ಗ್ರಾಹಕರಿಗೆ ಬರೆ! Jio,ವೋಡಾಫೋನ್, ಏರ್ ಟೆಲ್ ಪರಿಷ್ಕೃತ ದರ ಎಷ್ಟೆಷ್ಟು ಹೆಚ್ಚಾಗಲಿದೆ ಗೊತ್ತಾ


Team Udayavani, Dec 2, 2019, 11:43 AM IST

Jio-new

ನವದೆಹಲಿ: ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಆಪರೇಟರ್ಸ್ ಗಳಾದ ವೋಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್ ಟೆಲ್ ಡಿಸೆಂಬರ್ 3ರಿಂದ ತಮ್ಮ ಸೇವಾ ಶುಲ್ಕಗಳನ್ನು ಹೆಚ್ಚಿಸುವುದಾಗಿ ತಿಳಿಸಿದೆ. ರಿಲಯನ್ಸ್ ಜಿಯೋ ಕೂಡಾ ಡಿಸೆಂಬರ್ 6ರಿಂದ ಶೇ.40ರಷ್ಟು ಪರಿಸ್ಕೃತ ಶುಲ್ಕ ಹೆಚ್ಚಿಸುವುದಾಗಿ ಘೋಷಿಸಿದೆ.

ವೋಡಾಫೋನ್- ಭಾರ್ತಿ ಏರ್ ಟೆಲ್ ಶೇ.15ರಿಂದ 47ರಷ್ಟು ಏರಿಕೆ:

ವೋಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ ಟೆಲ್ ನ ನೂತನ ಟಾರಿಫ್ಸ್ ನಲ್ಲಿ ಮೊಬೈಲ್ ಕರೆಗಳು, ಡೇಟಾ ಮೇಲಿನ ದರವನ್ನು ಶೇ.15ರಿಂದ 47ರಷ್ಟು ಏರಿಕೆ ಮಾಡಲಿದ್ದು, ಇದು ಡಿಸೆಂಬರ್ 3ರಿಂದ ಜಾರಿಗೊಳ್ಳಲಿದೆ ಎಂದು ತಿಳಿಸಿದೆ.

ಅನ್ ಲಿಮಿಡೆಟ್ ಯೋಜನೆಯಡಿ ವರ್ಗೀಕರಿಸಲಾಗಿದ್ದ ಸೇವೆಗಳನ್ನು ಸಂಪೂರ್ಣ ಬದಲಾಯಿಸಿ ನವೀಕರಿಸುವುದಾಗಿ ತಿಳಿಸಿದೆ. ಏರ್ ಟೆಲ್ ಸೇವಾ ಶುಲ್ಕದಲ್ಲಿ ದಿನಕ್ಕೆ 50ಪೈಸೆಯಿಂದ 2.85 ರೂ.ವರೆಗೆ ಏರಿಕೆಯಾಗಲಿದೆ ಎಂದು ಹೇಳಿದೆ.

ಸುಮಾರು ಒಂದು ದಶಕಗಳ ಕಾಲ ಬೆಲೆ ಸ್ಪರ್ಧೆಯಲ್ಲಿ ವೋಡಾಫೋನ್, ಭಾರ್ತಿ ಏರ್ ಟೆಲ್ ಕರೆಗಳ ದರದಲ್ಲಿ, ಡಾಟಾ ಸರ್ವೀಸ್ ದರದಲ್ಲಿ ಮೇಲಾಟ ನಡೆಸಿದ್ದವು. ಇದೀಗ ಹತ್ತು ವರ್ಷಗಳ ನಂತರ ಮತ್ತೆ ಬೆಲೆ ಏರಿಕೆಯ ಮೊರೆ ಹೋಗಿರುವುದಾಗಿ ವರದಿ ತಿಳಿಸಿದೆ.

ಏರ್ ಟೆಲ್ ನ ಜನಪ್ರಿಯ 169 ರೂಪಾಯಿ ಹಾಗೂ 199 ರೂಪಾಯಿ ಪ್ಲ್ಯಾನ್ ಇನ್ಮುಂದೆ 248 ರೂಪಾಯಿ ಪ್ಯಾಕ್ ಆಗಲಿದೆ. ಏರ್ ಟೆಲ್ ನ ಹಿಂದಿನ 28 ದಿನಗಳ ಕಾಲದ ವ್ಯಾಲಿಡಿಟಿ ಈಗಲೂ ಮುಂದುವರಿಯಲಿದೆ. ಪರಿಷ್ಕೃತ ಬೆಲೆಯಲ್ಲಿ ಗ್ರಾಹಕರಿಗೆ 169 ರೂಪಾಯಿ ಪ್ಯಾಕ್ ನಲ್ಲಿ ದಿನಂಪ್ರತಿ 1.5ಜಿಬಿ ಡಾಟಾ ಪಡೆಯಲಿದ್ದಾರೆ. ಈ ಮೊದಲು ಪಡೆಯುತ್ತಿದ್ದುಕ್ಕಿಂತ ಶೇ.50ರಷ್ಟು ಹೆಚ್ಚಿನ ಸೇವೆ ಲಭ್ಯವಾಗಲಿದೆ. 199 ರೂ. ಪ್ಲ್ಯಾನ್ ಗ್ರಾಹಕರು ಈ ಮೊದಲಿನ ಸೇವೆ ಪಡೆಯಲಿದ್ದಾರೆ.

ಭಾರ್ತಿ ಏರ್ ಟೆಲ್ ಹೊರ ಹೋಗುವ ಕರೆ 28ದಿನಕ್ಕೆ 1000 ನಿಮಿಷ, 84 ದಿನ 3 ಸಾವಿರ ನಿಮಿಷ, 365 ದಿನ 12 ಸಾವಿರ ನಿಮಿಷ. ಹೀಗೆ ನಿಗದಿತ ನಿಮಿಷಗಳ ಮಿತಿ ಮೀರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಹೆಚ್ಚಿಗೆ ನೀಡಬೇಕಾಗುತ್ತದೆ ಎಂದು ಹೇಳಿದೆ.

ವೋಡಾಫೋನ್ ಕೂಡಾ ನೂತನ ಪ್ರೀಪೇಯ್ಡ್ ಮತ್ತು ಸರ್ವೀಸಸ್ ನ ವ್ಯಾಲಿಡಿಟಿ ಸಮಯವನ್ನು ನಿಗದಿಪಡಿಸಿದೆ. ಅದರಂತೆ 2 ದಿನ, 28 ದಿನ, 84 ದಿನ ಹಾಗೂ 365 ದಿನಗಳು ಎಂದು ಘೋಷಿಸಿದೆ. ವೋಡಾಫೋನ್ ಮತ್ತು ಭಾರ್ತಿಏರ್ ಟೆಲ್ ಈಗಾಗಲೇ ಭಾರೀ ದೊಡ್ಡ ಪ್ರಮಾಣದ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದು, ಇದೀಗ ದರ ಏರಿಕೆಗೆ ಮುಂದಾಗಿದೆ ಎಂದು ವರದಿ ವಿವರಿಸಿದೆ.

ಜಿಯೋ ಕರೆ, ಡೇಟಾ ದರ ಶೇ.40ರಷ್ಟು ಏರಿಕೆ:

ಜಿಯೋ ಕರೆಗಳ ದರ ಮತ್ತು ಡೇಟಾ ಬೆಲೆ ಶೇ.40ರಷ್ಟು ಏರಿಕೆಯಾಗಲಿದೆ. ಹೊಸ ಯೋಜನೆ ಅನ್ವಯ ಗ್ರಾಹಕರು ಶೇ.300ರಷ್ಟು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂದು ರಿಲಯನ್ಸ್ ಹೇಳಿದೆ. ಆಲ್ ಇನ್ ಒನ್ ಪ್ಲ್ಯಾನ್ ನಡಿ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದೆ.

ಗ್ರಾಹಕ ಮೊದಲು ಎಂಬ ಧ್ಯೇಯ ನಮ್ಮದು ಹೀಗಾಗಿ ಜಿಯೋ ಗ್ರಾಹಕರು ಹೆಚ್ಚಿನ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಕರೆಗಳ ದರ ಎಷ್ಟು ಹೆಚ್ಚಾಗಲಿದೆ, ಡೇಟಾ ದರ ಎಷ್ಟು, ಅನ್ ಲಿಮಿಟೆಡ್ ಕರೆಗಳು, ವೈಸ್ ಸಂದೇಶ, ವಿಡಿಯೋ ಕರೆಗಳ ಪರಿಷ್ಕೃತ ದರದ ಬಗ್ಗೆ ಜಿಯೋ ಇನ್ನಷ್ಟೇ ನಿಖರವಾಗಿ ಘೋಷಿಸಬೇಕಾಗಿದೆ. ಸದ್ಯ ಶೇ.40ರಷ್ಟು ಎಂದು ಹೇಳಿದೆ. ಅದು ಯಾವ್ಯಾವ ಫ್ಲ್ಯಾನ್ ಗೆ ಎಷ್ಟೆಷ್ಟು ಎಂಬುದು ಡಿಸೆಂಬರ್ 3ರಂದು ಬಹಿರಂಗವಾಗಬಹುದು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.