ಹೇಗಿದೆ ಗೊತ್ತಾ ಆಡಿ ಕಂಪೆನಿಯ ವಿನೂತನ ಎಲೆಕ್ಟ್ರಿಕ್ ಕಾರು?
ವರ್ಷಾಂತ್ಯದಲ್ಲಿ ಭಾರತದ ಮಾರುಕಟ್ಟೆಗೆ ಬರಲಿದೆ ಇ-ಟ್ರಾನ್ ; ಬೆಲೆ ಎಷ್ಟು ಗೊತ್ತಾ?
Team Udayavani, Aug 2, 2019, 9:12 PM IST
ಗುರ್ಗಾಂವ್: ಐಷಾರಾಮಿ ಕಾರುಗಳ ತಯಾರಿಕೆಯಲ್ಲಿ ಮಂಚೂಣಿಯಲ್ಲಿರುವ ಆಡಿ ಕಂಪೆನಿಯು ತನ್ನ ಎಲೆಕ್ಟ್ರಾನಿಕ್ ಮಾದರಿಯ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವರ್ಷಾಂತ್ಯದಲ್ಲಿ ಭಾರತದ ರಸ್ತೆಗಳಲ್ಲಿ ಇ-ಟ್ರಾನ್ ಹೆಸರಿನ ಈ ಕಾರು ಓಡಾಟ ನಡೆಸಲಿದೆ. ಇದು ಆಡಿ ಹೊರತರುತ್ತಿರುವ ಸಂಪೂರ್ಣವಾಗಿ ವಿದ್ಯುತ್ ಚಾಲಿತ ಮಾದರಿಯ ಎಸ್.ಯು.ವಿ. ವಾಹನವಾಗಿರಲಿದೆ.
ಹರ್ಯಾಣದ ಗುರ್ಗಾಂವ್ ನಲ್ಲಿ ಸಂಸ್ಥೆಯ ಹೊಸ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಈ ಅತ್ಯಾಕರ್ಷಕ ಕಾರನ್ನು ಅನಾವರಣಗೊಳಿಸಲಾಯಿತು.
ಅಂದ ಹಾಗೆ ಅತ್ಯಾಧುನಿಕ ಮಾದರಿಯ ಈ ಎಲೆಕ್ಟ್ರಿಕ್ ಕಾರಿನ ಬೆಲೆ ಎಷ್ಟು ಗೊತ್ತಾ? ಈ ಕಾರಿನ ಅಂದಾಜು ಮಾರುಕಟ್ಟೆ ಬೆಲೆ 54 ರಿಂದ 56 ಲಕ್ಷಗಳ ಆಸುಪಾಸಿನಲ್ಲಿರಲಿದೆ. ಆಡಿ ಕ್ಯು5 ಮತ್ತು ಆಡಿ ಕ್ಯು7 ಕಾರುಗಳ ಗಾತ್ರವನ್ನೇ ಇ-ಟ್ರಾನ್ ಹೋಲುತ್ತದೆ.
ಈ ಕಾರಿನಲ್ಲಿ ಎರಡು ವಿದ್ಯುತ್ ಚಾಲಿತ ಯಂತ್ರಗಳಿರುತ್ತವೆ. ಇವುಗಳಲ್ಲಿ ಮುಂಭಾಗದ ಯಂತ್ರವು 125 ಕಿಲೋವ್ಯಾಟ್ ನದ್ದಾಗಿದ್ದರೆ ಹಿಂಭಾಗದ ಮೋಟಾರ್ 140 ಕಿಲೋವ್ಯಾಟ್ ನದ್ದಾಗಿರುತ್ತದೆ. ಹೀಗೆ ಇವುಗಳ ಒಟ್ಟು ಸಾಮರ್ಥ್ಯ 265 ಕಿಲೋ ವ್ಯಾಟ್ ಅಥವಾ 355 ಬ್ರೇಕ್ ಹಾರ್ಸ್ ಪವರ್ ಆಗಿರುತ್ತದೆ. ಇಷ್ಟು ಮಾತ್ರವಲ್ಲದೆ ಈ ಮಾದರಿಯಲ್ಲಿ ಬೂಸ್ಟ್ ಮೋಡ್ ಸಹ ಲಭ್ಯವಿದ್ದು ಇದೆ ಸಾಮರ್ಥ್ಯ 300 ಕಿಲೋ ವ್ಯಾಟ್ ಅಥವಾ 408 ಬಿ.ಹೆಚ್.ಪಿ. ಆಗಿರುತ್ತದೆ.
ಒಂದು ಬಾರಿಗೆ ಚಾರ್ಜ್ ಮಾಡಿದರೆ 400 ಕಿಲೋ ಮೀಟರ್ ತನಕ ಪ್ರಯಾಣಿಸಬಹುದು. ಮತ್ತು ಇದರ ಗರಿಷ್ಠ ವೇಗ ಗಂಟೆಗೆ 200 ಕಿಲೋ ಮೀಟರ್ ಗಳಿಷ್ಟಿರುತ್ತದೆ.
ನಾರ್ಮಲ್ ಮೋಡ್ ನಲ್ಲಿ 0-100 ಕಿಲೋ ಮೀಟರ್ ವೇಗವನ್ನು ದಾಖಲಿಸಲು ಇ-ಟ್ರಾನ್ ಗೆ 6.6 ಸೆಕೆಂಡ್ ಗಳಷ್ಟು ಸಮಯ ಸಾಕಾಗಿದ್ದರೆ, ಬೂಸ್ಟ್ ಮೋಡ್ ನಲ್ಲಿ ಇದಕ್ಕೆ ಕೇವಲ 5.7 ಸೆಕೆಂಡುಗಳಷ್ಟೇ ಸಾಕಾಗಿರುತ್ತದೆ.
ಈ ಕಾರಿನ ಮೇಲ್ಭಾಗದಲ್ಲಿ 36 ಮೋಡ್ಯುಲ್ ಗಳಲ್ಲಿ 432 ವಿದ್ಯುತ್ ಕೋಶಗಳನ್ನು ಅಳವಡಿಸಿರಲಾಗುತ್ತದೆ.
Audi E-Tron AI pic.twitter.com/elH2BAj1b5
— Audi E-Tron (@etron_audi) July 2, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
Tesla; ಭಾರತದಲ್ಲಿ ಎಲಾನ್ ಮಸ್ಕ್ 25,000 ಕೋಟಿ ಹೂಡಿಕೆ?
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!