ಅನಾರೋಗ್ಯ: ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲು
Team Udayavani, Dec 25, 2020, 1:32 PM IST
ಹೈದರಾಬಾದ್: ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಕ್ತದೊತ್ತಡದ ಏರಿಳಿತದ ಕಾರಣ ರಜನಿಕಾಂತ್ ಅವರನ್ನು ಶುಕ್ರವಾರ ಬೆಳಿಗ್ಗೆ ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ನಾಲ್ವರು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಳಿಸಿದ್ದರು. ರಜನಿಕಾಂತ್ ಅವರರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ವರದಿಯಾಗಿದೆ.
ಇದನ್ನೂ ಓದಿ:‘ಕಂಠಿ, ಸಾಹೇಬ’ ಚಿತ್ರ ನಿರ್ದೇಶಕ ಭರತ್ ನಿಧನ
ಈ ಬಗ್ಗೆ ಅಪೋಲೊ ಆಸ್ಪತ್ರೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಮೆಗಾ ಸ್ಟಾರ್ ಗೆ ಯಾವುದೇ ಕೋವಿಡ್ ಲಕ್ಷಣಗಳಿಲ್ಲ. ಆದರೆ ರಕ್ತದೊತ್ತಡದ ಏರಿಳಿತಗಳು ಕಾಣಿಸಿಕೊಂಡಿದೆ. ಇದರ ಹೊರತಾಗಿದೆ ಬೇರೆ ಯಾವುದೇ ಸಮಸ್ಯೆಗಳಿಲ್ಲ. ನುರಿತ ವೈದ್ಯರ ತಂಡ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ನಿಗಾ ಇರಿಸಲಿದೆ ಎಂದು ತಿಳಿಸಿದೆ.