ಹೆಜ್ಜೆಗೆಜ್ಜೆಯಲ್ಲಿ ಮನಮೋಹಕ ನೃತ್ಯಾಂಜಲಿ 


Team Udayavani, Sep 7, 2018, 6:00 AM IST

3.jpg

ನೂರಾರು ವಿದ್ಯಾರ್ಥಿಗಳಿಗೆ ನೃತ್ಯವಿದ್ಯೆಯನ್ನು ಧಾರೆ ಎರೆಯುತ್ತಾ ಬಂದಿರುವ ಹೆಜ್ಜೆಗೆಜ್ಜೆ ನೃತ್ಯ ಸಂಸ್ಥೆಯು ಇದೀಗ ಇಪ್ಪತ್ತೈದು ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿದೆ. ನವೀಕೃತಗೊಂಡ ರಾಜಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮಗಳು ಕಡಿಮೆಯಾಗುತ್ತಿದ್ದ ಈ ಸಂದರ್ಭದಲ್ಲೇ ವಿದುಷಿ ಯಶ ರಾಮಕೃಷ್ಣರ ಹೆಜ್ಜೆಗೆಜ್ಜೆ ಸಂಸ್ಥೆಯು ಬೆಳ್ಳಿಹೆಜ್ಜೆ ಇಡುತ್ತಿರುವುದು ಉಡುಪಿಯ ಕಲಾರಸಿಕರಿಗೆ ನೃತ್ಯದ ಸವಿಯನ್ನು ಸವಿಯಲು ಅವಕಾಶ ಕಲ್ಪಿಸಿದಂತಾಗಿದೆ

ಇತ್ತೀಚೆಗೆ ರಾಜಾಂಗಣದಲ್ಲಿ ಹೆಜ್ಜೆಗೆಜ್ಜೆಯ ರಜತ ಮಹೋತ್ಸವ ಉದ್ಘಾಟನೆಗೊಂಡಿತು. ಅದೇ ದಿನ ಬೆಂಗಳೂರಿನ ಗುರು ಅನುರಾಧಾ ವಿಕ್ರಾಂತ್‌ ಅವರ ದೃಷ್ಟಿ ಡ್ಯಾನ್ಸ್‌ ಎನ್ಸ್‌ಂಬಲ್‌ ನೃತ್ಯ ಕಾರ್ಯಕ್ರಮದ ಮೂಲಕ ನೃತ್ಯಾಂಜಲಿ ಎಂಬ ಸರಣಿ ನೃತ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿತು. ನೃತ್ಯಾಂಜಲಿ -1 ರಲ್ಲಿ ಅನುರಾಧಾ ವಿಕ್ರಾಂತ್‌ರ ಶಿಷ್ಯೆಯರಾದ ಶುಭಾ,ಐಶ್ವರ್ಯಾ, ಟಿನ್ಸಿ,ರಮ್ಯಾ ಇವರೊಂದಿಗೆ ಪ್ರದರ್ಶಿಸಿದ ಅಂಜಲಿ ನೃತ್ಯದಲ್ಲಿ ವಿದ್ವಾನ್‌ ಬಾಲಸುಬ್ರಹ್ಮಣ್ಯ ಶರ್ಮ ಅವರ ಹಾಡಿನ ಸಂಯೋಜನೆ ಮತ್ತು ಅನುರಾಧಾ ಅವರ ನೃತ್ಯ ಸಂಯೋಜನೆಯು ವಿಭಿನ್ನವಾಗಿತ್ತು.ಎಲ್ಲರೂ ಮತ್ತೆ ಮತ್ತೆ ಅಭಿನಯಿಸುವ ಚರ್ವಿತಚರ್ವಣ ಅನಿಸುವ ಪುರಂದರದಾಸರ ಜಗನ್ಮೋಹನನೇ ಕೃಷ್ಣ  ಎಂಬ ಹಾಡನ್ನು  ವಿಶಿಷ್ಟ ರಂಗ ವಿನ್ಯಾಸ ದೊಂದಿಗೆ ಉತ್ತಮವಾಗಿ ಅಭಿನಯಿಸಿದ್ದು ಪ್ರಶಂಸನೀಯ.ಮುಂದೆ ಪ್ರದರ್ಶನಗೊಂಡ ಬೃಂದಾವನಿ ರಾಗದ ಆದಿತಾಳದ ಸ್ವಾತಿ ತಿರುನಾಳ್‌ ರಚನೆ ಚಲಿಯೇ ಕುಂಜನಮೊ ಸಿಂಧುಭೈರವಿ ರಾಗದ ಪುರಂದರದಾಸರ ತಂಬೂರಿ ಮೀಟಿದವ, ನಾಟಿಕುರಂಜಿ ರಾಗದ ಪುರಂದರದಾಸರ ಪೋಗುವುದುಚಿತವೇ ನೃತ್ಯಗಳನ್ನು ಅನುರಾಧಾರವರು ಮನಮುಟ್ಟುವಂತೆ ಅಭಿನಯಿಸಿದರು.ದಾಸರ ಹಾಡು ಒಂದರ ಬೆನ್ನಿಗೆ ಇನ್ನೊಂದು ಇರದಿರುತ್ತಿದ್ದರೆ ಸಣ್ಣ ಮಟ್ಟಿನ ಏಕತಾನತೆಯನ್ನು ತಪ್ಪಿಸಬಹುದಿತ್ತು.ಡಿ.ವಿ ಗುಂಡಪ್ಪನವರ ಅಂತಃಪುರ ಗೀತೆಯ ಮುರುಜಾಮೋದೆ ಎಂಬ ಶಿಲಾಬಾಲಿಕೆಯ ವರ್ಣನೆ ಇರುವ ಏನೀ ಮಹಾನಂದವೇ ನೃತ್ಯವನ್ನು ಇಬ್ಬರು ಶಿಲಾಬಾಲಿಕೆಯರ ಸಂಭಾಷಣೆಯಂತೆ ಪೋಣಿಸಿದ್ದು ವಿಶೇಷ.ಕೊನೆಯಲ್ಲಿ ಪ್ರದರ್ಶನಗೊಂಡ ಸುಮನಸರಂಜನಿ ರಾಗದ ಆದಿತಾಳದ ನಾಗವಲ್ಲಿ ನಾಗರಾಜ್‌ ಮತ್ತು ಆರ್‌. ಗಣೇಶ್‌ ವಿರಚಿತ ತಿಲ್ಲಾನವು ವೈವಿಧ್ಯಮಯ ನೃತ್ತ ಚಲನೆಗಳೊಂದಿಗೆ ಚುರುಕಾಗಿ ಮೂಡಿ ಬಂತು. 

ನೃತ್ಯ-2ನ್ನು  ವೈ.ಜಿ.ಶ್ರೀಲತಾ ಅವರು ತಮ್ಮ ಪುಟ್ಟ ಶಿಷ್ಯೆಯರೊಂದಿಗೆ ನಡೆಸಿಕೊಟ್ಟರು.ಕಾರ್ಯಕ್ರಮವು ಪುಷ್ಪಾಂಜಲಿಯೊಂದಿಗೆ ಆರಂಭಗೊಂಡು ನಂತರ ಕ್ರಮವಾಗಿ ಮುತ್ತುಸ್ವಾಮಿ ದೀಕ್ಷಿತರ ಗಜಾನನಯುತಂ ದಯಾನಂದ ಸರಸ್ವತಿಯವರ ಭೋಶಂಭೋ, ನರಸಿಂಹ ಕೌತ್ವಂ, ದ್ವಾರಕಿ ಕೃಷ್ಣಸ್ವಾಮಿಯವರ ಆನಂದ ತಾಂಡವೇಶ್ವರನ, ದಾಸರುಗಳ ಆಡಿದನೋ ರಂಗ, ಯಮನೆಲ್ಲೂ ಕಾಣನೆಂದು,ಜಗದೋದ್ಧಾರನ ಮತ್ತು ಕೊನೆಯಲ್ಲಿ ಶಿವಕಲ್ಯಾಣಿ ತಿಲ್ಲಾನದೊಂದಿಗೆ ಸಮಾಪ್ತಿ ಗೊಂಡಿತು ಶ್ರೀಲತಾರವರ ಅಂಗ ಶುದ್ಧತೆ,ಸ್ಪಷ್ಟ ಹೆಜ್ಜೆಗಾರಿಕೆ,ಹಿತಮಿತವಾದ ಅಭಿನಯ,ನೃತ್ತರೇಖೆಗಳ ನಿಖರತೆ ಪ್ರದರ್ಶನದ ಶ್ಲಾಘನಾರ್ಹ ಸಂಗತಿ.ಇವರ ಶಿಷ್ಯೆಯರಾದ ಸ್ಫೂರ್ತಿ, ಪೆ¤àಕ್ಷಾ, ಶ್ರೀಲಾಸ್ಯ,ಶ್ರಾವಣಿ ವಯಸ್ಸಿಗೆ ತಕ್ಕಂತೆ ಅಚ್ಚುಕಟ್ಟಾಗಿ ನರ್ತಿಸಿದ್ದರೂ ಇನ್ನಷ್ಟು ಅನುಭವ ಪಡೆದು ಹೆಚ್ಚಿನ ಅಂಗಶುದ್ಧಿ,ಅಭಿನಯ, ಹೊಂದಾಣಿಕೆಯೊಂದಿಗೆ ನೃತ್ಯಗಳನ್ನು ಪ್ರದರ್ಶಿಸಿದ್ದರೆ ಕಾರ್ಯಕ್ರಮದ ಮಟ್ಟ ಇನ್ನಷ್ಟು ಏರುತ್ತಿತ್ತೇನೋ.

ವಿ| ಮಾನಸಿ ಸುಧೀರ್‌ 

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.