ಪ್ರತಿ 6 ತಾಸಿಗೊಂದು ರೇಪ್‌, ಈ ದೇಶದಲ್ಲಿ ಏನಾಗುತ್ತಿದೆ ? ಸುಪ್ರೀಂ


Team Udayavani, Aug 7, 2018, 3:56 PM IST

rape-protests-700.jpg

ಹೊಸದಿಲ್ಲಿ : ದೇಶದಲ್ಲಿ  ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಗರಂ ಆಗಿರುವ ಸುಪ್ರೀಂ ಕೋರ್ಟ್‌, ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 

ಬಿಹಾರದ ಆಶ್ರಯ ಗೃಹಗಳಲ್ಲಿ  ಅಸಹಾಯಕ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಅತ್ಯಾಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಈ ರೀತಿಯ ಆಶ್ರಯ ಗೃಹಗಳು ತಲೆ ಎತ್ತುವುದಕ್ಕೆ ಬಿಹಾರ ಸರಕಾರ ಅವಕಾಶ ಮಾಡಿಕೊಟ್ಟಿರುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.

ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಇವತ್ತು ಪ್ರತೀ ಆರು ತಾಸಿಗೆ ಒಂದರಂತೆ ಹೆಣ್ಣು ಮಕ್ಕಳ ಮೇಲೆ ರೇಪ್‌ ನಡೆಯುತ್ತಿದೆ. ದೇಶದಲ್ಲಿ 38,000 ರೇಪ್‌ ಕೇಸ್‌ಗಳು ವರದಿಯಾಗಿವೆ. ಅತ್ಯಧಿಕ ರೇಪ್‌ ಪಟ್ಟಿಯಲ್ಲಿ  ಮಧ್ಯ ಪ್ರದೇಶ ಅಗ್ರ ಸ್ಥಾನದಲ್ಲಿದೆ; ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ; ಈ ದೇಶದಲ್ಲಿ ಏನು ನಡೆಯುತ್ತಿದೆ ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. 

ಬೇಕಾಬಿಟ್ಟಿ ರೇಪ್‌ ಗಳು ನಡೆದಿರುವ ಬಿಹಾರದ ಮುಜಫ‌ರಪುರದ ಆಶ್ರಯ ಗೃಹಗಳನ್ನು ನಡೆಸುವ ಎನ್‌ಜಿಓ ಗೆ ಬಿಹಾರ ಸರಕಾರ 2004ರಿಂದ ಹಣಕಾಸು ನೆರವು ನೀಡುತ್ತಿದೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ಸರಕಾರಕ್ಕೆ ಗೊತ್ತಿಲ್ಲ. ಇದು ಹೇಗೆ ಸಾಧ್ಯ ? ಅಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಎಂದಾದರೂ ತನಿಖೆ ನಡೆಸುವ ಆಲೋಚನೆ ನಿಮಗೆ ಬರಲೇ ಇಲ್ವ ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿತು.

ಮುಜಫ‌ರಪುರ ಆಶ್ರಯ ಗೃಹಗಳಲ್ಲಿ ಅತ್ಯಾಚಾರ ನಡೆಸಿರುವ ಅಪರಾಧಿಗಳನ್ನು ಶಿಕ್ಷಿಸಲು ಬಿಹಾರ ಸರಕಾರ ಏನು ಮಾಡಿದೆ ಎಂದು ಸುಪ್ರೀಂ ಪ್ರಶ್ನಿಸಿತು. 

“ನಮ್ಮ ಅಧಿಕಾರಿಗಳು ಕಾಲಕಾಲಕ್ಕೆ ಈ ಆಶ್ರಯ ಗೃಹಗಳಿಗೆ ಭೇಟಿ ಕೊಟ್ಟಿದ್ದಾರೆ; ಆದರೆ ಅಲ್ಲಿನ ಯಾರೂ ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ದೂರೇ ಕೊಟ್ಟಿಲ್ಲ” ಎಂದು ಬಿಹಾರ ಸರಕಾರ ಸುಪ್ರೀಂ ಗೆ ಉತ್ತರಿಸಿತು. 

ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್‌, “ನೀವು ಅಲ್ಲಿನ ಮಕ್ಕಳನ್ನು ನೇರವಾಗಿ ಮಾತನಾಡಿಸಬೇಕಿತ್ತು. ಆಗ ಅವರು ಧೈರ್ಯ ವಹಿಸಿ ಅಲ್ಲೇನಾಗುತ್ತಿದೆ ಎಂದು ಅವರು ಹೇಳುತ್ತಿದ್ದರು. ಅಂತಹ ಪ್ರಯತ್ನವನ್ನು ನೀವು ಮಾಡೇ ಇಲ್ಲ” ಎಂದು ಸುಪ್ರೀಂ ಮತ್ತೆ ಬಿಹಾರ ಸರಕಾರಕ್ಕೆ ಚಾಟಿ ಬೀಸಿತು. 

ಟಾಪ್ ನ್ಯೂಸ್

1-sasadsad

Asian Games ವನಿತಾ ಕ್ರಿಕೆಟ್‌: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹೋರಾಟ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aksharadhama nj

USA: ಅ. 8ರಂದು ಬೃಹತ್‌ ದೇಗುಲ ದರ್ಶನ: ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣ

S JAISHANKAR

UNO: ಜಗತ್ತಿನಲ್ಲಿ ಈಗಲೂ ದ್ವಂದ್ವ ನಿಲುವು: ಜೈಶಂಕರ್‌ 

MANIPUR ARMY

Manipur: ಮಾಮೂಲಿ ಟ್ರಕ್‌ಗಳಿಗೆ ಸೇನೆ ಮಾದರಿ ಬಣ್ಣ ಬಳಿದ ಬಂಡುಕೋರರು!

ayodhya airport

Ayodhya: ವರ್ಷಾಂತ್ಯಕ್ಕೆ ಅಯೋಧ್ಯಾ ವಿಮಾನ ನಿಲ್ದಾಣ ಲೋಕಾರ್ಪಣೆ

1-fdwewq

Gujarat ; ಕುಸಿದು ಬಿದ್ದ ಹಳೆಯ ಸೇತುವೆ: ಕನಿಷ್ಠ 6 ಮಂದಿ ನೀರುಪಾಲು ಶಂಕೆ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

DOCTOR

Medical- Dental Course: ಮೂಲ ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ

1-sasadsad

Asian Games ವನಿತಾ ಕ್ರಿಕೆಟ್‌: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹೋರಾಟ

solar panels 2

Solar: ರಾಜ್ಯದಲ್ಲಿ ಶೀಘ್ರದಲ್ಲೇ ತಲೆ ಎತ್ತಲಿವೆ ಮತ್ತೆರಡು ಸೌರೋದ್ಯಾನ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

KHALISTANI MOVEMENT

Khalistani: ಇನ್ನಷ್ಟು ಖಲಿಸ್ತಾನಿ ಪುಂಡರ ಆಸ್ತಿ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.