ವಿಷಯಗಳನ್ನು ಆರಿಸಿಕೊಂಡು “ವರ್ಡ್ಸ್ಮಿತ್’ ಆಗಬೇಕು
Team Udayavani, Feb 5, 2019, 12:30 AM IST
ಉಡುಪಿ: ಗೋಲ್ಡ್ಸ್ಮಿತ್ ಕುಸುರಿ ಕೆಲಸಗಳನ್ನು ಮಾಡುವಂತೆ, ಲೇಖಕ ಸಣ್ಣ ಸಣ್ಣ ವಿಷಯಗಳನ್ನು ಆರಿಸಿಕೊಂಡು “ವರ್ಡ್ಸ್ಮಿತ್’ ಆಗಬೇಕು ಎಂದು ಕುಂದಾಪುರ ಭಂಡಾರ್ಕಾರ್ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥ ಡಾ| ಹಯವದನ ಉಪಾಧ್ಯ ಆಶಿಸಿದರು.
ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ರವಿವಾರ ಸುಹಾಸಂ ಆಯೋಜಿಸಿದ ವಕ್ವಾಡಿ ಶ್ರೀರಾಜ್ ಎಸ್. ಆಚಾರ್ಯರ “ಕತ್ತಲೆಯ ಬೆತ್ತಲು’ ಕಥಾ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಲೇಖಕನಾದವನು ತನ್ನ ಮಾಧ್ಯಮ ಯಾವುದು? ಕತೆಗಾರನೋ? ಕಾದಂಬರಿಕಾರನೋ? ಕವಿಯೋ ಎಂದು ನಿಶ್ಚಯಿಸಿಕೊಂಡು ಮುಂದುವರಿಯಬೇಕು. ಭೈರಪ್ಪನವರು ಕಾದಂಬರಿಕಾರನೆಂದೇ ಗುರುತಿಸಿಕೊಂಡು ಮುಂದುವರಿದಂತೆ ಮುನ್ನಡೆಯಬೇಕು ಎಂದರು.
ಪುಸ್ತಕ ಬಿಡುಗಡೆಗೊಳಿಸಿದ ವಿಮರ್ಶಕ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಿದರು. ಕುಂದಾಪುರ ಭಂಡಾರ್ಕಾರ್ ಕಾಲೇಜಿನ ವಿದ್ಯಾರ್ಥಿನಿ ಕೀರ್ತಿ ಭಟ್ ಕೃತಿ ಪರಿಚಯಿಸಿದರು. ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ್ ಸ್ವಾಗತಿಸಿ ಸಹ ಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ನಿರ್ವಹಿಸಿದರು. ಸಂಧ್ಯಾ ಶೆಣೈ ವಂದಿಸಿದರು. ಶ್ರೀರಾಜ್ ಎಸ್. ಆಚಾರ್ಯರ ತಂದೆ, ತಾಯಿ ಉಪಸ್ಥಿತರಿದ್ದರು.
ಸರಕಾರದಿಂದ 8 ಕೋ.ರೂ. ಅನುದಾನ
ನಾನು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಯೂಟ್ಯೂಬ್ ಮೂಲಕ ಭಾಗವಹಿಸಿದ್ದೇನೆ. ಧಾರವಾಡದ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ವರದಿಯನ್ನು ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರಿಗೆ ದೂರವಾಣಿ ಕರೆ ಮೂಲಕ ವಿನಂತಿಸಿದಾಗ ಅವರಿಗೆ ಇದರ ಕುರಿತು ಏನೂ ಗೊತ್ತಿರಲಿಲ್ಲ. ನಾನು ಧಾರವಾಡ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಸರಕಾರ 8 ಕೋ.ರೂ. ಅನುದಾನ ನೀಡುತ್ತಿದೆ. ನೀವು ಯೂಟ್ಯೂಬ್ನಲ್ಲಿ ಕಲಾಪಗಳನ್ನು ಬಿತ್ತರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡೆ. ಇದು ಸಾಧ್ಯವಾಯಿತು.
– ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ