ಅದಾನಿ ಗ್ರೂಪ್ ನ 413 ಪುಟಗಳ ಪ್ರತಿಕ್ರಿಯೆ…ವರದಿಗೆ ಹಿಂಡೆನ್ ಬರ್ಗ್ ವಾದವೇನು?

ಈ ನಕಲಿ ವರದಿಯಲ್ಲಿ ನಮ್ಮ ವ್ಯವಹಾರಗಳ ಬಗ್ಗೆ ಏನನ್ನೂ ಪತ್ತೆ ಹಚ್ಚಿಲ್ಲ.

Team Udayavani, Jan 30, 2023, 2:44 PM IST

thumb-2

ನವದೆಹಲಿ/ವಾಷಿಂಗ್ಟನ್: ಅಮೆರಿಕದ ಹಿಂಡೆನ್ ಬರ್ಗ್ ಸಂಸ್ಥೆ ನೀಡಿರುವ ವರದಿ ಸುಳ್ಳಿನಿಂದ ಕೂಡಿದೆ. ನಮ್ಮ ಸಮೂಹ ಸಂಸ್ಥೆಯ ವಹಿವಾಟಿನಲ್ಲಿ ವಂಚನೆ ನಡೆದಿದೆ ಎಂಬ ಯಾವುದೇ ಅಂಶವನ್ನು ಅದು ಪತ್ತೆಹಚ್ಚಿಲ್ಲ ಎಂದು ಅದಾನಿ ಗ್ರೂಪ್ಸ್ ನ ಮುಖ್ಯ ಹಣಕಾಸು ಅಧಿಕಾರಿ ಜುಗೆಶೀಂದರ್ ಸಿಂಗ್ ಬ್ಯುಸಿನೆಟ್ ಟುಡೇಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಆರೆಸ್ಸೆಸ್ ಆಡಳಿತ ಸಾಂವಿಧಾನಿಕ ಮೌಲ್ಯಗಳಿಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ: ಪಿಣರಾಯಿ ವಿಜಯನ್

ಸುಳ್ಳು ಮತ್ತು ತಪ್ಪು ಮಾಹಿತಿಯನ್ನ ಆಧರಿಸಿರುವ ಈ ನಕಲಿ ವರದಿಯಲ್ಲಿ ನಮ್ಮ ವ್ಯವಹಾರಗಳ ಬಗ್ಗೆ ಏನನ್ನೂ ಪತ್ತೆ ಹಚ್ಚಿಲ್ಲ. ವರದಿಯು ನಮ್ಮ ಮೂಲಭೂತ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಹಿಂಡೆನ್ ಬರ್ಗ್ ವರದಿಯನ್ನು ತಳ್ಳಿಹಾಕಿರುವ ಅದಾನಿ ಗ್ರೂಪ್ಸ್, ಬರೋಬ್ಬರಿ 413 ಪುಟಗಳ ಸುದೀರ್ಘ ಪ್ರತಿಕ್ರಿಯೆಯನ್ನು ನೀಡಿದೆ. ಹಿಂಡನ್ ಬರ್ಗ್ ವರದಿಯು ಅಮೆರಿಕ ಸಂಸ್ಥೆಗೆ ಆರ್ಥಿಕ ಲಾಭ ಮಾಡಿಕೊಡಲು, ಸುಳ್ಳು ಮಾರುಕಟ್ಟೆಯನ್ನು ಸೃಷ್ಟಿಸಿ ಆರ್ಥಿಕ ಲಾಭ ಮಾಡಿಸಲು ಹಿಂಡೆನ್ ಬರ್ಗ್ ಸಂಸ್ಥೆ ಅವಕಾಶ ಮಾಡಿಕೊಟ್ಟಿರುವುದಾಗಿ ಅದಾನಿ ಗ್ರೂಪ್ಸ್ ಪ್ರತಿಕ್ರಿಯೆಯಲ್ಲಿ ತಿರುಗೇಟು ನೀಡಿದೆ.

ನಾವು ಎಲ್ಲಾ 88 ಪ್ರಶ್ನೆಗಳಿಗೂ ಉತ್ತರಿಸಿದ್ದೇವೆ. ಒಂದು ವೇಳೆ ನಾವು ಎಲ್ಲಾ 88 ಪ್ರಶ್ನೆಗಳಿಗೆ ಉತ್ತರಿಸದಿದ್ದರೂ ಹಿಂಡೆನ್ ಬರ್ಗ್ ನಮ್ಮ ಮಾಹಿತಿಯನ್ನು ಬಳಸಿಕೊಂಡಿದೆಯೇ ವಿನಃ ಯಾವುದೇ ಸಂಶೋಧನೆ ನಡೆಸಲಿಲ್ಲ. ಇದರಲ್ಲಿನ 68 ಪ್ರಶ್ನೆಗಳು ನಕಲಿಯಾಗಿದ್ದು, ಅದನ್ನು ತಪ್ಪಾಗಿ ಬಳಸಿಕೊಂಡಿರುವುದಾಗಿ ಅದಾನಿ ಗ್ರೂಪ್ ಸಿಎಫ್ ಒ ತಿಳಿಸಿದ್ದಾರೆ.

ಹಿಂಡೆನ್ ಬರ್ಗ್ ಹೇಳೋದೇನು?

ಹಿಂಡೆನ್ ಬರ್ಗ್ ವರದಿಯ ಬಗ್ಗೆ ಅದಾನಿ ಗ್ರೂಪ್ ಸೋಮವಾರ (ಜನವರಿ 30) ಬಿಡುಗಡೆಗೊಳಿಸಿರುವ 413 ಪುಟಗಳ ಪ್ರತಿಕ್ರಿಯೆಗೆ ಹಿಂಡೆನ್ ಬರ್ಗ್ ಪ್ರತ್ಯುತ್ತರ ನೀಡಿದ್ದು, ರಾಷ್ಟ್ರೀಯತೆಯಿಂದ ವಂಚನೆಯನ್ನು ಸಂದಿಗ್ಧಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

“ಅದಾನಿ ಗ್ರೂಪ್ ತನ್ನ ಜಂಬದ ಪ್ರತಿಕ್ರಿಯೆ ಮೂಲಕ ನಾವು ಎತ್ತಿರುವ ಪ್ರಮುಖ ಆರೋಪವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದೆ. ಅದಾನಿ ಗ್ರೂಪ್ ನಿರೀಕ್ಷೆಯಂತೆ ಪ್ರಮುಖ ವಿಷಯವನ್ನು ಮರೆಮಾಚಲು ರಾಷ್ಟ್ರೀಯವಾದವನ್ನು ಮುಂಚೂಣಿಗೆ ತಂದಿದೆ ಎಂದು ತಿಳಿಸಿದೆ.

ಅದಾನಿ ಗ್ರೂಪ್ ನ ರಾಷ್ಟ್ರೀಯವಾದವನ್ನು ನಾವು ಒಪ್ಪುವುದಿಲ್ಲ. ಭಾರತ ಶಕ್ತಿಶಾಲಿ ಪ್ರಜಾಪ್ರಭುತ್ವ ದೇಶ ಎಂಬುದನ್ನು ನಾವು ಒಪ್ಪುತ್ತೇವೆ. ಭಾರತ ಭವಿಷ್ಯದ ಉತ್ತೇಜನಕಾರಿ ಸೂಪರ್ ಪವರ್ ಎಂಬುದನ್ನು ಅಲ್ಲಗಳೆಯಲಾರೆವು. ಆದರೆ ವ್ಯವಸ್ಥಿತವಾಗಿ ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುತ್ತಿರುವ ಅದಾನಿ ಗ್ರೂಪ್ ನಿಂದ ಭಾರತದ ಅಭಿವೃದ್ಧಿಯ ಭವಿಷ್ಯವನ್ನು ತಡೆಹಿಡಿಯಲಾಗಿದೆ ಎಂದು ನಾವು ನಂಬುತ್ತೇವೆ ಎಂಬುದಾಗಿ ಹಿಂಡೆನ್ ಬರ್ಗ್ ಹೇಳಿದೆ.

ಟಾಪ್ ನ್ಯೂಸ್

1-qweqwwqe

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್

police crime

ಶಿವಮೊಗ್ಗದಲ್ಲಿ 1.40 ಕೋಟಿ ರೂ.ವಶ; ತರೀಕೆರೆಯಲ್ಲಿ 6 ಕೋಟಿ ರೂ. ಮೌಲ್ಯದ ಚಿನ್ನ ವಶ

1-sads-asd

ಪತ್ನಿ, ಮಕ್ಕಳನ್ನು ಟೂರ್ ಗೆಂದು ಮಂಗಳೂರಿಗೆ ಕರೆತಂದು ಕೊಂದು ಬಿಟ್ಟನಾ ಉದ್ಯಮಿ?

suspend

ಚುನಾವಣೆ ಕರ್ತವ್ಯ ಲೋಪ : ಇಬ್ಬರು ಶಿಕ್ಷಕರ ಸಸ್ಪೆಂಡ್

1-sadadasdas

ಬುಮ್ರಾ ಬದಲಿಗೆ ಬಲಗೈ ವೇಗಿಯನ್ನು ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crypto ಕರೆನ್ಸಿ ಅಕ್ರಮ ವಹಿವಾಟು; 20 ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ; ಕೇಂದ್ರ ಸರ್ಕಾರ

crypto ಕರೆನ್ಸಿ ಅಕ್ರಮ ವಹಿವಾಟು; 20 ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ; ಕೇಂದ್ರ ಸರ್ಕಾರ

ಮೈಕ್ರೋಸಾಫ್ಟ್ ನಿಂದ ಉದ್ಯೋಗ ಕಡಿತ

ಮೈಕ್ರೋಸಾಫ್ಟ್ ನಿಂದ ಉದ್ಯೋಗ ಕಡಿತ

ಪಿಎಫ್ ಮೇಲಿನ ಬಡ್ಡಿ ದರ ಶೇ.8.15ಕ್ಕೆ ಏರಿಸಿದ ಇಪಿಎಫ್ಒ

ಪಿಎಫ್ ಮೇಲಿನ ಬಡ್ಡಿ ದರ ಶೇ.8.15ಕ್ಕೆ ಏರಿಸಿದ ಇಪಿಎಫ್ಒ

ಪ್ಯಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಗಡುವನ್ನು ವಿಸ್ತರಿಸಿಲ್ಲ

ಪ್ಯಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಗಡುವನ್ನು ವಿಸ್ತರಿಸಿಲ್ಲ

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಗರಿಷ್ಠ ಮಿತಿ

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಗರಿಷ್ಠ ಮಿತಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-qweqwwqe

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್

police crime

ಶಿವಮೊಗ್ಗದಲ್ಲಿ 1.40 ಕೋಟಿ ರೂ.ವಶ; ತರೀಕೆರೆಯಲ್ಲಿ 6 ಕೋಟಿ ರೂ. ಮೌಲ್ಯದ ಚಿನ್ನ ವಶ

1-sads-asd

ಪತ್ನಿ, ಮಕ್ಕಳನ್ನು ಟೂರ್ ಗೆಂದು ಮಂಗಳೂರಿಗೆ ಕರೆತಂದು ಕೊಂದು ಬಿಟ್ಟನಾ ಉದ್ಯಮಿ?

suspend

ಚುನಾವಣೆ ಕರ್ತವ್ಯ ಲೋಪ : ಇಬ್ಬರು ಶಿಕ್ಷಕರ ಸಸ್ಪೆಂಡ್

1-sadadasdas

ಬುಮ್ರಾ ಬದಲಿಗೆ ಬಲಗೈ ವೇಗಿಯನ್ನು ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್