ಒಂದಾನೊಂದು ಕಾಲದಲ್ಲಿ  ಸಾಹಿತಿಗಳು ಸುಖವಾಗಿದ್ದರು ! 


Team Udayavani, Sep 2, 2018, 6:00 AM IST

6.jpg

ಒಂದಾನೊಂದು ಕಾಲದಲ್ಲಿ ಕನ್ನಡ ಸಾಹಿತಿಗಳು ಸುಖವಾಗಿದ್ದರು’- ಇನ್ನು ಕೆಲವು ಶತಮಾನಗಳ ಬಳಿಕ ಕನ್ನಡ ಸಾಹಿತ್ಯದ ಇಂದಿನ ಸ್ಥಿತಿಯ ಬಗ್ಗೆ ಮಾತನಾಡುವಾಗ ಉದ್ಧರಿಸಬಹುದಾದ ವಾಕ್ಯವಿದು. ಏಕೆಂದರೆ, ಈ ಕಾಲದ ಸಾಹಿತಿಗಳೇ ಹಾಗಿದ್ದಾರೆ !

ಸೂಕ್ಷ್ಮವಾಗಿ ಗಮನಿಸಿದರೆ ಪ್ರಜಾಪ್ರಭುತ್ವವನ್ನು ಅನುಸರಿಸುವ ದೇಶದಲ್ಲಿ ಸರಕಾರ ಯಾವುದೇ ವ್ಯಕ್ತಿಗೆ ಪ್ರಶಸ್ತಿ ಕೊಡುವುದು ಪ್ರಜಾತಂತ್ರಕ್ಕೆ ಅನುಗುಣವಾದ ಸಂಗತಿಯಲ್ಲ.  ಪ್ರಶಸ್ತಿ ಸ್ವೀಕರಿಸುವುದು ತಪ್ಪು. ಪ್ರಶಸ್ತಿ ಒಮ್ಮೆ ಸ್ವೀಕರಿಸಿದರೆ ಮತ್ತೆ ಹಿಂತಿರುಗಿಸುವುದು ಮತ್ತೂಂದು ದೊಡ್ಡ ತಪ್ಪು. ಅದರಲ್ಲಿಯೂ ಪ್ರಶಸ್ತಿಗಾಗಿ ಲಾಬಿ ನಡೆಸಿದರೆ ಅದು ಮಹಾತಪ್ಪು. ಅಕಾಡೆಮಿಯಾಗಲಿ, ಇಲಾಖೆಯಾಗಲಿ ನೀಡುವ ಪ್ರಶಸ್ತಿಯನ್ನು “ಬೇಡ’ ಎಂದು ನಿರಾಕರಿಸಿದವರು ಇಲ್ಲವೇ ಇಲ್ಲ ; ಇದ್ದರೂ ಅಪರೂಪಕ್ಕೆ ಒಬ್ಬರು, ಇಬ್ಬರು. ಇವೆಲ್ಲ ತಿಳಿದಿದ್ದೂ ಪ್ರಶಸ್ತಿಗಾಗಿ ಹಾತೊರೆಯುತ್ತ, ವೇದಿಕೆಯ ಮುಂಭಾಗದಲ್ಲಿ ಪ್ರಶಸ್ತಿ ಪುರಸ್ಕೃತರಿಗಾಗಿ ಇರಿಸಿದ ಆಸನದಲ್ಲಿ ಕುಳಿತು ಮುಜುಗರವನ್ನು ಅನುಭವಿಸುತ್ತಿರುವವರಂತೆ ಕೃತಕವಾಗಿ ಅಭಿನಯಿಸುತ್ತ, ಅಕಾಡೆಮಿ-ಪ್ರಾಧಿಕಾರಗಳ ಹುದ್ದೆಗಳಲ್ಲಿ ಸಾರ್ಥಕತೆ ಹೊಂದಲು ತವಕಿಸುವ ಸಾಹಿತಿಗಳು ಮತ್ತೆ ಹೇಗೆ ಇರುತ್ತಾರೆ?

ಹಾಗಾಗಿಯೇ “ಒಂದಾನೊಂದು ಕಾಲದಲ್ಲಿ ಕನ್ನಡ ಸಾಹಿತಿಗಳು ಸುಖವಾಗಿದ್ದರು!’

ಕತೆ-ಕಾವ್ಯ ಬರೆಯುವ ಎಲ್ಲ ಲೇಖಕರ ಆತ್ಮಕಥನಗಳಲ್ಲಿ ಅವರವರ ಹಿರಿಯರು ಮಹಾನುಭಾವರೇ ಆಗಿರುತ್ತಾರೆ, ಬಂಧುಗಳು ಊರಿಗೆ ಉಪಕಾರ ಮಾಡುವವರಾಗಿರುತ್ತಾರೆ. ಸ್ವ-ಸಮುದಾಯದವರಂತೂ ಊರಿಗೆ ಆಡ್ಯರಾಗಿರುತ್ತಾರೆ. ಅವರ ಸಮುದಾಯದವರೊಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಸಮಾಜವನ್ನು ಶೋಷಣೆ ಮಾಡಿರುತ್ತಾರೆ. ತಮ್ಮ ಬಗ್ಗೆ ಒಂದು ಅಭಿನಂದನ ಗ್ರಂಥ ಬಂದರೆ ಒಳ್ಳೆಯದಿತ್ತು ಎಂಬ ಭಾವನೆ ಇದ್ದರೂ ಅದನ್ನು ನೇರವಾಗಿ ಹೇಳದೆ ತಮ್ಮ ಅಭಿಮಾನಿಗಳ ಮೂಲಕ ಕಾರ್ಯಗತಗೊಳಿಸುವ ಸೌಜನ್ಯ ತೋರುತ್ತಾರೆ. ಕಾರಂತ, ಮಾಸ್ತಿ, ಬೇಂದ್ರೆಯವರಂಥ ಹಿರಿಯ ಸಾಹಿತಿಗಳು ಅನುಭವಿಸಿದ ತಳಮಳ ಇವರನ್ನು ಬಾಧಿಸುವುದಿಲ್ಲ. ಆ ಕಡೆಯವರಿಗೂ ಈ ಕಡೆಯವರಿಗೂ ಬೇಸರವಾಗದಂತೆ “ನಡುಪಥ’ದಲ್ಲಿ ನಡೆಯುತ್ತಾರೆ. ಯಾವುದೇ ಗೊಂದಲಗಳಿಲ್ಲದ ಕಾರಣ ಒಂದು ರೀತಿಯ ಸಂತೋಷದಿಂದಿರಲು ಸಾಧ್ಯವಾಗಿದೆ.

ಹಾಗಾಗಿಯೇ “ಒಂದಾನೊಂದು ಕಾಲದಲ್ಲಿ ಸಾಹಿತಿಗಳು ಸುಖವಾಗಿದ್ದರು’

ಎಲ್ಲ ಸಾಹಿತಿಗಳು ಪ್ರಶಸ್ತಿ, ಸಂಮಾನ, ಪ್ರಸಿದ್ಧಿ, ಅಂಕಣ, ಫೊಟೊ, ಪಿಂಚಣಿ, ಸ್ವಜನಪ್ರೀತಿ-ಗಳಲ್ಲಿ ಮುಳುಗಿಹೋಗಿ ಒಂದು ರೀತಿಯ “ಕಂಫ‌ರ್ಟ್‌ ಝೋನ್‌’ನಲ್ಲಿ ಬದುಕುತ್ತಿದ್ದಾರೆ. ಸಾಹಿತ್ಯ ಗೋಷ್ಠಿಗಳು, ಸಮ್ಮೇಳನಗಳು ಓದುಗರನ್ನು ಉತ್ತೇಜಿಸಬೇಕು ಎಂಬುದು ನಿಜವೇ ; ಆದರೆ, ಸಾಹಿತಿಗಳ “ಕಂಫ‌ರ್ಟ್‌ ಝೋನ್‌’ಗಳನ್ನು ಕೊಂಚವಾದರೂ ಅಲುಗಾಡಿಸಬೇಕು, ಆತ್ಮಸಾಕ್ಷಿಯನ್ನು ಪ್ರಶ್ನಿಸಬೇಕು. ಹಾಗಾದರೆ ಮಾತ್ರ ಸಾರ್ಥಕ.

ಕುಮಾರ ಎನ್‌.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.