ಕೈಗಾ ಸುತ್ತಮುತ್ತ ಹೆಚ್ಚಿದ ಕ್ಯಾನ್ಸರ್‌


Team Udayavani, Jun 23, 2018, 6:15 AM IST

kaiga-atomic-plant.jpg

ಕಾರವಾರ: ಕೈಗಾ ಅಣುಸ್ಥಾವರದ ಸುತ್ತ ಮುತ್ತಲ ಹಳ್ಳಿಗಳಲ್ಲಿ ಕ್ಯಾನ್ಸರ್‌ ಹೆಚ್ಚಿದೆ ಎಂಬ ಆಘಾತಕಾರಿ ವರದಿ ಬಹಿರಂಗವಾಗಿದೆ. ಮುಂಬೈನ ಟಾಟಾ ಮೆಮೂರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ ಅಧೀನದ ನುರಿತ ಸಿಬ್ಬಂದಿ 2010-13ರಲ್ಲಿ ಮಾಡಿದ ಸರ್ವೇ ವರದಿ 2018ರ ಮಾರ್ಚ್‌ನಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದು, ಅದೀಗ
ಬಹಿರಂಗವಾಗಿದೆ.

ಕಾರವಾರ ತಾಲೂಕಿನಲ್ಲೇ 316 ಕ್ಯಾನ್ಸರ್‌ ರೋಗಿಗಳು ಇದ್ದಾರೆಂಬ ಅಂಶ ಹೊರ ಬಂದಿದ್ದು, ಯಲ್ಲಾಪುರ,
ಅಂಕೋಲಾ, ಜೋಯಿಡಾ ತಾಲೂಕಿನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಸೇರಿದಲ್ಲಿ ಸಾವಿರ ದಾಟಿದೆ. ಆದರೆ ಈ
ಸಂಗತಿಯನ್ನು ರಹಸ್ಯವಾಗಿ ಇಡಲಾಗಿದೆ.

ಕಳೆದ 5 ವರ್ಷಗಳಿಂದ ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ ಸಿಬ್ಬಂದಿ ಇಲ್ಲಿನ ಆರೋಗ್ಯ ಇಲಾಖೆಯ
ಅಧೀನ ಕಚೇರಿಯಲ್ಲಿ ಪ್ರತ್ಯೇಕ ಶಾಖೆ ತೆರೆದು ದಿನನಿತ್ಯ ಕಾರವಾರ ತಾಲೂಕಿನ ನಿರ್ದಿಷ್ಟ ಹಳ್ಳಿಗಳಿಗೆ ತೆರಳಿ
ಜನರ ಆರೋಗ್ಯದ ಸ್ಥಿತಿಗತಿಗಳನ್ನು ದಾಖಲಿಸುತ್ತಿದ್ದಾರೆ. ಅಲ್ಲದೆ, ಯಲ್ಲಾಪುರ ತಾಲೂಕಿನ ಕೈಗಾ ಸಮೀಪದ ಕೆಲ
ಹಳ್ಳಿಗಳು, ಅಂಕೋಲಾ, ಜೋಯಿಡಾ ತಾಲೂಕಿನ ಕೆಲ ಹಳ್ಳಿಗಳು ಸಹ ಈ ಸರ್ವೇಯಲ್ಲಿ ಸೇರಿವೆ. ಈ ಸಂಬಂಧದ
ವರದಿಯ ಪ್ರತಿಯನ್ನು ಆರು ತಿಂಗಳಿಗೆ ಒಮ್ಮೆ ಸರ್ಕಾರಕ್ಕೆ ಮತ್ತು ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ಮುಂಬೈ
ಶಾಖೆಗೆ ಸಲ್ಲಿಸಲಾ ಗುತ್ತಿದೆ. ಸದಾನಂದಗೌಡರು ಮುಖ್ಯ ಮಂತ್ರಿಯಾಗಿದ್ದಾಗ ಪರಿಸರವಾದಿಗಳು ಪ್ರತ್ಯೇಕ ಸರ್ವೇಗೆ ಆಗ್ರಹಿಸಿದ್ದರು. ಸದಾನಂದಗೌಡರು ಮುಂಬೈನ ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಗೆ ಸರ್ವೇ ಜವಾಬ್ದಾರಿ ವಹಿಸಿದ್ದರು.

ಅಲ್ಲಿಂದ ಅಧ್ಯಯನ ನಡೆಯುತ್ತಲೇ ಇದೆ.ಕ್ಯಾನ್ಸರ್‌ ರೋಗಿಗಳ ಸಂಖ್ಯೆಯನ್ನು ಮಾತ್ರ ಬಹಿರಂಗ ಮಾಡದೆ ರಹಸ್ಯ
ಕಾಪಾಡಿಕೊಂಡು ಬರಲಾಗಿತ್ತು. ಆದರೆ ಇದೀಗ ಕಾರವಾರ ತಾಲೂಕಿನಲ್ಲೇ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಳವಾಗಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಕಾರವಾರ ತಾಲೂಕು ಒಂದರಲ್ಲೇ 316 ಕ್ಯಾನ್ಸರ್‌ ರೋಗಿಗಳು ಪತ್ತೆಯಾಗಿದ್ದು,2010 -2018ರವರೆಗೆ ಕ್ಯಾನ್ಸರ್‌ ರೋಗಿಗಳ ಪ್ರಮಾಣ ಶೇ.200 ರಷ್ಟು ಹೆಚ್ಚಾಗಿದೆ ಎಂಬ ಅಂಶ ಹೊರ ಬಂದಿದೆ. ಇದಕ್ಕೆ ಕೈಗಾ ಅಣುಸ್ಥಾವರದ ವಿಕಿರಣ ಕಾರಣವೇ ಎಂಬ ಅಂಶ ಮಾತ್ರ ಖಚಿತವಾಗಿಲ್ಲ.

ಎಲ್ಲೆಲ್ಲಿ ಚಿಕಿತ್ಸೆ?: ಕಾರವಾರ ತಾಲೂಕಿನ 316 ಕ್ಯಾನ್ಸರ್‌ ರೋಗಿಗಳು ಬೆಂಗಳೂರು, ಚೆನ್ನೈ, ಮಣಿಪಾಲ, 
ಮಂಗಳೂರು,ಹುಬ್ಬಳ್ಳಿ, ಮುಂಬೈ, ಗೋವಾ ಸೇರಿ ವಿವಿಧ 30 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. 129 ಪುರುಷರು, 187 ಜನ ಮಹಿಳೆಯರಲ್ಲಿ ಕ್ಯಾನ್ಸರ್‌ ಪತ್ತೆಯಾಗಿದೆ. ತಂಬಾಕು ಸೇವನೆ,ಗುಟ್ಕಾ, ಪಾನ್‌, ಅಡಕೆಯಿಂದ ಪುರುಷರಲ್ಲಿ ಕ್ಯಾನ್ಸರ್‌ಗೆ ಕಾರಣವಾಗಿದ್ದರೆ, ಮಹಿಳೆಯರಲ್ಲಿನ ಕ್ಯಾನ್ಸರ್‌ಗೆ ಬೇರೆಯದೇ ಕಾರಣವಿದೆ. ಚಿಪ್ಪೆಕಲ್ಲು, ಥಿಸರೇ, ಕಲ್ವಾ ಆಹಾರ ಸೇವನೆಯಿಂದ ಏನಾದರೂ ಕ್ಯಾನ್ಸರ್‌ ಬರುತ್ತಿದೆಯೇ ಎಂಬುದು ಅಧ್ಯಯನದಿಂದಷ್ಟೇ ತಿಳಿದು ಬರಬೇಕಿದೆ.

ಇತರ ದೇಶಗಳಲ್ಲಿ
ಅಣುಸ್ಥಾವರ ಘಟಕಗಳಿರುವ ಚೀನಾದ ಶಾಂಘೈ ನಗರ, ಜಪಾನ್‌ನ ಓಸಕಾ ನಗರ,ಫಿನ್‌ ಲ್ಯಾಂಡ್, ಬ್ರಿಟನ್‌ನ
ಆಕ್ಸ್‌ ಫ‌ರ್ಡ್‌, ಯುಎಸ್‌ಎ, ಫ್ರಾನ್ಸ್‌ನ ಹೌಟ್‌ರಿನ್‌ ನಗರಗಳಲ್ಲಿನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಗಮ ನಿಸಿದರೆ ಕಾರವಾರ ತಾಲೂಕಿನ ನಗರ, ಗ್ರಾಮೀಣ ಪ್ರದೇಶದಲ್ಲಿನ ಕ್ಯಾನ್ಸರ್‌ ರೋಗಿ ಗಳ ಪ್ರಮಾಣ ಕಡಿಮೆ ಎಂದು ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಯ ಅಧ್ಯಯನ ಸಂಸ್ಥೆ ಹೇಳಿದೆ.

ನಿರಾಕರಣೆ
ಕೈಗಾ ಘಟಕದ ವಿಜ್ಞಾನಿಗಳು ಮಾತ್ರ ಅಣುವಿಕಿರಣವೇ ಇಲ್ಲ. ಇನ್ನು ಕೈಗಾದಿಂದ ಕ್ಯಾನ್ಸರ್‌ ಬರಲು ಹೇಗೆ ಸಾಧ್ಯ ಎಂದು ವಾದಿ ಸುತ್ತಲೇ ಇದ್ದಾರೆ. ಅತಿ ಹೆಚ್ಚು ಪ್ರಮಾಣದಲ್ಲಿ ಅಣುಸ್ಥಾವರ ಉತ್ಪಾದನೆ ಸಹ ವಿಕಿರಣ ಹೆಚ್ಚು ಹೊರಸೂಸಲು ಕಾರಣ ಎಂದು ಅಣು ವಿದ್ಯುತ್‌ ವಿರೋಧಿ ಪರಿಸರ ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಈ ಬಗ್ಗೆ ಇದೀಗ ಆರೋಗ್ಯ ಸಚಿವರು, ಸರ್ಕಾರ ಮೌನ ಮುರಿಯಬೇಕಿದೆ.

– ನಾಗರಾಜ ಹರಪನಹಳ್ಳಿ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.