ನೀನಾಸಂನಲ್ಲಿ ಬಿ. ವಿ. ಕಾರಂತ ರಂಗಸಂಕೀರ್ಣ


Team Udayavani, Dec 2, 2018, 6:00 AM IST

s-10.jpg

ಕೋಟ ಶಿವರಾಮ ಕಾರಂತ ಮತ್ತು ಬಾಬುಕೋಡಿ ವೆಂಕಟರಮಣ ಕಾರಂತ- ಕನ್ನಡನಾಡು ಇಡೀ ದೇಶದಲ್ಲಿಯೇ ಹೆಮ್ಮೆ ಪಡುವಂಥ ಎರಡು ಹೆಸರುಗಳಿವು. “ಕಾರಂತ’ ಎಂದರೆ ಒಂದು ಕುಲನಾಮ ಎಂಬುದು ಸಾಹಿತ್ಯ ಮತ್ತು ರಂಗಭೂಮಿಯ ಮಂದಿಗೆ ಮರೆತೇಹೋದಂತಿದೆ, ಅದು ಸಮಗ್ರ ಸಮಾಜಕ್ಕೆ ಸಲ್ಲತಕ್ಕದ್ದೇನೋ ಎಂಬ ಭಾವ ಮೂಡಿದೆ. ಆ ಇಬ್ಬರ ಅಸಾಧಾರಣ ಸಾಧನೆಯ ಪ್ರತೀಕವದು. ಹೆಗ್ಗೋಡಿನ ನೀನಾಸಂಗೆ ಹೋದವರೆಲ್ಲ “ಶಿವರಾಮ ಕಾರಂತ ರಂಗಮಂದಿರ’ವನ್ನು ನೋಡಿಯೇ ಇರುತ್ತೀರಿ. ಅದು, ನೀನಾಸಂನ ಸ್ಥಾಪಕರಾದ ಕೆ. ವಿ. ಸುಬ್ಬಣ್ಣ ಅವರು ಕನ್ನಡದ ಮಹಾನ್‌ ಲೇಖಕನಿಗೆ ಕೊಟ್ಟಂಥ ಸಂಮಾನ. ಇನ್ನು ಮುಂದಿನ ದಿನಗಳಲ್ಲಿ ನೀನಾಸಂ ಹೋಗುವವರು “ಬಿ. ವಿ. ಕಾರಂತ ರಂಗಸಂಕೀರ್ಣ’ ವನ್ನು ನೋಡಲಿರುವಿರಿ. ಅದು, ಶ್ರೇಷ್ಠ ರಂಗಕರ್ಮಿಯ ನೆನಪಿಗೆ ಕೆ. ವಿ. ಅಕ್ಷರ ಅವರು ಸಲ್ಲಿಸುತ್ತಿರುವ ಗೌರವ. “ಬಿ. ವಿ. ಕಾರಂತ ರಂಗ ಸಂಕೀರ್ಣ’ದ ನಿರ್ಮಾಣದ ಹಿಂದೆ ಬಾಬುಕೋಡಿ ಬಿ. ವಿ. ಕಾರಂತ ರಂಗ ಪ್ರತಿಷ್ಠಾನ ರಿ., ಬೆಂಗಳೂರು ಇದರ ಸಂಕಲ್ಪವಿದೆ, ಪರಿಶ್ರಮವಿದೆ. 

ಬಿ. ವಿ. ಕಾರಂತರು ಮತ್ತು ಪ್ರೇಮಾ ಕಾರಂತರು ನಮ್ಮೊಂದಿಗೆ ಇರುವಾಗಲೇ ಅವರ ಮಾರ್ಗದರ್ಶನದಲ್ಲಿ, 2000ನೆಯ ಇಸವಿಯಲ್ಲಿ, ಈ ಪ್ರತಿಷ್ಠಾನ ಸ್ಥಾಪನೆಗೊಂಡಿತ್ತು. “ನೀವೇ ಮ್ಯಾನೇಜಿಂಗ್‌ ಟ್ರಸ್ಟಿಯಾಗಿ’ ಎಂದು  ಬಿ. ವಿ. ಕಾರಂತರು ನನಗೆ ಸೂಚಿಸಿದ್ದರು. ಅದನ್ನು ಅಕ್ಷರಶಃ ಆದೇಶವಾಗಿ ಸ್ವೀಕರಿಸಿದ್ದೆ. 2002ರಲ್ಲಿ ಬಿ. ವಿ. ಕಾರಂತರು ನಿಧನರಾದರು. ಐದು ವರ್ಷಗಳ ಬಳಿಕ ಪ್ರೇಮಾಕಾರಂತರು ನಮ್ಮನ್ನಗಲಿದರು. ಆ ಬಳಿಕ ಬಿ. ವಿ. ಕಾರಂತರ ಸಾಧನೆಯನ್ನು ಪ್ರತಿವರ್ಷ ಸ್ಮರಿಸಿಕೊಳ್ಳುವ ಉದ್ದೇಶದಿಂದ “ಬಿ. ವಿ. ಕಾರಂತ ರಂಗನಮನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹಾಕಿಕೊಳ್ಳಲಾಯಿತು. ಮೊದಲ ಕಾರ್ಯಕ್ರಮ ನಡೆದದ್ದು ಬೆಂಗಳೂರಿನಲ್ಲಿ. ಮುಂದಿನ ವರ್ಷಗಳಲ್ಲಿ ಮುಂಬಯಿ, ಇಳಕಲ್‌, ಬಿಜಾಪುರ. ಸಾಗರ, ಧಾರವಾಡ, ಶಿವಮೊಗ್ಗ, ಉಡುಪಿ, ತೀರ್ಥಹಳ್ಳಿ- ಹೀಗೆ ವಿವಿಧ ಕಡೆಗಳಲ್ಲಿ ಮೂರುದಿನಗಳ ವಿಚಾರಸಂಕಿರಣ ಮತ್ತು ಬಹುಭಾಷಾ ನಾಟಕೋತ್ಸವಗಳನ್ನು ಆಯೋಜಿಸಿಕೊಂಡು ಬರಲಾಗಿದೆ.

ನಾಟಕಪ್ರಿಯರ ನೆನಪಿನಲ್ಲಿ ಬದುಕುತ್ತಿರುವ ಬಿ. ವಿ. ಕಾರಂತರು

ಜೊತೆಗೆ, ಬಿ. ವಿ. ಕಾರಂತರ ಹೆಸರನ್ನು ಶಾಶ್ವತವಾಗಿ ಉಳಿಸುವ ಸ್ಮಾರಕವನ್ನು ನಿರ್ಮಿಸುವ ಕನಸು ಇತ್ತು. ಅದು, ಕೇವಲ ಸ್ಥಾವರವಾಗದೆ, ಅದರೊಳಗೆ ಕ್ರಿಯಾಶೀಲವಾದ ಜಂಗಮತ್ವವಿದ್ದರೆ ಮಾತ್ರ ಸಾರ್ಥಕವೆಂಬ ಅರಿವು ಕೂಡ ಇತ್ತು. ಬೆಂಗಳೂರಿನ ಗಿರಿನಗರದಲ್ಲಿರುವ ಬಿ. ವಿ. ಕಾರಂತರ ಮನೆಯಲ್ಲಿ ಪುಸ್ತಕಗಳೂ ಸೇರಿದಂತೆ ಅಮೂಲ್ಯ ವಸ್ತುಗಳ ಸಂಗ್ರಹಗಳಿದ್ದವು. ಕಾರಂತರು ಹೇಳಿಕೇಳಿ ರ‌ಂಗಸಂಗೀತ ಪ್ರಕಾರದಲ್ಲಿ  ಹೊಸಶಕೆಯನ್ನು ಆರಂಭಿಸಿದವರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನಪದ, ಶಾಸ್ತ್ರೀಯ ವಾದ್ಯ ಪರಿಕರಗಳೆಲ್ಲ ಅವರಲ್ಲಿದ್ದವು. ನೂರೈವತ್ತರಿಂದ ಇನ್ನೂರಕ್ಕಿಂತಲೂ ವೈವಿಧ್ಯಗಳಿದ್ದವು. ವಾದ್ಯವಲ್ಲವೆಂದು ಭಾವಿಸಿದ ವಸ್ತುಗಳೂ ಅವರ ಕೈಯಲ್ಲಿ ನಾದ ಹೊರಡಿಸುತ್ತಿದ್ದವು. ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಸಂಘಟಕರಾಗಿದ್ದ ಮಣಿಪಾಲದ ವಿಜಯನಾಥ ಶೆಣೈಯವರು ತಮ್ಮ “ಹೆರಿಟೇಜ್‌ ವಿಲೇಜ್‌’ನಲ್ಲಿ ಬಿ. ವಿ. ಕಾರಂತರ ವಾದ್ಯಪರಿಕರಗಳ ಸಂಗ್ರಹಾಲಯವನ್ನು ಸಂಯೋಜಿಸುವ ಬಗ್ಗೆ ಅವರಲ್ಲಿಯೇ ಮಾತನಾಡಿದ್ದರು. ಅದಕ್ಕೆ ಬಿ. ವಿ. ಕಾರಂತರು ಒಪ್ಪಿಗೆ ಸೂಚಿಸಿದ್ದರು ಕೂಡ. ಈಗ ಇಬ್ಬರೂ ಇಲ್ಲ. ಆದರೆ, ವಾದ್ಯಪರಿಕರಗಳೆಲ್ಲವನ್ನು ಮಣಿಪಾಲದ ಹೆರಿಟೇಜ್‌ ವಿಲೇಜ್‌ಗೆ ಒಪ್ಪಿಸಲಾಗಿದ್ದು ರಂಗಾಸಕ್ತರು ಅದನ್ನು ಅಲ್ಲಿಯೇ ವೀಕ್ಷಿಸುವ ಅವಕಾಶವಿದೆ.  

ಬಿ. ವಿ. ಕಾರಂತರ ಬಳಿ ಸುಮಾರು ಹನ್ನೆರಡು ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದವು. ಅದರಲ್ಲಿ ದೇಶ-ವಿದೇಶದ ಹಲವು ಭಾಷೆಗಳ, ಹಲವು ಪ್ರಾಂತ್ಯಗಳ ರಂಗಭೂಮಿಯ ಕುರಿತ ಗ್ರಂಥಗಳಿದ್ದವು. ಈಗ ಹೆಗ್ಗೊàಡಿನ ನೀನಾಸಂನಲ್ಲಿ ನಿರ್ಮಾಣಗೊಂಡಿರುವ ರಂಗಸಂಕೀರ್ಣಕ್ಕೆ ಈ ಎಲ್ಲ ಪುಸ್ತಕಗಳನ್ನು ಒದಗಿಸಲಾಗಿದೆ. ಅದನ್ನು ಒಪ್ಪವಾಗಿ ಜೋಡಿಸಿಡುವ ಮತ್ತು ದಾಖಲಾತಿ ಮಾಡುವ ಕೆಲಸಗಳು ನಡೆದಿವೆ. ರಂಗಭೂಮಿಯ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಆಸಕ್ತರಾದವರಿಗೆ ಆಸರೆ ನೀಡುವುದು ಈ ರಂಗಸಂಕೀರ್ಣದ ಮುಖ್ಯ ಉದ್ದೇಶ. ಪುಸ್ತಕಗಳನ್ನು ಪರಾಮರ್ಶನಕ್ಕೆ ಬಳಸುವುದಕ್ಕೂ ಅವಕಾಶವಿದೆ. ಗ್ರಂಥಾಲಯ, ಪಡಸಾಲೆ, ಚರ್ಚಾಕೊಠಡಿ, ವಾಸ್ತವ್ಯಕೊಠಡಿಗಳು ಸೇರಿದಂತೆ ಈ ರಂಗಸಂಕೀರ್ಣದ ಕಟ್ಟೋಣಕ್ಕೆ ಒಂದು ಮಹಡಿ ಇದೆ. ಗೋಡೆಗಳಿಗೆ ಮಣ್ಣಿನ ಬಣ್ಣವನ್ನೇ ಬಳಿದುಕೊಂಡು, ನೀನಾಸಂನ ಉಳಿದ ಕಟ್ಟಡಗಳಿಗೆ ಅನುರೂಪದ ಸರಳ ರಚನೆ ಇದು. ಇದನ್ನು ಕಟ್ಟುವಲ್ಲಿ ಅನೇಕ ಸಹೃದಯಿ ದಾನಿಗಳು ಸಹಕರಿಸಿದ್ದಾರೆ. ರಂಗಾಧ್ಯಯನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ಬಿ. ವಿ. ಕಾರಂತ ಫೆಲೋಶಿಪ್‌’ನ್ನು ಆರಂಭಿಸುವ ಪ್ರಸ್ತಾವನೆಯೂ ಇದೆ. ಬಿ. ವಿ. ಕಾರಂತರ ಸಂಗ್ರಹದಲ್ಲಿದ್ದ ಹಳೆಯ ಕಾಲದ ಧ್ವನಿಸುರುಳಿಗಳನ್ನು ಕಂಪ್ಯೂಟರ್‌ ತಂತ್ರಜ್ಞಾನದ ಮೂಲಕ ಕಾಪಿಡುವ ಯೋಜನೆಯೂ ಮುಂದಿದೆ.

ಬಿ. ವಿ. ಕಾರಂತರಿಗೆ ಸಂಬಂಧಿಸಿದ ವಸ್ತುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಮೈಸೂರಿನ ರಂಗಾಯಣದಲ್ಲಿ ಸಂಗ್ರಹಾಲಯ ಸ್ಥಾಪಿಸುವ ಯೋಜನೆ ಕನ್ನಡ-ಸಂಸ್ಕೃತಿ ಇಲಾಖೆಯ ಮುಂದೆ ಇತ್ತು. ಆದರೆ, ಎಂಟು ವರ್ಷ ಕಳೆದರೂ ಈ ಕುರಿತು ರಚನಾತ್ಮಕವಾದ ಹೆಜ್ಜೆಯನ್ನಿಡಲಿಲ್ಲ. ಅಲ್ಲದೆ, ಈ ದಿನಗಳಲ್ಲಿ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ವಿಶ್ವಾಸಪಡುವುದು ಕೊಂಚ ಕಷ್ಟವೇ. ಅನುದಾನವಿದ್ದರೆ ಏನಾದರೂ ಮಾಡಿಕೊಂಡಿರುತ್ತೇವೆ, ಇಲ್ಲದಿದ್ದರೆ ಇಲ್ಲ ಎಂಬಂಥ ನಿಸ್ತೇಜ ವಾತಾವರಣ ಸರಕಾರಿ ವಲಯಗಳಲ್ಲಿದೆ. ಆದರೆ, ನೀನಾಸಂನಂಥ ಸಂಸ್ಥೆ ಹೆಚ್ಚು ರಚನಾತ್ಮಕವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಪರಿಶ್ರಮವಹಿಸಿ ಸರಕಾರ ಮತ್ತು ಸರಕಾರೇತರ ವಲಯದಿಂದ ಸಂಪನ್ಮೂಲಗಳನ್ನು ಸಂಗ್ರಹಿಸಿ ನಿರಂತರ ಚಟುವಟಿಕೆಗಳನ್ನು ನಡೆಸುತ್ತಿದೆ. ಬಿ. ವಿ. ಕಾರಂತರಂತೂ ನೀನಾಸಂನ ಜೊತೆಗೆ ನಿರಂತರ ಸಂಬಂಧವಿರಿಸಿಕೊಂಡವರು. ಬಿ. ವಿ. ಕಾರಂತರು ನಿರ್ದೇಶಿಸಿದ ಗೋಕುಲನಿರ್ಗಮನದಂಥ ನಾಟಕವನ್ನು ರಂಗಾಸಕ್ತರು ಮರೆಯಲು ಸಾಧ್ಯವೇ ಇಲ್ಲ. ಈ ಎಲ್ಲ ದೃಷ್ಟಿಗಳಲ್ಲಿಯೂ ನೀನಾಸಂನಲ್ಲಿ ಬಿ. ವಿ. ಕಾರಂತರ ರಂಗ ಸಂಕೀರ್ಣವೊಂದು ಸ್ಥಾಪನೆಗೊಂಡಿರುವುದು ಹೆಚ್ಚು ಅರ್ಥಪೂರ್ಣ. ಇವತ್ತು ಹೆಗ್ಗೋಡಿನಲ್ಲಿ “ಬಿ. ವಿ. ಕಾರಂತ ರಂಗಸಂಕೀರ್ಣ’ ಉದ್ಘಾಟನೆಗೊಳ್ಳುತ್ತಿದೆ. 

ಎಂ. ಜಯರಾಮ ಪಾಟೀಲ 

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.