ಇಂದಿನಿಂದ 3 ದಿನಗಳ ಆಳ್ವಾಸ್ ನುಡಿಸಿರಿ
Team Udayavani, Nov 16, 2018, 10:06 AM IST
ಮೂಡಬಿದಿರೆ: ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ 15ನೇ ಆವೃತ್ತಿಗೆ ಮೂಡಬಿದಿರೆ ಸಿದ್ಧವಾಗಿದೆ. ವಿದ್ಯಾಗಿರಿಯು ಬಹುಬಗೆಯ ಸಿರಿಗಳಾದ ವಿದ್ಯಾರ್ಥಿ ಸಿರಿ, ಚಿತ್ರ ಸಿರಿ, ಕೃಷಿ ಸಿರಿ ಮುಂತಾದ ಸಿರಿಗಳಿಂದ ಕಂಗೊಳಿಸುತ್ತಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸಾರಥ್ಯದಲ್ಲಿ ನಡೆಯುವ ಈ ರಾಷ್ಟ್ರೀಯ ಸಮ್ಮೇಳನಕ್ಕೆ ಪ್ರತಿನಿಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವುದು ನುಡಿಸಿರಿಗೆ ಕನ್ನಡದ ಮನಸ್ಸುಗಳ ಸ್ಪಂದನೆಯ ಸಿರಿಗೆ ಸಂಕೇತವಾಗಿದೆ. ವಿದೇಶಗಳಿಂದಲೂ ಪ್ರತಿನಿಧಿಗಳು ಬರುವ ಪರಂಪರೆಯೂ ಇಲ್ಲಿದೆ. ಇಲ್ಲಿ ಕೇವಲ ಸಾಹಿತ್ಯ ಚಿಂತನ ಮಂಥನವೊಂದೇ ನಡೆಯುವುದಿಲ್ಲ; ಕನ್ನಡದ ಬಹುಮುಖೀ ಶೋಧಗಳು, ಪರಂಪರೆ, ಸಂಸ್ಕೃತಿಯ ನೆಲೆಯಲ್ಲೂ ನಡೆಯುತ್ತವೆ ಅನ್ನುವುದು ಉಲ್ಲೇಖನೀಯ.
ಪ್ರತೀ ವರ್ಷ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಆಶಯಗಳನ್ನು ಇರಿಸಿಕೊಂಡು ಸಮ್ಮೇಳನ ನಡೆಯುತ್ತಿದೆ. ಇಲ್ಲಿ ಕೇವಲ ಸಾಹಿತ್ಯ ಚಿಂತನ ಮಂಥನವೊಂದೇ ನಡೆಯುವುದಿಲ್ಲ; ಇಲ್ಲಿ ಕನ್ನಡದ ಬಹುಮುಖೀ ಶೋಧಗಳು, ಪರಂಪರೆ, ಸಂಸ್ಕೃತಿಯ ನೆಲೆಯಲ್ಲೂ ನಡೆಯುತ್ತದೆ ಅನ್ನುವುದು ಉಲ್ಲೇಖನೀಯ. ನಾಡಿನ ವಿವಿಧ ಸೃಷ್ಟಿಶೀಲ ಕ್ಷೇತ್ರಗಳ ವಿದ್ವಾಂಸರನ್ನು ಮತ್ತು ಅವರ ಚಿಂತನೆಯನ್ನು, ಕಲಾವಿದರ ಪ್ರತಿಭೆಯನ್ನು ನೋಡುವ ಅವಕಾಶ ಸಹೃದಯರಿಗೆ ದೊರೆಯುತ್ತದೆ.
ಕುಶಲ ಕಲಾವಿದರು, ಕುಶಲಕರ್ಮಿಗಳು ಕೂಡ ಭಾಗವಹಿಸುತ್ತಿದ್ದಾರೆ. ಪುಸ್ತಕ ಪ್ರದರ್ಶನ, ಮಾರಾಟ ಇಲ್ಲಿನ ಇನ್ನೊಂದು ಆಕರ್ಷಣೆ. ದಿನದಿಂದ ದಿನಕ್ಕೆ ಹೆಚ್ಚುವ ಪ್ರೇಕ್ಷಕರಿಗೆ ಇಲ್ಲಿ ಬಹುಬಗೆಯ ಭೋಜನವನ್ನು ಉಣ ಬಡಿಸುತ್ತಿರುವುದು ಇನ್ನೊಂದು ವಿಶೇಷ. ಸಮಯಪಾಲನೆ ಇಲ್ಲಿನ ಆದರ್ಶ. ಕನ್ನಡದ ಮನಸ್ಸುಗಳನ್ನು ಈ ರೀತಿಯಾಗಿ ತಲುಪುವ ಪರಿಯು ನಾಡಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
18 ದೇವಸ್ಥಾನ, 18 ಬಸದಿಗಳು, 18 ಪುಷ್ಕರಿಣಿಗಳ ಮೂಡಬಿದಿರೆಗೆ ನುಡಿಸಿರಿಯ ಜತೆಯಲ್ಲಿ ಪ್ರವಾಸೋದ್ಯಮದ ಸಾಧ್ಯತೆಗಳು ಅನಾವರಣಗೊಳ್ಳುವುದನ್ನು ಗಮನಿಸಬಹುದಾಗಿದೆ. ಶುಕ್ರವಾರ ಬೆಳಗ್ಗೆ ಮೆರವಣಿಗೆಯೊಂದಿಗೆ 3 ದಿನಗಳ ನುಡಿಸಿರಿ ಸಂಭ್ರಮ ಅನಾವರಣಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nandini Brand: 50 ಐಸ್ ಕ್ರೀಂ ಮಾರುಕಟ್ಟೆಗೆ
Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು
Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು