ಬಾರ್‌ ನಲ್ಲಿ ಜಗಳವಾಡಿ ಜೈಲು ಸೇರಿದ್ದ ಸ್ಟೋಕ್ಸ್‌ ಈಗ ವಿಶ್ವ ಗೆದ್ದ ಸಾಧಕ

ಕೆಲ ವಷಗಳ ಹಿಂದೆ ಇಂಗ್ಲೆಂಡ್‌ ಗೆ ವಿಲನ್‌ ಆಗಿದ್ದ ಸ್ಟೋಕ್ಸ್‌ ಇಂದು ಹೀರೋ

Team Udayavani, Jul 15, 2019, 3:55 PM IST

ben

ಲಾರ್ಡ್ಸ್:‌ ವಿಶ್ವಕಪ್‌ ನ ಉದ್ಘಾಟನಾ ಪಂದ್ಯದಲ್ಲೇ ಶತಮಾನದ ಕ್ಯಾಚ್‌ ಪಡೆದ 27ರ ಯುವಕ ಅಂತಿಮ ಪಂದ್ಯದಲ್ಲಿ ಕ್ರಿಕೆಟ್‌ ಜನಕರ 44 ವರ್ಷದ ಕನಸು ನನಸು ಮಾಡಿದ  ಸಾಧಕ. ಟಿ- ಟ್ವೆಂಟಿ ವಿಶ್ವಕಪ್‌ ಫೈನಲ್‌ ನಲ್ಲಿ ಕೊನೆಯ ಓವರಿಗೆ 19 ರನ್‌ ಬಿಟ್ಟು ಕೊಟ್ಟ ಆಂಗ್ಲರ ಪಾಲಿನ ವಿಲನ್‌, ನೈಟ್‌ ಕ್ಲಬ್‌ ನಲ್ಲಿ ಗಲಾಟೆ ಮಾಡಿ ಜೈಲು ಸೇರಿದ್ದ ಪುಂಡ ಯುವಕ, ಇಂದು ಇಡೀ ಇಂಗ್ಲೆಂಡ್‌ ಎಂದೂ ಮರೆಯದ ಹೀರೋ.

ಇದೇ ನೋಡಿ, ಒಬ್ಬ ಆಟಗಾರ ತನ್ನ ಪ್ರಯತ್ನ, ಛಲ, ಸಾಧನೆಯಿಂದ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇಂಗ್ಲೆಂಡ್‌ ನ ಆಟಗಾರ ಬೆನ್‌ ಸ್ಟೋಕ್ಸ್‌ ಸಾಕ್ಷಿ. 2011ರಲ್ಲಿ ಆಂಗ್ಲರ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಬೆನ್‌ ಸ್ಟೋಕ್ಸ್‌ ಹೆಚ್ಚು ಸುದ್ದಿಯಾಗಿದ್ದು ಮೈದಾನದ ಹೊರಗೆಯೇ ! ಕುಡಿತ, ಅತೀ ವೇಗದ ಕಾರು ಚಾಲನೆ, ಬಾರು, ನೈಟ್‌ ಕ್ಲಬ್‌ ಗಳಲ್ಲಿ ಹೊಡೆದಾಟ ಹೀಗೆ ತನ್ನ ಪುಂಡಾಟಗಳಿಂದಲೇ ಸುದ್ದಿಯಾಗುತ್ತಿದ್ದ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಬ್ಯಾಡ್‌ ಬಾಯ್.‌

2018ರಲ್ಲಿ ಬ್ರಿಸ್ಟೋಲ್‌ ನಲ್ಲಿ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಏಕದಿನ ಪಂದ್ಯ ಆಯೋಜನೆಯಾಗಿತ್ತು. ಈ ಪಂದ್ಯಕ್ಕೆ ಮುನ್ನಾದಿನ ಹತ್ತಿರದ ನೈಟ್‌ ಕ್ಲಬ್‌ ಒಂದಕ್ಕೆ ಸಹ ಆಟಗಾರ ಅಲೆಕ್ಸ್‌ ಹೇಲ್ಸ್‌ ಜೊತೆ ಹೋಗಿದ್ದ ಬೆನ್‌ ಅಲ್ಲಿ ಕುಡಿದ ಮತ್ತಿನಲ್ಲಿ ಓರ್ವನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದರು. ಆ ಗಲಾಟೆಯಲ್ಲಿ ಸ್ಟೋಕ್ಸ್‌ ಕೈಗೂ ಪೆಟ್ಟಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಸ್ಟೋಕ್ಸ್‌ ಮತ್ತು ಹೇಲ್ಸ್‌ ರನ್ನು ಬಂಧಿಸಿದ್ದರು. ಆ ರಾತ್ರಿಯನ್ನು ಜೈಲಿನಲ್ಲೇ ಕಳೆದಿದ್ದ ಅವರಿಬ್ಬರು ಬಿಡುಗಡೆಯಾದರೂ ನಂತರದ ಆಶಸ್‌ ಸರಣಿಯನ್ನು ತಪ್ಪಿಸಿ ಕೊಂಡಿದ್ದರು.

ಟಿ ಟ್ವೆಂಟಿ ಫೈನಲ್‌ ನಲ್ಲಿ ವಿಲನ್‌
2016ರ ಟಿ-ಟ್ವೆಂಟಿ ವಿಶ್ವಕಪ್‌ ಫೈನಲ್‌ ಪಂದ್ಯ. ಕೊಲ್ಕತ್ತಾದ ಈಡನ್‌ ಗಾರ್ಡನ್‌ ನಲ್ಲಿ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಎದುರಾಗಿದ್ದವು. ಎರಡನೇ ಬಾರಿ ಚುಟುಕು ಮಾದರಿಯ ಪ್ರಶಸ್ತಿ ಎತ್ತುವ ಅಭಿಲಾಷೆಯೊಂದಿಗೆ ಕಣಕ್ಕಿಳಿದಿದ್ದ ಆಂಗ್ಲರು ಗಳಿಸಿದ್ದು 155 ರನ್.‌ ಉತ್ತಮ ಬೌಲಿಂಗ್‌ ಕೂಡಾ ನಡೆಸಿದ್ದ ಇಂಗ್ಲೆಂಡ್‌, ಕೊನೆಯ ಓವರ್‌ ನಲ್ಲಿ ವಿಂಡಿಸ್‌ ಗೆ 19 ರನ್‌ ತೆಗೆಯುವ ಕಠಿಣ ಗುರಿ ನೀಡಿತ್ತು. ನಾಯಕ ಮಾರ್ಗನ್‌  ನಿರ್ಣಾಯಕ ಕೊನೆಯ ಓವರ್‌ ಎಸೆಯಲು ಚೆಂಡು ನೀಡಿದ್ದು ಬೆನ್‌ ಸ್ಟೋಕ್ಸ್‌ ಕೈಗೆ. ಆದರೆ ಸ್ಟ್ರೈಕ್‌ ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ವಿಂಡೀಸ್‌ ನ ಬ್ರಾತ್‌ ವೇಟ್‌ ಸ್ಟೋಕ್ಸ್‌ ಮೊದಲ ನಾಲ್ಕು ಎಸೆತಗಳನ್ನು ಸಿಕ್ಸರ್‌ ಗೆ ಅಟ್ಟಿ ವಿಂಡೀಸ್‌ ಗೆ ಜಯ ತಂದಿತ್ತಿದ್ದರು. ಅಸಾಧ್ಯ ಗೆಲುವನ್ನು ತಂದಿತ್ತ ಬ್ರಾತ್‌ ವೇಟ್‌ ವಿಂಡೀಸ್‌ ಗೆ ಹೀರೋ ಆಗಿದ್ದರೆ, ನಾಲ್ಕೇ ಬಾಲ್‌ ನಲ್ಲಿ ಸೋಲು ಎಳೆದುಕೊಂಡ ಸ್ಟೋಕ್ಸ್‌ ಇಂಗ್ಲೆಂಡ್‌ ಪಾಲಿಗೆ ವಿಲನ್‌ ಆಗಿದ್ದ.

ಆದರೆ ರವಿವಾರ ಲಾರ್ಡ್ಸ್‌ ನಲ್ಲಿ ಮಾತ್ರ ನಿಜಕ್ಕೂ ಆತ ರಾಜನಾಗಿದ್ದ. 19.3 ಓವರ್‌ ನಲ್ಲಿ ಕೇವಲ 71ರನ್‌ ಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಗಟ್ಟಿಗ ಸ್ಟೋಕ್ಸ್.‌ ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಮತ್ತೊಂದೆಡೆ ಬಂಡೆಯಾಗಿ ನಿಂತ ಸ್ಟೋಕ್ಸ್‌ ಕೊನೆಗೂ ಕ್ರಿಕೆಟ್‌ ಜನಕರ ಮಹದಾಸೆಯನ್ನು ನೆರವೇರಿಸಿದರು.

ಪಂದ್ಯ ಇನ್ನೇನು ಕಿವೀಸ್‌ ನತ್ತ ಜಾರಿತು ಎನ್ನುವಾಗ ಸ್ಟೋಕ್ಸ್‌ ತೋರಿದ ಧೈರ್ಯ, ಆತ್ಮ ವಿಶ್ವಾಸ, ಕೊನೆಯ ಎರಡು ಓವರ್‌ ನಲ್ಲಿ ಪಂದ್ಯದ ಚಿತ್ರಣವನ್ನು ಬದಲಿಸಿದ ರೀತಿ, ಸೂಪರ್‌ ಓವರ್‌ ನಲ್ಲಿ ಆಡಿದ ಅದ್ಭುತ ಆಟದಿಂದಲೇ ಬೆನ್‌ ಸ್ಟೋಕ್ಸ್‌ ಇಂದು ಆಂಗ್ಲರ ನಾಡಿನ ಕಣ್ಮಣಿ.

ಕೇನ್‌ ಬಳಿ ಕ್ಷಮೆ ಕೇಳಿದ ಸ್ಟೋಕ್ಸ್‌
ಫೈನಲ್‌ ಪಂದ್ಯದ ಕೊನೆಯ ನಿರ್ಣಾಯಕ ಕ್ಷಣದಲ್ಲಿಎರಡು ರನ್‌ ಕದಿಯುವ ವೇಳೆ, ಮಾರ್ಟಿನ್‌ ಗಪ್ಟಿಲ್‌ ಎಸೆದ ಥ್ರೋ, ಸ್ಟೋಕ್ಸ್‌ ಬ್ಯಾಟಿಗೆ ತಾಗಿ ಬೌಂಡರಿಗೆ ಹೋಗಿತ್ತು. ಇದರಿಂದಾಗಿ ಇಂಗ್ಲೆಂಡ್‌ ಗೆ ನಾಲ್ಕು ಹೆಚ್ಚುವರಿ ರನ್‌ ದೊರಕಿತ್ತು. ವಿಪರ್ಯಾಸವೆಂದರೆ ಇದೇ ಕೊನೆಗೆ ಸೋಲು ಗೆಲುವನ್ನು ನಿರ್ಧರಿಸುವಂತೆ ಮಾಡಿತ್ತು. ಈ ಘಟನೆಯ ಬಗ್ಗೆ ಪಂದ್ಯದ ನಂತರ ಮಾತನಾಡಿದ ಸ್ಟೋಕ್ಸ್‌, ” ಬೇಕಂತಲೇ ನಡೆದ ತಪ್ಪಲ್ಲ, ಆದರೆ ನಾನು ನನ್ನ ಜೀವನ ಪರ್ಯಂತ ಆ ಕ್ಷಣಕ್ಕಾಗಿ ವಿಲಿಯಮ್ಸನ್‌ ಬಳಿ ಕ್ಷಮೆ ಕೇಳುತ್ತೇನೆ” ಎಂದರು. ವಿಶ್ವಕಪ್‌ ಗೆದ್ದ ಸಾಧಕ ಈ ವೇಳೆ ಕೋಟ್ಯಾಂತರ ಕ್ರೀಡಾಭಿಮಾನಿಗಳ ಹೃದಯ ಗೆದ್ದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.