ಅಂಡಮಾನ್ನ 21 ದ್ವೀಪಗಳಿಗೆ ಯೋಧರ ಹೆಸರು: ಕೇಂದ್ರ ಸರ್ಕಾರದ ತೀರ್ಮಾನ
ಪರಮವೀರ ಚಕ್ರ ಗೌರವ ಪಡೆದ ವೀರರಿಗೆ ಗೌರವ
Team Udayavani, Dec 2, 2022, 5:45 AM IST
ಪೋರ್ಟ್ ಬ್ಲೇರ್: ಭಾರತೀಯ ಸೇನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರ ಪಡೆದ 21 ವೀರ ಯೋಧರ ಹೆಸರುಗಳನ್ನು ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶದ 21 ಜನವಸತಿ ರಹಿತ ದ್ವೀಪಗಳಿಗೆ ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
21 ದ್ವೀಪಗಳ ಪೈಕಿ, 16 ದ್ವೀಪಗಳು ಉತ್ತರ ಅಂಡಮಾನ್ನಲ್ಲಿದ್ದರೆ, ಉಳಿದ 5 ದ್ವೀಪಗಳು ದಕ್ಷಿಣ ಅಂಡಮಾನ್ನಲ್ಲಿವೆ.
ಪರಮವೀರ ಚಕ್ರ ಪಡೆದ ವೀರ ಯೋಧರಾದ ಮೇಜರ್ ಸೋಮನಾಥ ಶರ್ಮ, ಕ್ಯಾ. ಕರಮ್ ಸಿಂಗ್, ಮೇ. ರಾಮ್ ರಾಘೋಬಾ ರಾಣೆ, ನಾಯಕ್ ಜಡುನಾಥ್ ಸಿಂಗ್, ಕಂ.ಹ.ಮೇ. ಪಿರು ಸಿಂಗ್ ಶೇಖಾವತ್, ಕ್ಯಾ. ಗುರುಬಚನ್ ಸಿಂಗ್ ಸಲಾರಿಯಾ, ಲೆ.ಕ. ಧಾನ್ ಸಿಂಗ್ ಥಾಪಾ ಮಗರ್, ಸು. ಜೋಗೀಂದ್ರ ಸಿಂಗ್ ಸಹಾನ್, ಮೇ. ಶೈತಾನ್ ಸಿಂಗ್ ಭಾಟಿ, ಹ. ಅಬ್ದುಲ್ ಹಮೀದ್, ಲೆ.ಕ. ಅರ್ದೇಶಿರ್ ಬುಜೊರ್ಜಿ ತಾರಾಪೋರ್, ಲೆ.ನಾ. ಅಲ್ಬರ್ಟ್ ಎಕ್ಕಾ, ಕ. ಹೋಶಿಯಾರ್ ಸಿಂಗ್ ಧಹಿಯಾ, ಸೆ.ಲೆ. ಅರುಣ್ ಖೇತರ್ಪಾಲ್, ಪ್ರೈ.ಅ. ನಿರ್ಮಲ್ ಜಿತ್ ಸಿಂಗ್, ಮೇ. ರಾಮಸ್ವಾಮಿ ಪರಮೇಶ್ವರನ್, ಕ್ಯಾ. ಬಾಣ ಸಿಂಗ್, ಕ್ಯಾ. ವಿಕ್ರಂ ಭಾತ್ರ, ಕ್ಯಾ. ಮನೋಜ್ ಕುಮಾರ್ ಪಾಂಡೆ, ಸು.ಮೇ. ಸಂಜಯ್ ಕುಮಾರ್ ಅವರ ಹೆಸರನ್ನು ದ್ವೀಪಗಳಿಗೆ ನಾಮಕರಣ ಮಾಡಲಾಗುತ್ತದೆ.