ಸದ್ಯದಲ್ಲೇ ಪೇಯ್ಡ ಆಗಲಿದೆ ಗೂಗಲ್ ಮೀಟ್!
ಲೈವ್ ಸ್ಟ್ರೀಮಿಂಗ್ ಮೂಲಕ 1ಲಕ್ಷ ಜನರನ್ನು ತಲುಪುವ ಅವಕಾಶ ಸಿಗಲಿದೆ.
Team Udayavani, Sep 29, 2020, 11:06 AM IST
ನವದೆಹಲಿ: “ಗೂಗಲ್ ಮೀಟ್’ನಲ್ಲಿ ಗಂಟೆಗಟ್ಟಲೆ ಸಭೆಗಳನ್ನು, ವೆಬಿನಾರ್ಗಳನ್ನು ನಡೆಸುವ ಉಚಿತ ಸೌಲಭ್ಯಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ. ಅ.1ರಿಂದ “ಗೂಗಲ್ ಮೀಟ್ ಫ್ರೀ ವರ್ಷನ್ ‘ನಡಿ ನಡೆಸಲಾಗುವ ಸಭೆಗಳು, ವೆಬಿನಾ ರ್ಗಳು ಅಥವಾ ಆನ್ಲೈನ್ ತರಗತಿಗಳ ಕಾಲಾವಧಿ ಕೇವಲ 60 ನಿಮಿಷಕ್ಕೆ ಸೀಮಿತವಾಗಲಿವೆ.
ಈ ಹೊಸ ನಿಯಮ “ಜಿ ಸೂಟ್’ ಹಾಗೂ “ಜಿ ಸೂಟ್ ಫಾರ್ ಎಜುಕೇಷನ್’ ಗ್ರಾಹಕರಿಗೂ ಅನ್ವಯವಾಗಲಿದೆ. “ಜಿ ಸೂಟ್’ ಹಾಗೂ “ಜಿ ಸೂಟ್ ಫಾರ್ ಎಜುಕೇಷನ್’ ಸೌಲಭ್ಯಗಳನ್ನು ಪಡೆ ಯ ಬಯಸುವ ಯಾವುದೇ ಸಂಸ್ಥೆ ಮಾಸಿಕ ಅಂದಾಜು 1,800 ರೂ.ಗ ಳನ್ನು ನೀಡಿಚಂದಾದಾರರಾಗ ಬೇಕಿದೆ. ಆಸೌಲಭ್ಯಗ ಳಡಿ, ಏಕ ಕಾಲದಲ್ಲಿ 250 ಸಭಿಕರನ್ನು ಸೇರಿಸಿ ಸಭೆ ನಡೆಸಲು, ಲೈವ್ ಸ್ಟ್ರೀಮಿಂಗ್ ಮೂಲಕ 1ಲಕ್ಷ ಜನರನ್ನು ತಲುಪುವ ಅವಕಾಶ ಸಿಗಲಿದೆ.
ಜೊತೆಗೆ, ಆನ್ಲೈನ್ ಸಭೆ, ವೆಬಿನಾರ್ ಅಥವಾ ತರಗ ತಿಗಳನ್ನು ಗೂಗಲ್ ಡ್ರೈವ್ನಲ್ಲಿ ಸಂರಕ್ಷಿಸಿಡುವ ಸೌಲಭ್ಯವೂ ದೊರಕಲಿದೆ. ಲಾಕ್ಡೌನ್ ಅವಧಿಯಲ್ಲಿ ಹೆಚ್ಚು ಪ್ರವ ರ್ಧಮಾನಕ್ಕೇರಿದ ಗೂಗಲ್ ಮೀಟ್ನಡಿ ಅನೇಕ ತರಗತಿಗಳು, ಸಭೆಗಳು ಜರುಗಿವೆ. ದಿನವೊಂದಕ್ಕೆ 1 ಕೋಟಿ ಜನ ಗೂಗಲ್ ಮೀಟ್ ಬಳಸುತ್ತಿದ್ದರೆಂದು ಏಪ್ರಿಲ್ನ ಅಂಕಿ-ಅಂಶಗಳು ತಿಳಿಸಿವೆ.
ಕೃಷ್ಣ ಜನ್ಮಸ್ಥಾನ ಕೇಸು:ಅ.15ಕ್ಕೆ ತೀರ್ಮಾನ
ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣಜನ್ಮಸ್ಥಾನವನ್ನು ಮುಕ್ತಿಗೊಳಿಸುವುದರ ಬಗ್ಗೆ ನ್ಯಾಯಾಲಯದಲ್ಲಿ ಹೂಡಲಾಗಿರುವ ಖಟ್ಲೆಯಲ್ಲಿ ಪಾಲುದಾರಿಕೆ ವಹಿಸಬೇಕೇ ಬೇಡವೇ ಎಂಬ ಬಗ್ಗೆ ಅ.15ರಂದು ನಿರ್ಧರಿಸಲಾಗುತ್ತದೆ. ಸ್ವಾಮೀಜಿಗಳ ಸಂಘಟನೆ ಆ ದಿನ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ. ಅಖಿಲ ಭಾರತ ಅಖಾರಾ ಪರಿಷತ್ನ ಅಧ್ಯಕ್ಷ ನರೇಂದ್ರ ಗಿರಿ ಮಾತನಾಡಿ, ಸಂಘಟನೆಯ ಪದಾಧಿಕಾರಿಗಳು ಮಥುರಾಕ್ಕೆ ಭೇಟಿ ಅಲ್ಲಿನ
ಸ್ಥಿತಿ ಪರಿಶೀಲಿಸಲಿದ್ದಾರೆ ಎಂದರು.
ಸೆ. 26ರಂದು ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬುವರು ಮಥುರಾದ ಸ್ಥಳೀಯ ಕೋರ್ಟ್ನಲ್ಲಿ ದಾವೆ ಹೂಡಿ ಕಟ್ರಾ ಕೇಶವ ದೇವ ದೇಗುಲದ ಆವರಣದಲ್ಲಿರುವ ಮಸೀದಿ ತೆರವುಗೊಳಿಸಬೇಕು ಎಂದು ಕೇಳಿದ್ದರು.
ಅಖಿಲ ಭಾರ ತೀಯ ತೀರ್ಥ ಪುರೋಹಿತ ಮಹಾ ಸಭಾದ ಅಧ್ಯಕ್ಷ ಮಹೇಶ್ ಪಾಠಕ್ ಅವರು ” ಮಥುರಾ ದಲ್ಲಿ ಮಸೀದಿ -ದೇಗುಲ ಎಂಬ ವಿವಾದವೇ ಇಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ