
RBI ವಿರುದ್ಧ ಸಚಿವ ಜೇಟ್ಲಿ ವಾಗ್ಧಾಳಿ
Team Udayavani, Oct 31, 2018, 4:00 AM IST

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಹಣಕಾಸು ಸಚಿವಾಲಯದ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ಆಗಾಗ್ಗೆ ಹೊರಬರುತ್ತಲೇ ಇರುತ್ತವೆ. ಈಗ ಮತ್ತೂಮ್ಮೆ ಈ ಅಂತಃಕಲಹ ಬಹಿರಂಗಗೊಂಡಿದೆ. ಈ ಹಿಂದೆ ಸಾಲ ನೀಡಿಕೆ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಆರ್ಬಿಐ ವಿಫಲವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಾತನಾಡಿದ್ದ RBI ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ, ಕೇಂದ್ರ ಸರಕಾರ RBI ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುತ್ತಿದೆ ಎಂಬ ಆರೋಪಿಸಿದ್ದರು. ಇದು ದೇಶವನ್ನು ವಿಪತ್ತಿಗೆ ದೂಡಲಿದೆ ಎಂದು ಎಚ್ಚರಿಸಿದ್ದರು.
ಜೇಟ್ಲಿ ಹೇಳಿದ್ದೇನು?
2008ರಿಂದ 2014ರ ಅವಧಿಯಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗ ಆರ್ಥಿಕ ಬೆಳವಣಿಗೆಯನ್ನು ಕೃತಕವಾಗಿ ಉತ್ತೇಜಿಸಲು ಬ್ಯಾಂಕ್ಗಳಿಗೆ ಯಥೇಚ್ಛವಾಗಿ ಸಾಲ ನೀಡುವಂತೆ ಸೂಚಿಸಲಾಗಿತ್ತು. ಸಾಲ ನೀಡಿಕೆ ಪ್ರಮಾಣ ನಿಯಂತ್ರಿಸುವಲ್ಲಿ ಆರ್ಬಿಐ ವಿಫಲವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ವಿರಳ್ ಆಚಾರ್ಯ ಹೇಳಿದ್ದೇನು?
ಆರ್ಬಿಐ ಸ್ವಾತಂತ್ರ್ಯವನ್ನು ಗೌರವಿಸದ ಸರಕಾರವು ಹಣಕಾಸು ಮಾರುಕಟ್ಟೆಯ ಸಮಸ್ಯೆಯನ್ನು ಎದುರಿಸುತ್ತದೆ. ಅಷ್ಟೇ ಅಲ್ಲ, ಅದು ಆರ್ಥಿಕ ಸಂಕಷ್ಟಕ್ಕೂ ಕಾರಣವಾಗಬಹುದು ಎಂದು ಆಚಾರ್ಯ ಹೇಳಿದ್ದರು.
ಸಭೆಗೂ ಮುನ್ನ ಭಿನ್ನಾಭಿಪ್ರಾಯ
ಜೇಟ್ಲಿ ಹಾಗೂ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಮಂಗಳವಾರ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭೇಟಿಯಾಗಿದ್ದಾರೆ. ಹಣಕಾಸಿನ ದ್ರವ್ಯತೆ ಹಾಗೂ ಇತರ ವಿಷಯಗಳ ಕುರಿತು ಜೇಟ್ಲಿ ಮತ್ತು ಪಟೇಲ್ ಮಾತುಕತೆ ನಡೆಸಿದ್ದಾರೆ.
ಏನಿದು ವಿವಾದ?
ಆರ್ಬಿಐ ಹಾಗೂ ಸರಕಾರದ ಮಧ್ಯೆ ಹಿಂದಿನಿಂದಲೂ ಭಿನ್ನಾಭಿಪ್ರಾಯಗಳಿದ್ದವು. ಸರಕಾರಕ್ಕೆ ಅನುಕೂಲಕರವಾದ ವಿತ್ತ ನೀತಿಯನ್ನು ಕೈಗೊಳ್ಳಬೇಕೆಂದು ಆರ್ಬಿಐ ಮೇಲೆ ಸರಕಾರಗಳು ಒತ್ತಡ ಹೇರುತ್ತಲೇ ಇದ್ದವು. ರೆಪೋ ದರ ಇಳಿಕೆಯಿಂದಲೇ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲಾಗದು ಎಂಬುದಾಗಿ ಬಹುತೇಕ ಆರ್ಬಿಐ ಗವರ್ನರ್ಗಳು ಸರಕಾರದ ವಿರುದ್ಧ ಚಾಟಿ ಬೀಸುತ್ತಲೇ ಇದ್ದರು. ಆದರೆ ಈ ಬಾರಿಯ ವಿವಾದ ಸಂಪೂರ್ಣ ವಿಭಿನ್ನ ನೆಲೆಯಲ್ಲಿದೆ. ಇತ್ತೀಚೆಗೆ ಹಣಕಾಸು ಮುಗ್ಗಟ್ಟಿಗೀಡಾದ ಐಎಲ್ಆ್ಯಂಡ್ಎಫ್ಎಸ್ ಹಣಕಾಸು ಸಂಸ್ಥೆಯ ಪರಿಣಾಮ ಇಡೀ ದೇಶದ ಆರ್ಥಿಕ ವಲಯಕ್ಕೆ ಹರಡುವ ಭೀತಿ ಎದುರಾಗಿದ್ದು, ಇದನ್ನು ನಿಯಂತ್ರಿಸುವಂತೆ ಸರಕಾರ ಆರ್ಬಿಐ ಮೇಲೆ ಒತ್ತಡ ಹೇರಿದೆ. ಆದರೆ ಯಾವುದೇ ದ್ರವ್ಯತೆ ಸಮಸ್ಯೆ ಇಲ್ಲ ಎಂದು ಆರ್ಬಿಐ ಭರವಸೆ ನೀಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amarnath Yatra ವೇಳೆ ದಾಳಿ ನಡೆಸಲು ಉಗ್ರರ ಸಂಚು

Odisha; ಸಿಕಂದರಾಬಾದ್-ಅಗರ್ತಲಾ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ

186 ಪ್ರಯಾಣಿಕರಿದ್ದ ಕೋಲ್ಕತ್ತಾ-ದೋಹಾ ವಿಮಾನಕ್ಕೆ ಬಾಂಬ್ ಬೆದರಿಕೆ!

Fake Notes: ಜಾತ್ರೆಯಲ್ಲಿ ಐಸ್ಕ್ರೀಮ್ ಸವಿಯಲು ನಕಲಿ ನೋಟ್ಗಳನ್ನು ಬಳಸಿದ ಅಪ್ರಾಪ್ತರು

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
ಹೊಸ ಸೇರ್ಪಡೆ

ಬಸ್ಗಳ ಮೇಲಾಟ: ವಿದ್ಯಾರ್ಥಿ ಸಾವು; ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹನಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಹುಲಿ ಹೆಜ್ಜೆ; ಗ್ರಾಮಸ್ಥರಲ್ಲಿ ಆತಂಕ

Basangouda Patil Yatnal ಟ್ವೀಟ್ ಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು

Amarnath Yatra ವೇಳೆ ದಾಳಿ ನಡೆಸಲು ಉಗ್ರರ ಸಂಚು

Viral Video: ಪಲ್ಟಿಯಾದ ಮದ್ಯ ತುಂಬಿದ ಲಾರಿ- ಬಾಟ್ಲಿಗಾಗಿ ಮುಗಿಬಿದ್ದ ಜನ!