ನಿಶ್ಚಿತ ಠೇವಣಿಗೆ’ ಭರ್ಜರಿ ಬಡ್ಡಿ; ಶೇ. 8 ದಾಟಿದ ಎಫ್ ಡಿ ಬಡ್ಡಿ ದರ


Team Udayavani, Mar 1, 2023, 7:20 AM IST

ನಿಶ್ಚಿತ ಠೇವಣಿಗೆ’ ಭರ್ಜರಿ ಬಡ್ಡಿ; ಶೇ. 8 ದಾಟಿದ ಎಫ್ ಡಿ ಬಡ್ಡಿ ದರ

ಮುಂಬಯಿ: ಉಳಿತಾಯಕ್ಕೆ ಇದೇ ಸುಸಮಯ…! ಹಣದುಬ್ಬರ ಪ್ರಭಾವದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೋ ದರ ಹೆಚ್ಚಳ ಮಾಡಿದ್ದು, ಬ್ಯಾಂಕ್‌ಗಳಿಗೆ ಅನಿವಾರ್ಯವಾಗಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳಕ್ಕೂ ಅನುವು ಮಾಡಿಕೊಟ್ಟಿದೆ. ಹೀಗಾಗಿ, ರಾಷ್ಟ್ರೀಯ ಬ್ಯಾಂಕುಗಳು ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕುಗಳು ನಿಶ್ಚಿತ ಠೇವಣಿ ಬಡ್ಡಿದರವನ್ನು ಸುಮಾರು ಶೇ.8ರ ಆಸುಪಾಸಿಗೆ ತೆಗೆದುಕೊಂಡು ಹೋಗಿವೆ. ವಿಶೇಷವೆಂದರೆ, ಹಲವಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಶೇ.8 ಅನ್ನು ದಾಟಿದೆ.

ಒಂದು ರೀತಿಯಲ್ಲಿ ಇದು ನಿಶ್ಚಿತ ಠೇವಣಿಗಳ ಮೇಲೆ ಹಣ ಹಾಕುವವರಿಗೆ ಸಿಹಿ ಸುದ್ದಿ ಕೊಟ್ಟಂತಾಗಿದೆ. ಅಷ್ಟೇ ಅಲ್ಲ, ದೇಶದ ಅತ್ಯಂತ ನಂಬಿಕಸ್ತ ಬ್ಯಾಂಕು ಎಂದೆನಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕು ಶೇ.8ರ ಆಸುಪಾಸಿಗೆ ಬಡ್ಡಿದರ ನೀಡುತ್ತಿದೆ. ಹಾಗೆಯೇ ಪಂಜಾಬ್‌ ಆ್ಯಂಡ್‌ ಸಿಂದ್‌ ಬ್ಯಾಂಕ್‌ ಅತ್ಯಂತ ಹೆಚ್ಚು ಅಂದರೆ, ಶೇ.8ರಿಂದ 8.5ರ ವರೆಗೆ ವಾರ್ಷಿಕವಾಗಿ ನಿಶ್ಚಿತ ಠೇವಣಿ ಮೇಲೆ ಬಡ್ಡಿ ನೀಡುತ್ತಿದೆ. ಅಲ್ಲದೆ, ಹೆಚ್ಚು ಕಡಿಮೆ ಎಲ್ಲ ಬ್ಯಾಂಕುಗಳು 200ರಿಂದ 800 ದಿನಗಳ ಅವಧಿಗೆ ವಿವಿಧ ಬಡ್ಡಿದರಗಳಲ್ಲಿ ನಿಶ್ಚಿತ ಠೇವಣಿ ಇರಿಸಿಕೊಳ್ಳುತ್ತಿವೆ.

ಬ್ಯಾಂಕುಗಳ ವಿವಿಧ ಠೇವಣಿ ದರ
ದೇಶದ ಅತಿ ದೊಡ್ಡ ರಾಷ್ಟ್ರೀಯ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾವು, ಸಾಮಾನ್ಯ ನಾಗರಿಕರಿಗೆ ಶೇ.7.10ರ ಬಡ್ಡಿದರದಲ್ಲಿ ನಿಶ್ಚಿತ ಠೇವಣಿ ಇರಿಸಿಕೊಳ್ಳುತ್ತಿದೆ. ಹಿರಿಯ ನಾಗರಿಕರಿಗೆ ಶೇ.7.60ರಷ್ಟು ಬಡ್ಡಿ ನೀಡುತ್ತಿದೆ. 400 ದಿನಗಳ ಅವಧಿಯ ಎಫ್ಡಿಗೆ ಈ ಬಡ್ಡಿದರ ಅನ್ವಯವಾಗಲಿದೆ.

ಪಂಜಾಬ್‌ ಮತ್ತು ಸಿಂದ್‌ ಬ್ಯಾಂಕ್‌ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಎಫ್ಡಿ ಬಡ್ಡಿ ದರ ನೀಡುತ್ತಿದೆ. ಇದು ಸಾಮಾನ್ಯರಿಗೆ ಶೇ.8 ಮತ್ತು ಹಿರಿಯ ನಾಗರಿಕರಿಗೆ ಶೇ.8.50ರ ಬಡ್ಡಿದರದಲ್ಲಿ 221 ದಿನಗಳ ವರೆಗೆ ಎಫ್ಡಿ ಇರಿಸಿಕೊಳ್ಳುತ್ತಿದೆ.

ಇನ್ನು ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿದರ ನೀಡುತ್ತಿದೆ. ಇದು 444 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ ಶೇ.7.85 ಬಡ್ಡಿ, ಸಾಮಾನ್ಯ ನಾಗರಿಕರಿಗೆ ಶೇ.7.35ರಷ್ಟು ಬಡ್ಡಿ ನೀಡುತ್ತಿದೆ. ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾವು 800 ದಿನಗಳ ಠೇವಣಿಗೆ ಸಾಮಾನ್ಯರಿಗೆ ಶೇ.7.30 ಮತ್ತು ಹಿರಿಯ ನಾಗರಿಕರಿಗೆ ಶೇ.7.80ರಷ್ಟು ಬಡ್ಡಿ ನೀಡುತ್ತಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಾಮಾನ್ಯ ನಾಗರಿಕರಿಗೆ 666 ದಿನಗಳ ಅವಧಿಗೆ ಶೇ.7.25 ಮತ್ತು ಹಿರಿಯರಿಗೆ ಶೇ.7.75 ಬಡ್ಡಿ ದರ, ಬ್ಯಾಂಕ್‌ ಆಫ್ ಬರೋಡಾ 399 ದಿನಗಳಿಗೆ ಸಾಮಾನ್ಯರಿಗೆ ಶೇ.7.05 ಮತ್ತು ಹಿರಿಯರಿಗೆ ಶೇ.7.75 ಬಡ್ಡಿ ದರ ನೀಡುತ್ತಿದೆ.

ಕೆನರಾ ಬ್ಯಾಂಕ್‌ 400 ದಿನಗಳಿಗೆ ಸಾಮಾನ್ಯರಿಗೆ ಶೇ.7.15 ಮತ್ತು ಹಿರಿಯರಿಗೆ ಶೇ.7.65, ಇಂಡಿಯನ್‌ ಬ್ಯಾಂಕ್‌ 555 ದಿನಗಳಿಗೆ ಸಾಮಾನ್ಯರಿಗೆ ಶೇ.7 ಮತ್ತು ಹಿರಿಯರಿಗೆ ಶೇ.7.50 ನೀಡುತ್ತಿದೆ. ಸಾಮಾನ್ಯ ನಾಗರಿಕರು ಮತ್ತು ಹಿರಿಯರಿಗೆ ಕ್ರಮವಾಗಿ ಯುಕೋ ಬ್ಯಾಂಕ್‌ 666 ದಿನಗಳಿಗೆ ಶೇ.7.15 ಮತ್ತು ಶೇ.7.25, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ 444 ದಿನಗಳಿಗೆ ಶೇ.7 ಮತ್ತು ಶೇ.7.50 ಬಡ್ಡಿ ದರ ನೀಡುತ್ತಿದೆ.

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ 5 ವರ್ಷಗಳ ಅವಧಿಯ ಎಫ್ಡಿಗೆ ಸಾಮಾನ್ಯ ನಾಗರಿಕರಿಗೆ ಶೇ.7 ಮತ್ತು ಹಿರಿಯರಿಗೆ ಶೇ.7.50ರಷ್ಟು ಬಡ್ಡಿದರ ನೀಡುತ್ತಿದೆ.

Ad

ಟಾಪ್ ನ್ಯೂಸ್

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Mumbai; ಹಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

Mumbai; ಹ*ಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ

Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock : ಟ್ರಂಪ್‌ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ

Stock: ಟ್ರಂಪ್‌ ತೆರಿಗೆ ಜಟಾಪಟಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 600ಕ್ಕೂ ಅಧಿಕ ಅಂಕ ಕುಸಿತ

Stock Market: ಷೇರುಪೇಟೆ ಸೂಚ್ಯಂಕ 300ಕ್ಕೂ ಅಧಿಕ ಅಂಕ ಇಳಿಕೆ, ನಿಫ್ಟಿಯೂ ಕುಸಿತ

Stock Market: ಷೇರುಪೇಟೆ ಸೂಚ್ಯಂಕ 300ಕ್ಕೂ ಅಧಿಕ ಅಂಕ ಇಳಿಕೆ, ನಿಫ್ಟಿಯೂ ಕುಸಿತ

5-policcy

Insurance: ಭಾರತದಲ್ಲಿ ಟರ್ಮ್ ಇನ್ಶುರೆನ್ಸ್ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆ & ಪರಿಹಾರ

Interest will be credited to PF accounts on weekends: Mandaviya

PF ಖಾತೆಗಳಿಗೆ ವಾರಾಂತ್ಯಕ್ಕೆ ಬಡ್ಡಿ ಹಣ  ಜಮಾ: ಮಾಂಡವೀಯ

Indian government pressured to block various accounts: Twitter

Twitter: ವಿವಿಧ ಖಾತೆ ತಡೆಗೆ ಭಾರತ ಸರ್ಕಾರ ಒತ್ತಡ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

police

ಬಾಕಿ ಬಿಲ್‌ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ

arrest-lady

ವಿಚಾರಣಾಧೀನ ಕೈದಿಗೆ ನೀಡಲು ತಂದಿದ್ದ ಅನುಮಾನಾಸ್ಪದ ಪುಡಿ; ಮಹಿಳೆ ವಶಕ್ಕೆ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

bosaraju

ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.