ಸೇಡು ತೀರಿಸಲು ನೀರು ಪೂರೈಕೆ ಬಂದ್?
Team Udayavani, Jan 14, 2022, 6:58 AM IST
ತಿರುಪತಿ: ತಿರುಪತಿಯ ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಘಟನೆ ನಡೆದಿದೆ. ಏರ್ಪೋರ್ಟ್ಗೆ ತಿರುಪತಿ ನಗರಪಾಲಿಕೆ ಉಪ ಮೇಯರ್ ಅಭಿನಯ ರೆಡ್ಡಿ ಪ್ರವೇಶಿಸಲು ಯತ್ನಿಸಿದಾಗ, ಅಧಿಕಾರಿಗಳು ತಡೆದಿದ್ದಾರೆ.
ಅದಾದ ನಂತರ ವಿಮಾನ ನಿಲ್ದಾಣ, ಅಲ್ಲಿನ ಸಿಬ್ಬಂದಿ ನಿವಾಸಕ್ಕೆ ನೀರು ಪೂರೈಕೆ ಬಂದ್ ಆಗಿದೆ! ರೆಡ್ಡಿ ಸೇಡು ತೀರಿಸಿಕೊಳ್ಳಲೆಂದೇ ಹೀಗೆ ಮಾಡಿದ್ದಾರೆಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಪೈಪ್ಲೈನ್ ಕಟ್ಟಿಕೊಂಡಿದ್ದರಿಂದ ನೀರು ಪೂರೈಕೆ ಬಂದ್ ಆಗಿದೆ ಎಂದು ನಗರಪಾಲಿಕೆ ಸಮಜಾಯಿಷಿ ನೀಡಿದೆ.
ಅಭಿನಯ ರೆಡ್ಡಿ ಶಾಸಕ ಬಿ.ಕರುಣಾಕರ ರೆಡ್ಡಿ ಪುತ್ರ. ಈ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!