ವಿಜಯ ದಿವಸಕ್ಕಾಗಿ 1000 ಕಿ.ಮೀ. ಯಾತ್ರೆ
Team Udayavani, Apr 8, 2019, 6:30 AM IST
ಶ್ರೀನಗರ: 20ನೇ ಕಾರ್ಗಿಲ್ ವಿಜಯ ದಿವಸ್ ಆಚರಣೆಯ ಭಾಗವಾಗಿ ಭಾರತೀಯ ಸೇನಾಪಡೆಯ ಯೋಧರನ್ನೊಳಗೊಂಡ ಮೋಟಾರ್ ಸೈಕಲ್ ರೈಡರ್ಗಳ ತಂಡವು ವಿಶಿಷ್ಟ ಸಾಧನೆ ಮಾಡಲು ಹೊರಟಿದೆ. ಕಾರಕೋರಂ ರೇಂಜ್ಗೆ 1 ಸಾವಿರ ಕಿ.ಮೀ ಪ್ರಯಾಣ ನಡೆಸಲಿರುವ ಈ ತಂಡ, ಜುಲೈ 26ರಂದು ಕಾರಕೋರಂ ರೇಂಜ್ ತಲುಪಲಿದೆ.
ಪಾಕಿಸ್ಥಾನದ ವಿರುದ್ಧ ಆಪರೇಶನ್ ವಿಜಯ್ನಲ್ಲಿ ಜಯ ಸಾಧಿಸಿದ ದಿನ ಇದಾಗಿದ್ದು, ಒಟ್ಟು 14 ದಿನಗಳ ಕಾಲ ಈ ತಂಡ ಪ್ರಯಾಣ ನಡೆಸಲಿದೆ. ಈ ತಂಡವು ಅತ್ಯಂತ ಕಡಿದಾದ ಪ್ರದೇಶಗಳಾದ ಚಾಂಗ್ ಲಾ, ಕರ್ದುಂಗ್ಲಾ ಪಾಸ್ ಹಾಗೂ ತೀವ್ರ ಹಿಮಾಚ್ಛಾದಿತ ಭಾಗಗಳ ಮೂಲಕ ಸಾಗಲಿದೆ. ಕೆಲವು ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ 18.176 ಅಡಿ ಎತ್ತರದಲ್ಲಿ ತಂಡ ಸಂಚರಿಸಲಿದ್ದು, ಇಲ್ಲಿ ಉಸಿರಾಟವೂ ಕಷ್ಟವಾಗಿರಲಿದೆ. ಕೆಲವೆಡೆ ಮೈನಸ್ 40 ಡಿಗ್ರಿ ತಾಪಮಾನ ಇರಲಿದೆ. ಈ ಹಿಂದೆ ಎಂದೂ ಕಾರಕೋರಂ ರೇಂಜ್ಗೆ ಬೈಕ್ಗಳ ಮೂಲಕ ಯಾರೂ ಪ್ರಯಾಣಿಸುವ ಸಾಹಸ ಮಾಡಿರಲಿಲ್ಲ.
ರಾಯಲ್ ಎನ್ಫೀಲ್ಡ್ ಹಾಗೂ ಹಿಮಾಲಯನ್ ಮೋಟಾರ್ನ್ಪೋರ್ಟ್ಸ್ ಸಹಭಾಗಿತ್ವದಲ್ಲಿ ಈ ಪ್ರಯಾಣ ಕೈಗೊಳ್ಳಲಾಗಿದ್ದು, 11 ಬೈಕ್ಗಳಲ್ಲಿ ಯೋಧರು ಮತ್ತು ಎನ್ಫೀಲ್ಡ್ ತಂಡದ ಸದಸ್ಯರು ಪ್ರಯಾಣಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್