ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ
Team Udayavani, Oct 15, 2021, 2:47 PM IST
Representative Image used
ಕಾಸರಗೋಡು; ಕಾಸರ ಗೋಡು – ಮಂಗಳೂರು ರೂಟ್ನಲ್ಲಿ ಪ್ರಯಾಣಿಕರಿಗೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿಗಳೊಂದಿಗೆ ಮಾತುಕತೆ ನಡೆಸಲು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಮನವಿ ಮಾಡಿದ್ದಾರೆ.
ಕಳೆದ ಅನೇಕ ತಿಂಗಳುಗಳಿಂದ ಕೋವಿಡ್ನ ಹೆಸರಿನಲ್ಲಿ ಕಾಸರಗೋಡು – ಮಂಗಳೂರು ಮಧ್ಯೆ ದಿನನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕಡ್ಡಾಯಗೊಳಿಸಿದ್ದ ಆರ್ ಟಿಪಿಸಿ ಆರ್ ನೆಗೆಟಿವ್ ಸರ್ಟಿಫಿಕೆಟ್ ತಪಾಸಣೆಯನ್ನು ಕೊನೆಗೊಳಿಸಿ ಪ್ರಯಾಣ ಸುಗಮಗೊಳಿಸುವಂತೆ ಅವರು ಆಗ್ರಹಿಸಿ ದ್ದಾರೆ.
ಕಾಸರಗೋಡು – ಮಂಗಳೂರು ಬಸ್ ಸಂಚಾರವನ್ನು ಪುನರಾರಂಭಿಸಿ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡ ಬೇಕಾಗಿ ಅವರು ಕರ್ನಾಟಕ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡ ಭೇಟಿಯಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ನಿಯೋಗವು ಮಾತುಕತೆ ನಡೆಸಲಿದೆ ಎಂಬುವುದಾಗಿ ಅವರು ತಿಳಿಸಿದ್ದಾರೆ.