ಅಪಾಯಕ್ಕೆ ಸಿಲುಕಿದ ಮೀನುಗಾರಿಕಾ ದೋಣಿಯಿಂದ 10 ಮಂದಿ ರಕ್ಷಣೆ
Team Udayavani, May 27, 2021, 6:46 PM IST
ಪಣಂಬೂರು : ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ತಾಂತ್ರಿಕ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ನೋಂದಣಿ ಹೊಂದಿದ್ದ ಲಾರ್ಡ್ ಆಫ್ ಓಷಿಯನ್ ಮೀನುಗಾರಿಕಾ ದೋಣಿಯಿಂದ 10 ಮಂದಿ ಮೀನುಗಾರರನ್ನು ಕರ್ನಾಟಕ ಕೋಸ್ಟ್ಗಾರ್ಡ್ ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದೆ.
7 ಮಂದಿ ತ.ನಾ ಹಾಗೂ ೩ ಮಂದಿ ಕೇರಳದ ಮೀನುಗಾರರಾಗಿದ್ದಾರೆ.ಸ್ಟೀಫನ್ (45), ನೆಪೋಲಿಯನ್ ( 60) ಪ್ರಭು (38), ಸಾಜಿ (41), ರಾಜಿ (38), ಸಾಗರಾಜಿ (50) ಜಾರ್ಜ್ ಬುಷ್(50), ಕ್ರಿಸ್ಪಿನ್( 38), ಸಜನ್ (26), ಡೊನಿಯೊ( 38)ರಕ್ಷಿತ ಮೀನುಗಾರರಾಗಿದ್ದಾರೆ.
ಮಂಗಳೂರು ಬಂದರಿನಿಂದ 20 ನಾ.ಮೈ (37 ಕಿ.ಮೀ)ದೂರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದಾಗ ದೋಣಿಯ ಎಂಜಿನಿ ವೈಫಲ್ಯಕ್ಕೀಡಾಯಿತು. ಮೀನುಗಾರರು ಕಳಿಸಿದ ಅಪಾಯದ ಸಂದೇಶವನ್ನು ಪಡೆದ ಕೋಸ್ಟ್ಗಾರ್ಡ್ನ ರಾಜ್ದೂತ್ ಕಣ್ಗಾವಲು ಹಡಗು ಎನ್ಎಂಪಿಟಿಯಿಂದ ಕಾರ್ಯಾಚರಣೆ ನಡೆಸಿತಲ್ಲದೆ ದೋಣಿ ಸಹಿತ ೧೦ ಮಂದಿಯನ್ನು ಹಳೆ ಬಂದರಿಗೆ ತಲುಪಿಸಿತು.ಕಳೆದ ತೌಖ್ತೆ ಚಂಡಮಾರುತದ ಸಂದರ್ಭ ಈ ದೋಣಿ ಪೋರ್ಬಂದರಿನಲ್ಲಿ ಲಂಗರು ಹಾಕಿತ್ತು.
ಬಳಿಕ ಮತ್ತೆ ಮೀನುಗಾರಿಕೆಗೆ ತೆರಳಿತ್ತು. ಸ್ಥಳೀಯ ಆಲ್ ಬದ್ರಿಯಾ ಮೀನುಗಾರಿಕಾ ದೋಣಿ ಕೆಟ್ಟು ಹೋದ ದೋಣಿಯನ್ನು ಎಳೆದು ತರುವಲ್ಲಿ ನೆರವು ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ