ಮಳವೂರು: ಕೆರೆಗಳಲ್ಲಿ ಹೂಳು, ತೋಡುಗಳಲ್ಲಿ ಕಶ್ಮಲ ನೀರು


Team Udayavani, Oct 30, 2018, 12:40 PM IST

30-october-6.gif

ಬಜಪೆ : ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 11 ಕೆರೆಗಳಿದ್ದು, ಅದರಲ್ಲಿ ಒಂದು ಕೆರೆ ಅಭಿವೃದ್ಧಿಯಾಗಿದೆ. ಈ ಭಾಗದ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು, ತೋಡುಗಳಲ್ಲಿ ಕಶ್ಮಲ ನೀರು ಸೇರಿಕೊಂಡಿರುವುದರಿಂದ ಇದ್ದರೂ ಉಪಯೋಗಕ್ಕಿಲ್ಲದಂತಾಗಿದೆ.

ನಗರ ಭಾಗದ ವಿದ್ಯಾರ್ಥಿಗಳಿಗೆ ಈಜು ಕಲಿಯಲು ಅಲ್ಲಲ್ಲಿ ಸ್ವಿಮ್ಮಿಂಗ್‌ ಪೂಲ್‌ ಗಳಿರುತ್ತವೆ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಕೆರೆ, ತೋಡುಗಳೇ ಈಜು ಕಲಿಯಲು ಇರುವ ಪ್ರಮುಖ ಸ್ಥಳ. ಆದರೆ ಈ ಭಾಗದಲ್ಲಿ ಮಾತ್ರ ಕೆರೆ, ತೋಡುಗಳಿದ್ದರೂ ಅದರಲ್ಲಿ ಇಳಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಪ್ರಧಾನವಾದ ಈ ಭಾಗದಲ್ಲಿ ಹೊಲಗದ್ದೆಗಳಲ್ಲಿ ಕೆಲಸ ಮಾಡಿ ಬರುವ ಕೃಷಿಕರು ಹತ್ತಿರವಿರುವ ಕೆರೆ, ಕೃಷಿ ಬಾವಿ, ನದಿ, ತೋಡುಗಳಲ್ಲಿ ತಮ್ಮ ಕೋಣಗಳು, ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸುತ್ತಿದ್ದರೆ, ಅವರ ಮಕ್ಕಳು ನೀರಿನಲ್ಲಿ ಈಜಾಡಿ ಸಂಭ್ರಮಿಸುತ್ತಿದ್ದರು. ಇನ್ನು ಸಾಂಪ್ರದಾಯಿಕ ಕೃಷಿ ವಿಧಾನವನ್ನು ಅನುಸರಿಸುತ್ತಿದ್ದವರು ಕಡಿಮೆ ನೀರಿರುವ ಕೆರೆಗಳ ಮಧ್ಯೆ ಸ್ವಲ್ಪ ಹೊಯ್ಗೆ ತೆಗೆದು ಗುಂಡಿ ಮಾಡಿ ನೀರು ಸಂಗ್ರಹವಾಗುವಂತೆ ಮಾಡುತ್ತಿದ್ದರು. ಇದರಲ್ಲಿ ಪ್ರತಿನಿತ್ಯವು ಕೋಣಗಳನ್ನು ತೊಳೆಯುತ್ತಿದ್ದುದರಿಂದ ನೀರಿನಲ್ಲಿ ಪಾಚಿನಿಲ್ಲದೆ ಸ್ವಚ್ಛವಾಗಿ ಇರುತ್ತಿತ್ತು.

ಇದಕ್ಕಾಗಿಯೇ ಅಲ್ಲಲ್ಲಿ ಕೆರೆಗಳು ನಿರ್ಮಾಣವಾಗುದ್ದವು. ವರ್ಷವಿಡೀ ಆ ಕೆರೆಗಳಲ್ಲಿ ನೀರು ಇರುತ್ತಿತ್ತು. ದೊಡ್ಡವರ ಜತೆ ಮಕ್ಕಳು ಬಂದು ಇಲ್ಲಿ ಈಜು ಕಲಿಯುತ್ತಿದ್ದರು. ರಜಾದಿನಗಳಲ್ಲಿ ಈ ಕೆರೆಗಳು ಪ್ರಮುಖ ಆಕರ್ಷಣೆಯೇ ಕೇಂದ್ರವಾಗಿರುದ್ದವು. ಆದರೆ ಈಗ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೆರೆಗಳ ಅತಿ ಕ್ರಮಣ, ನಿಂತ ನೀರಿ ನಲ್ಲಿ ಪಾಚಿ, ಹೂಳು ತುಂಬಿ ಕೆರೆಗಳೇ ಇಲ್ಲವಾಗಿವೆ. ಅಲ್ಲದೇ ಡಿಸೆಂಬರ್‌ ತಿಂಗಳ ವೇಳೆಗೆ ನೀರು ಬತ್ತಿ ಹೋಗುತ್ತಿದೆ.

ಹರಿಯುವ ತೋಡುಗಳು ಗ್ರಾಮಗಳಲ್ಲಿ ಈಜು ಕಲಿಕೆಗಿರುವ ಸ್ಥಳವಾಗಿದ್ದವು. ಮಳೆಗಾಲದಲ್ಲಿ ಇದರಲ್ಲಿ ನೀರು ತುಂಬಿ ಹರಿದರೆ, ಬೇಸಗೆಯಲ್ಲಿ ಹರಿಯುವ ತೋಡಿಗೆ ಕಟ್ಟ ಕಟ್ಟಿ ನೀರನ್ನು ಕೃಷಿಗೆ ಬಳಸುತ್ತಿದ್ದರು. ಅದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ತೋಡಿನ ನೀರಿನಲ್ಲಿ ಇಳಿಯುವುದೇ ಕಷ್ಟ. ತ್ಯಾಜ್ಯ ನೀರು, ಚರಂಡಿ ಕೊಳಚೆ ಇದರಲ್ಲಿ ಹರಿಯುವುದರಿಂದ ದುರ್ಗಂಧಯುಕ್ತವಾದ ಹರಿಯುವ ನೀರಿಗೆ ಇಳಿಯುವುದೇ ಕಷ್ಟ. ಹೀಗಾಗಿ ಈಜು ಕಲಿಯಲು ಹೇಗೆ ಸಾಧ್ಯವಿದೆ? ಹೀಗಾಗಿ ಈಜು ಕಲಿಯುವ ಆಸಕ್ತಿ ಉಳ್ಳವರಿಗೂ ಇಲ್ಲಿ ಅವಕಾಶವಿಲ್ಲದಂತಾಗಿದೆ.

ಗ್ರಾಮಗಳಲ್ಲೂ ಈಜುಕೊಳ ನಿರ್ಮಾಣವಾಗಲಿ
ಈಜು ಜೀವರಕ್ಷಕ ವಿದ್ಯೆ. ಅದನ್ನು ಪ್ರತಿಯೊಬ್ಬರೂ ಕಲಿಯಬೇಕಿದೆ. ಹೀಗಿರುವಾಗ ಗ್ರಾಮೀಣ ಭಾಗದ ಮಕ್ಕಳು ಇದರಿಂದ ವಂಚಿತರಾಗುವುದು ಎಷ್ಟು ಸರಿ? ಹೀಗಾಗಿ ಪ್ರತಿ ಗ್ರಾಮ ಗ್ರಾಮಗಳಲ್ಲೂ ಈಜು ಕೊಳ, ಟಬ್‌ ಗಳನ್ನು ಸರಕಾರ ನಿರ್ಮಿಸಿಕೊಡಬೇಕಿದೆ. ಇಲ್ಲವಾದರೆ ಗ್ರಾಮೀಣ ಭಾಗದಲ್ಲಿ ಇರುವ ಕೆರೆ, ತೋಡುಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಣೆಗೆ ಸಮಿತಿ ರಚಿಸಿ, ನೈರ್ಮಲ್ಯ ಕಾಪಾಡಲು ಕ್ರಮಕೈ ಗೊಳ್ಳಬೇಕಿದೆ. 

ಈಜು ಕೊಳ ನಿರ್ಮಾಣವಾಗಬೇಕು
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ 1 ಎಕರೆ ಭೂಪರಿವರ್ತನೆ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಗಾಗಿ 1 ಲಕ್ಷ ರೂ. ಹಣ ವಸೂಲು ಮಾಡುತ್ತಿದೆ. ದೊಡ್ಡ ಲೇಔಟ್‌ ಸಂದರ್ಭದಲ್ಲಿ ಈಜುಕೊಳ ಹಾಗೂ ಇತರ ನಿರ್ಮಾಣಕ್ಕೆಂದು ವಸೂಲಾತಿ ನಡೆಯುತ್ತಿದೆ ಈ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆರೆ ಅಭಿವೃದ್ದಿ ಹಾಗೂ ಈಜು ಕೊಳ ನಿರ್ಮಾಣ ಮಾಡಬಹುದು. ನಾವು ಈಜು ಕೃಷಿ ಕೆರೆಯಲ್ಲಿ ಕಲಿತ್ತಿದ್ದವು. ಅದರೆ ಈಗಿನ ಮಕ್ಕಳಿಗೆ ಇದಕ್ಕೆ ಅವಕಾಶವಿಲ್ಲದಂತಾಗಿದೆ. ಇದಕ್ಕೆ ಕಾರಣ ಕೆರೆಯಲ್ಲಿ ಹೂಳು, ತೋಡುಗಳಲ್ಲಿ ಕಶ್ಮಲ ನೀರು ಹರಿಯುತ್ತಿರುವುದು.
– ಗಣೇಶ್‌ ಅರ್ಬಿ
ಅಧ್ಯಕ್ಷ, ಮಳವೂರು ಗ್ರಾ.ಪಂ. 

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.