ಊಹಾಪೋಹಗಳಿಗೆ ತೆರೆ: ಇಸುದನ್ ಗಢ್ವಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ಆಪ್
ಭಗವಾನ್ ಕೃಷ್ಣನ ಪವಿತ್ರ ಭೂಮಿಯಿಂದ ಕಣಕ್ಕೆ ಎಂದ ಕೇಜ್ರಿವಾಲ್
Team Udayavani, Nov 13, 2022, 5:46 PM IST
ನವ ದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಇಸುದನ್ ಗಢ್ವಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ತೆರೆ ಎಳೆದಿದ್ದಾರೆ.
ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಢ್ವಿ ಅವರು ಖಾಂಬಲಿಯಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
“ರೈತರು, ನಿರುದ್ಯೋಗಿ ಯುವಕರು, ಮಹಿಳೆಯರು, ಉದ್ಯಮಿಗಳಿಗಾಗಿ ವರ್ಷಗಳ ಕಾಲ ಧ್ವನಿ ಎತ್ತಿದ ಇಸುದನ್ ಗಢ್ವಿ ಅವರು ಜಮಖಾಂಬಲಿಯಾದಿಂದ ಸ್ಪರ್ಧಿಸುತ್ತಾರೆ! ಗುಜರಾತ್ ಭಗವಾನ್ ಕೃಷ್ಣನ ಪವಿತ್ರ ಭೂಮಿಯಿಂದ ಹೊಸ ಮತ್ತು ಉತ್ತಮ ಮುಖ್ಯಮಂತ್ರಿಯನ್ನು ಪಡೆಯುತ್ತಾರೆ,” ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಚುನಾವಣೆಗೆ ಎಎಪಿ ಶನಿವಾರ ಮೂವರು ಅಭ್ಯರ್ಥಿಗಳನ್ನು ಘೋಷಿಸಿತ್ತು, ಆದರೆ ಕುತೂಹಲ ಮೂಡಿಸಿದ್ದ ಇಸುದನ್ ಗಢ್ವಿ ಅವರ ಕ್ಷೇತ್ರವನ್ನು ಘೋಷಿಸಿರಲಿಲ್ಲ. ಶನಿವಾರ ಬಿಡುಗಡೆಯಾದ 15 ನೇ ಪಟ್ಟಿಯೊಂದಿಗೆ, ಆಮ್ ಆದ್ಮಿ ಪಕ್ಷವು 182 ಸದಸ್ಯರ ವಿಧಾನಸಭೆಗೆ ಚುನಾವಣೆಗೆ 176 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಎಎಪಿ ನವೆಂಬರ್ 4 ರಂದು 40 ವರ್ಷದ ಮಾಜಿ ಪತ್ರಕರ್ತ ಗಢ್ವಿಯವರನ್ನು ಸಮೀಕ್ಷೆಯ ಆಧಾರದ ಮೇಲೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು.
ಖಂಬಲಿಯಾ ಅಸೆಂಬ್ಲಿ ಕ್ಷೇತ್ರ ಜಾಮ್ನಗರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಗುಜರಾತ್ ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್