ದೇಸಿ ವೆಂಟಿಲೇಟರ್ಗೆ ಆದ್ಯತೆ
Team Udayavani, Jun 24, 2020, 9:53 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಇನ್ನು ಮುಂದೆ ದೇಶದಲ್ಲೇ ತಯಾರಾದ ವೆಂಟಿಲೇಟರ್ಗಳನ್ನು ಖರೀದಿಸಿ ಬಳಸಲು ಕೇಂದ್ರ ಸರಕಾರ ಆದ್ಯತೆ ನೀಡಲಿದೆ. ಪಿಎಂ ಕೇರ್ ನಿಧಿಯಲ್ಲಿ ಮೀಸಲಿಟ್ಟ ಹಣದಲ್ಲಿ 50 ಸಾವಿರ ಮೇಡ್ ಇನ್ ಇಂಡಿಯಾ ವೆಂಟಿಲೇಟರ್ಗಳನ್ನು ಈಗಾಗಲೇ ಅದು ಖರೀದಿಸಿದೆ.
ಈ ಪೈಕಿ ಸುಮಾರು 3 ಸಾವಿರ ವೆಂಟಿಲೇ ಟರ್ಗಳು ಸಿದ್ಧವಾಗಿದ್ದು, 1,300 ಸಾಧನ ಗಳನ್ನು ವಿವಿಧ ರಾಜ್ಯಗಳಿಗೆ ಕಳುಹಿಸಿ ಕೊಡಲಾಗಿದೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕಾಗಿ 3,100 ಕೋಟಿ ರೂ.ಗಳನ್ನು ಮೀಸಲಿರಿಸಿದ್ದ ಪಿಎಂ ಕೇರ್ ಟ್ರಸ್ಟ್ ವಲಸೆ ಕಾರ್ಮಿಕರ ಕಾಳಜಿ, ವೆಂಟಿಲೇಟರ್ಗಳ ಖರೀದಿ ಮತ್ತು ಕೊರೊನಾ ತಡೆಗೆ ಅಗತ್ಯವಿರುವ ಇತರ ವೆಚ್ಚಗಳಿಗೆ ಈ ಹಣ ಬಳಸುವುದಾಗಿ ತಿಳಿಸಿತ್ತು. ಪ್ರಸ್ತುತ ಈ ಹಣದಲ್ಲಿ 2 ಸಾವಿರ ಕೋಟಿ ರೂ.ಗಳನ್ನು ಭಾರತದಲ್ಲೇ ತಯಾರಾಗುವ 50 ಸಾವಿರ ವೆಂಟಿಲೇಟರ್ಗಳ ಖರೀದಿಗೆ ವಿನಿಯೋಗಿಸ ಲಾಗಿದೆ. ಬಾಕಿ 1,100 ಕೋಟಿ ರೂ.ಗಳನ್ನು ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಬಳಸುವಂತೆ ಸೂಚಿಸಿ ವಿವಿಧ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸರಕಾರ ಹೇಳಿದೆ.
ಇದುವರೆಗೆ 2,923 ವೆಂಟಿಲೇಟರ್ಗಳು ಸಿದ್ಧವಾಗಿದ್ದು, ಆ ಪೈಕಿ 1,340 ಸಾಧನಗಳು ಈಗಾಗಲೇ ಮಹಾರಾಷ್ಟ್ರ (275), ದಿಲ್ಲಿ (275), ಗುಜರಾತ್ (175), ಬಿಹಾರ (100), ಕರ್ನಾಟಕ (90), ರಾಜಸ್ಥಾನ (75) ಸೇರಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿವೆ. ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ 14 ಸಾವಿರ ವೆಂಟಿ ಲೇಟರ್ಗಳನ್ನು ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತಿದೆ. 30 ಸಾವಿರ ವೆಂಟಿಲೇಟರ್ಗಳನ್ನು ಸರಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ತಯಾರಿ ಸುತ್ತಿದ್ದರೆ ಉಳಿದ 20 ಸಾವಿರ ಸಾಧನಗಳನ್ನು ಎಜಿವಿಎ ಹೆಲ್ತ್ಕೇರ್ (10 ಸಾವಿರ), ಎಎಂಟಿಜೆಡ್ ಬೇಸಿಕ್ (5,650), ಎಎಂಟಿಜಡ್ ಹೈ ಎಂಡ್ (4 ಸಾವಿರ) ಮತ್ತು ಅಲೈಡ್ ಮೆಡಿಕಲ್ (350) ಸಂಸ್ಥೆಗಳು ಸಿದ್ಧಪಡಿಸಿ ಕೊಡಲಿವೆ.
ಆತ್ಮನಿರ್ಭರ ಭಾರತ
ಸರಕಾರಿ ಕಚೇರಿಗಳಿಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳುವ ಉದ್ದೇಶಕ್ಕಾಗಿಯೇ ಇರುವ ಗವರ್ಮೆಂಟ್ ಇ- ಮಾರ್ಕೆಟ್ ಪ್ಲೇಸ್ನಲ್ಲಿ (ಜಿಇಎಂ) ಸರಕು ಮಾರಾಟ ಮಾಡು ವವರು ಆ ಸರಕುಗಳು ಯಾವ ದೇಶದ ಉತ್ಪನ್ನ ಎಂದು ನಮೂದಿಸಲು ಕೇಂದ್ರ ಸರಕಾರ ಆದೇಶ ಹೊರಡಿ ಸಿದೆ. ಈ ಮೂಲಕ ಆತ್ಮನಿರ್ಭರ ಭಾರತದ ಕನಸನ್ನು ನನಸಾಗಿಸಲು ಕೈ ಜೋಡಿಸ ಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ