ಕಲ್ಲು ಎಸೆಯೋ ಹಬ್ಬ…ಇಲ್ಲಿ ರಕ್ತ ನೆಲಕ್ಕೆ ಚೆಲ್ಲಿದರಷ್ಟೇ ದೇವರಿಗೆ ಖುಷಿ!
Team Udayavani, Aug 17, 2019, 4:24 PM IST
ಪಿತ್ತೋರಾಗಢ (ಉತ್ತರಾಖಂಡ): ಕಲ್ಲೆಸೆಯುವುದೇ ಇಲ್ಲಿನ ಸಂಭ್ರಮ, ಇನ್ನೊಬ್ಬರು ಗಾಯಗೊಂಡು ರಕ್ತ ನೆಲಕ್ಕೆ ಚೆಲ್ಲಿದರಷ್ಟೇ ದೇವರಿಗೆ ಖುಷಿ.
ಅರೆ ಎಲ್ಲಿ ಇದು ಹೀಗೆಲ್ಲ.. ಅಂದುಕೊಳ್ಳುತ್ತೀರಾ? ಇದು ಉತ್ತರಾಖಂಡದ ಚಂಪಾವತ್ ಜಿಲ್ಲೆಯ ದೇವಿಧುರ ದೇಗುಲದಲ್ಲಿ ನಡೆಯುವ ವಾರ್ಷಿಕ ಹಬ್ಬ. ಮೊನ್ನೆಯಷ್ಟೇ ನಡೆದ ಕಲ್ಲು ಬಿಸಾಡುವ ಈ ಹಬ್ಬದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಕ್ಷಾ ಬಂಧನದ ದಿನ ಇಲ್ಲಿ ಕಲ್ಲು ಬಿಸಾಡುವ ಹಬ್ಬ ಆಚರಿಸಲಾಗುತ್ತದೆ. ಕಲ್ಲೆಸತದಿಂದ ಭಕ್ತರು ಗಾಯಗೊಂಡರೆ, ಇದರಿಂದ ದೇವಿ ಸಂಪ್ರೀತಳಾಗುತ್ತಾಳೆ ಎಂಬ ನಂಬಿಕೆ ಇಲ್ಲಿನವರದ್ದು.
Around 100 people were injured during a religious stone throwing festival in #India pic.twitter.com/6c2MoX7dwC
— RT (@RT_com) August 17, 2019
ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿ ಕಲ್ಲೆಸೆವ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿಯೂ ಕೇವಲ 10 ನಿಮಿಷದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹಿಂದಿನ ಕಾಲದಲ್ಲಿ ಇಲ್ಲಿ ದೇವಿ ಎದುರು ಪ್ರಾಣಾರ್ಪಣೆ ಮಾಡುವ ಪದ್ಧತಿಯಿತ್ತಂತೆ. ಈಗ ವೃದ್ಧೆಯೊಬ್ಬಳು ಬಂದು ತನ್ನ ಮೊಮ್ಮಕ್ಕಳನ್ನು ಕಾಪಾಡಬೇಕೆಂದು ಪ್ರಾರ್ಥಿಸುತ್ತಾಳೆ. ಪ್ರಾರ್ಥನೆ ಬಳಿಕ ಸ್ಥಳದಲ್ಲಿರುವ ಭಕ್ತರು ಪರಸ್ಪರ ಕಲ್ಲೆಸೆದು ರಕ್ತ ಚೆಲ್ಲುತ್ತಾರೆ. ಇದು ಪ್ರಾಣಾರ್ಪಣೆಯಷ್ಟೇ ಶ್ರೇಷ್ಠವಾಗಿದೆ ಎಂದು ನಂಬಲಾಗುತ್ತದೆ.
ಸ್ಥಳೀಯ ಜಮೀನ್ದಾರ ವಂಶಜರು ಎರಡು ಗುಂಪುಗಳಾಗಿ ಹಬ್ಬದಲ್ಲಿ ಕಲ್ಲೆಸೆಯುತ್ತಾರೆ. ಕೊನೆಗೆ ದೇಗುಲದ ಪೂಜಾರಿ ಸಾಕು ಎಂದಾಗಲೇ ಕಲ್ಲೆಸೆತ ನಿಲ್ಲುತ್ತದೆ. ಈ ಪದ್ಧತಿಗೆ ಹೈಕೋರ್ಟ್ ನಿಷೇಧ ಹೇರಿದ್ದರೂ ಕಲ್ಲೆಸೆಯುವ ಪದ್ಧತಿ ಇನ್ನೂ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ