿಮಗೆ ಗೊತ್ತಿರಬಹುದು. ಭೂಲೋಕದ ಬಹುಭಾಗವನ್ನು ಗೆದ್ದನಾಗಿದ್ದರೂ ಅವನ ಶವಯಾತ್ರೆಯಲ್ಲಿ ಎರಡು ಖಾಲಿ ಕೈಗಳು ಹೊರಚಾಚಿದ್ದವಂತೆ. ನಾವು ಇಲ್ಲಿಗೆ ಬರುವಾಗ ಏನನ್ನೂ ತರುವುದಿಲ್ಲ, ಹೋಗುವಾಗ ಏನನ್ನೂ ಕೊಂಡುಹೋಗು ವುದಿಲ್ಲ ಎಂದು ಇದು ಸೂಚಿಸುವಂತಿದೆ. ಅದಕ್ಕೆ ಮುನ್ನ ನಡೆದ ಇನ್ನೊಂದು ಕಥೆ ಇದು.

ಅಲೆಕ್ಸಾಂಡರನ ಸಮಕಾಲೀನನಾಗಿದ್ದ ತಣ್ತೀಜ್ಞಾನಿ ಡಯೊಜನೀಸ್‌. ಆತನೊಬ್ಬ ನಗ್ನ ಫ‌ಕೀರ, ಅವಧೂತ. ತನ್ನೊಳಗನ್ನು ಹುಡುಕುತ್ತ ಆತ ಎಲ್ಲವನ್ನೂ ತ್ಯಾಗ ಮಾಡಿದ್ದ; ವಸ್ತ್ರವನ್ನೂ. ಭಿಕ್ಷೆಗಾಗಿ ಒಂದು ಬೋಗುಣಿ ಮಾತ್ರ ಅವನ ಬಳಿ ಇತ್ತು.

ಒಂದು ದಿನ ಡಯೋ ಜನೀಸ್‌ಗೆ ನಾಯಿ ಕೊಳ ದಿಂದ ನೀರು ಕುಡಿಯು ವುದು ಕಂಡಿತು. ಆ ಕ್ಷಣವೇ ಆತ ಭಿಕ್ಷೆ ಎತ್ತುವ ಬೋಗುಣಿ ಯನ್ನೂ ತ್ಯಜಿಸಿ ಬಿಟ್ಟಿದ್ದ. ಇಂಥ ಡಯೋಜನೀಸ್‌ಬಗ್ಗೆ ಅಲೆಕ್ಸಾಂಡರನ ಕಿವಿಗೆ ಆಗಾಗ ಸುದ್ದಿಗಳು ಬಂದು ಬೀಳುತ್ತಿದ್ದವು. ಆತನನ್ನು ನೋಡಬೇಕು ಎಂಬ ಹಂಬಲ ಹುಟ್ಟಿತು. ಅಲೆಗ್ಸಾಂಡರ್‌ ವಂಧಿಮಾಗಧರ ಬೆಂಗಾವಲಿನಲ್ಲಿ ಡಯೋಜ ನೀಸ್‌ನನ್ನು ಕಂಡಾಗ ಆತ ನಗ್ನನಾಗಿ ಸೂರ್ಯ ರಶ್ಮಿಗಳಿಗೆ ಮೈಯೊಡ್ಡಿ ನದಿ ದಂಡೆಯಲ್ಲಿ ಮಲಗಿದ್ದ. ಅದನ್ನು ಕಂಡು ಅಲೆಕ್ಸಾಂಡರ್‌ಗೆ ಪಿಚ್ಚೆನಿಸಿತು. “ನಿಮಗೇನು ಬೇಕು ಹೇಳಿ, ನಾನು ಚಕ್ರವರ್ತಿ ಅಲೆಕ್ಸಾಂಡರ್‌’ ಎಂದನಾತ.

ಡಯೋಜನೀಸ್‌ನ ಉತ್ತರ ಕಪಾಳಕ್ಕೆ ಬಾರಿಸಿದ ಹಾಗಿತ್ತು, “ನನಗೇನೂ ಬೇಡ. ನನ್ನ ಮತ್ತು ಸೂರ್ಯನ ನಡುವೆ ಅಡ್ಡವಾಗಿ ನಿಂತಿದ್ದೀ, ಸ್ವಲ್ಪ ಈಚೆಗೆ ಬಾ. ಅದೊಂದೇ ನನಗೆ ನೀನು ಮಾಡಬೇಕಿರುವ ಉಪಕಾರ’.

ಅಲೆಕ್ಸಾಂಡರ್‌ ಸಿಟ್ಟಿಗೇಳಬಹುದಿತ್ತು. ಆದರೆ ಡಯೋಜನೀಸ್‌ಸ ಮುಖ ಪ್ರಾಮಾಣಿಕವಾಗಿತ್ತು, ಅವನ ಸುತ್ತಲೂ ಅಲೌಕಿಕ ಪ್ರಭೆಯನ್ನು ಯಾರೂ ಕಾಣಬಹು ದಿತ್ತು, ಅವನ ಆತ್ಮ ಸೌಂದರ್ಯ ಅವನ ಮುಖದಲ್ಲಿ ಮಿನುಗುತ್ತಿತ್ತು. ಅಲೆಕ್ಸಾಂಡರ್‌ ತಲೆಬಾಗಿ, “ಮುಂದಿನ ಜನ್ಮದಲ್ಲಿ ನಾನು ಡಯೋಜನೀಸ್‌ ಆಗಿ ಹುಟ್ಟಲೆಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದ.

“ಮುಂದಿನ ಜನ್ಮವೇಕೆ, ಈ ಜನ್ಮದಲ್ಲೇ ನೀನು ನನ್ನ ಹಾಗೆ ಆಗಬಹುದು. ನೀನೀಗ ದಿಗ್ವಿಜಯದಲ್ಲಿದ್ದೀಯಲ್ಲ. ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ತಿರುಗಾಡುತ್ತಿದ್ದೀಯಲ್ಲ, ಏಕೆ’ ಪ್ರಶ್ನೆ ತೂರಿಬಂತು. “ನನಗೆ ಮಧ್ಯಪ್ರಾಚ್ಯವನ್ನು ಗೆಲ್ಲಬೇಕಿದೆ, ಆ ಬಳಿಕ ಭಾರತ, ಆಮೇಲೆ ದೂರ ಪೂರ್ವದ ದೇಶಗಳು…’ ಅಲೆಕ್ಸಾಂಡರ್‌ ಉಸುರಿದ. ಆತ ಒಂದೊಂದೇ ಪ್ರದೇಶ ಗಳ ಹೆಸರು ಹೇಳುತ್ತಿದ್ದಂತೆ ಡಯೋಜನೀಸ್‌ ಆಮೇಲೆ, ಆಮೇಲೆ ಎಂದು ಕೇಳುತ್ತಲೇ ಇದ್ದ. ಕೊನೆಯಲ್ಲಿ ಎಲ್ಲ ಖಂಡಗಳ ಹೆಸರನ್ನೂ ಹೇಳಿದ ಬಳಿಕ ಅಲೆ ಕ್ಸಾಂಡರ್‌, “ಆಮೇಲೆ ನಾನು ವಿಶ್ರಾಂತಿ ಪಡೆಯಬೇಕು’ ಎಂದ.

“ಆ ವಿಶ್ರಾಂತಿಯನ್ನು ಈಗಲೇ ಪಡೆಯ ಬಹುದಲ್ಲವೆ! ಈ ನದಿ ದಂಡೆ ವಿಶಾಲವಾಗಿದೆ. ಬಾ ಇಲ್ಲಿ ವಿಶ್ರಮಿಸು’ ಎಂದು ಕರೆದ.
“ಇಲ್ಲ ನಾನು ದಿಗ್ವಿಜಯಕ್ಕೆ ಹೊರಟಾಗಿದೆ. ಈಗ ಹಿಂದಿರುಗಲಾಗದು. ಎಲ್ಲವನ್ನೂ ಗೆದ್ದ ಬಳಿಕ ಬರುತ್ತೇನೆ’ ಎಂದು ಹೇಳಿ ಅಲ್ಲಿಂದ ಹೊರಟ ಅಲೆಕ್ಸಾಂಡರ್‌. ಡಯೋಜನೀಸ್‌ ಕೂಗಿ ಕರೆದು ಹೇಳಿದ, “ನೆನಪಿಡು, ಈಗ ವಿಶ್ರಮಿಸಲಾಗದವನು, ಈ ಕ್ಷಣದಲ್ಲಿ ಅರಿವನ್ನು ಹೊಂದದವನು ಮತ್ತೆಂದೂ ಅದನ್ನು ಹೊಂದಲು ಸಾಧ್ಯವಿಲ್ಲ. ಈಗ ನಿನ್ನಲ್ಲಿ ಅರಿವು ಉದಯಿಸದಿದ್ದರೆ ಮತ್ತೆಂದೂ ಆ ಅವಕಾಶ ಸಿಗುವುದಿಲ್ಲ’.

ಅಲೆಕ್ಸಾಂಡರ್‌ ಏನೂ ಉತ್ತರಿಸದೆ ಅಲ್ಲಿಂದ ಹೊರಟ. ದಿಗ್ವಿಜಯದ ನಡುವೆ ಅಸುನೀಗಿದ. ಅವನ ಶವಯಾತ್ರೆಯಲ್ಲಿ ಎಲ್ಲರಿಗೂ ಕಾಣಿಸುವಂತಿದ್ದುದು ಎರಡು ಬರಿದಾದ ಕೈಗಳು.

(ಸಾರ ಸಂಗ್ರಹ)

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.