ಷೇರು ಪೇಟೆಯಲ್ಲಿ ಕರಡಿ ಕಾಟ; ಹೂಡಿಕೆದಾರರಿಗೆ 4.23 ಲಕ್ಷ ಕೋ.ರೂ. ನಷ್ಟ
Team Udayavani, Sep 22, 2020, 1:04 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಎರಡನೇ ಹಂತದ ಕೊರೊನಾ ಸೋಂಕು ವ್ಯಾಪಕ ವಾಗಿ ಹರಡುತ್ತಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಬಾಂಬೆ ಷೇರು ಪೇಟೆ ಸಹಿತ ಜಗತ್ತಿನ ಪ್ರಮುಖ ಮಾರು ಕಟ್ಟೆಗಳು ಸೋಮವಾರ ಕುಸಿತ ಕಂಡಿವೆ.
ಬಾಂಬೆ ಷೇರು ಪೇಟೆಯಲ್ಲಿ ಹೂಡಿಕೆದಾರರಿಗೆ 4.23 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ಬಿಎಸ್ಇ ಸೆನ್ಸೆಕ್ಸ್ 811.68 ಅಂಕ ಮತ್ತು ನಿಫ್ಟಿ ಸೂಚ್ಯಂಕ 254.40 ಅಂಕ ಪತನವಾಗಿವೆ. ಐರೋಪ್ಯ ಒಕ್ಕೂಟ ಮತ್ತು ಇತರ ಭಾಗಗಳಲ್ಲಿ 2ನೇ ಹಂತದ ಸೋಂಕು ಆರಂಭವಾಗಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಶಾಂಘೈ, ಹಾಂಕಾಂಗ್, ಸೋಲ್ನ ಷೇರು ಮಾರುಕಟ್ಟೆಗಳು ಪತನಗೊಂಡವು.
ಇಂಡಸ್ ಇಂಡ್ ಬ್ಯಾಂಕ್, ಟಾಟಾ ಮೋಟರ್ಸ್, ಹಿಂಡಾಲ್ಕೋ, ಐಸಿಐಸಿಐ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರ, ಭಾರ್ತಿ ಏರ್ಟೆಲ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಷೇರು ಪತನಗೊಂಡವು. ಇನ್ಫೋಸಿಸ್, ಟಿಸಿಎಸ್, ಕೋಟಕ್ ಬ್ಯಾಂಕ್ ಷೇರುಗಳು ಮಾತ್ರ ಚೇತರಿಕೆ ಕಂಡವು. ಹೀಗಿದ್ದರೂ ಡಾಲರ್ ಎದುರು ರೂಪಾಯಿ 7 ಪೈಸೆ ಚೇತರಿಕೆ ಕಂಡು ದಿನಾಂತ್ಯಕ್ಕೆ 73.38 ರೂ.ಗಳಿಗೆ ಮುಕ್ತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?