ತುಳು ಭಾಷೆಗೆ ಗೌರವ ಬಹುತ್ವದ ಪ್ರತೀಕ
Team Udayavani, Dec 2, 2017, 8:53 AM IST
ವಿದ್ಯಾಗಿರಿ (ಆಳ್ವಾಸ್): ತುಳುನಾಡಿನ ಹಲವರ ಮಾತೃಭಾಷೆ ವಿಭಿನ್ನವಾಗಿದ್ದರೂ ಅವರು ತುಳುವನ್ನು ಗೌರವಿಸುವುದು ಬಹುತ್ವದ ನೆಲೆಯಾಗುತ್ತದೆ. ಕನ್ನಡದ ಜತೆಗೆ ತುಳುನಾಡಿನ ಕೃಷಿ, ಸಂಸ್ಕೃತಿ, ಕಸುಬುಗಳನ್ನೂ ನುಡಿಸಿರಿಯಲ್ಲಿ ಅಳವಡಿಸಿ ಕೊಂಡಿರುವುದು ಶ್ಲಾಘನೀಯ ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ ಹೇಳಿದರು.
ಅವರು ವಿದ್ಯಾಗಿರಿಯ ನಾಡೋಜ ಕಯ್ನಾರ ಕಿಂಞಣ್ಣ ರೈ ಚಾವಡಿಯಲ್ಲಿ ಆಳ್ವಾಸ್ ತುಳು ನಾಡ ಐಸಿರಿ ಉದ್ಘಾ ಟನಾ ಸಮಾ ರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಐಸಿರಿಯನ್ನು ಉದ್ಘಾ ಟಿ ಸಿದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಮಾತ ನಾಡಿ, ಕನ್ನಡ ಭಾಷೆ-ಸಂಸ್ಕೃತಿಯ ಈ ಉತ್ಸವದಲ್ಲಿ ತುಳುವಿಗೂ ಸ್ಥಾನ ನೀಡಿ ರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ. ಸಾಂಸ್ಕೃತಿಕ ರಾಯಭಾರಿ ಎನಿಸಿದ ಮೋಹನ್ ಆಳ್ವರಿಗೆ ಬೇರೊಬ್ಬರು ಸಾಟಿಯಾಗಲು ಸಾಧ್ಯವಿಲ್ಲ ಎಂದರು.
ವೇದಿಕೆಯಲ್ಲಿ ಪ್ರಮುಖ ರಾದ ಡಾ| ವಾಮನ ನಂದಾ ವರ, ಸೀತಾರಾಮ ಕುಲಾಲ್, ಉಮಾ ನಾಥ ಕೋಟ್ಯಾನ್, ಐಕಳ ಹರೀಶ್ ಶೆಟ್ಟಿ, ಗುಣಪಾಲ ಕಡಂಬ, ಡಾ| ವೈ.ಎನ್. ಶೆಟ್ಟಿ ಉಪಸ್ಥಿತ ರಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಪ್ರಸ್ತಾವನೆ ಗೈದರು. ಕದ್ರಿ ನವನೀತ ಶೆಟ್ಟಿ ನಿರ್ವಹಿಸಿದರು.