ಮನುಕುಲದ ಮೊದಲ ರಾಜಧಾನಿ, ಶಾಂತಿ ಪ್ರಿಯರ ನಗರಿ ಅಯೋಧ್ಯೆ


Team Udayavani, Nov 10, 2019, 4:09 AM IST

manukulada

ಮೋಕ್ಷದಾಯಕ ಸಪ್ತನಗರಗಳಲ್ಲಿ ಮೊದಲನೆಯದೇ ಅಯೋಧ್ಯೆ. ಯುದ್ಧದ ಕಲ್ಪನೆಯನ್ನೂ ಮಾಡದಿರುವಂಥ ಶಾಂತಿಪ್ರಿಯರ ನಗರ ಎಂಬ ಕಾರಣಕ್ಕೆ ಅಯೋಧ್ಯೆ ಎಂಬ ಹೆಸರಿನಿಂದ ಕರೆಯಲಾಯಿತು. ಮಾನವೇಂದ್ರನಾದ ಮನುವಿನಿಂದಲೇ ನಿರ್ಮಿತವಾದ ನಗರ ಅಯೋಧ್ಯೆ ಎಂದು ವಾಲ್ಮೀಕಿಯವರು ಬಣ್ಣಿಸಿದ್ದಾರೆ. ಸೂರ್ಯವಂಶದ ಶ್ರೇಷ್ಠ ಚಕ್ರವರ್ತಿ ದಿಲೀಪ ಗೋ ಸೇವೆಯ ಆದರ್ಶವನ್ನು ಜಗದೆದುರು ಮಂಡಿಸಿದ ತಾಣ. ಇಕ್ಷಾಕು ವಂಶವನ್ನು ರಘುವಂಶವನ್ನಾಗಿಸಿದ ರಾಜಾ ರಘುವಿನ ರಾಜಧಾನಿ. ದಶರಥನು ಋಷ್ಯಶೃಂಗರ ನೇತೃತ್ವದಲ್ಲಿ ಪುತ್ರಕಾಮೇಷ್ಠಿ ಯಜ್ಞವನ್ನು ನಡೆಸಿದ ಸ್ಥಳ.

ಅಯೋಧ್ಯೆಯಲ್ಲಿ ಕಾಲಿರಿಸುತ್ತಾ ಇದ್ದಂತೆ ಮನಸ್ಸು ಯುಗಾಂತರಕ್ಕೆ ಧಾವಿಸುತ್ತದೆ. ಅಜ- ಇಂದುಮತಿಯರ ವಿವಾಹವಾದ ತಾಣ ಯಾವುದು? ದಶರಥ ಕುವರಿ ಶಾಂತಾದೇವಿಯನ್ನು ಋಷ್ಯಶೃಂಗರು ವರಿಸಿದ ಸ್ಥಳ ಯಾವುದು? ಭೂಮಿಸುತೆ ಸೀತೆ ಹೇಮದುಪ್ಪರಿಗೆಯಲ್ಲಿ ಅತ್ತೆಯವರೊಂದಿಗೂ ಅರಮನೆಯ ಪರಿಜನರೊಂದಿಗೂ ಸಡಗರದಿಂದ ಇರುತ್ತಿದ್ದ ಅಂತಃಪುರ ಎಲ್ಲಿತ್ತೂ, ಭಕ್ತಾಗ್ರಣಿ ಯಾದ ಮಾರುತಿಯು ದಾಶರಥಿಯ ಚರಣವನ್ನು ಎಲ್ಲಿ ಪೂಜಿಸುತ್ತಿದ್ದನೊ- ಈ ಎಲ್ಲವನ್ನೂ ನೋಡುವಾಸೆ.

ಸರಯೂ ಪಾವನೆ…: ಅಯೋಧ್ಯೆ ಸರಯೂ ತೀರದಲ್ಲಿದೆ. ಸರಯೂ ಬಹಳ ಧನ್ಯೆ. ಶ್ರೀರಾಮನ ಸೇವೆ ಮಾಡಿದ ಆಕೆ ಕೊನೆಗೊಮ್ಮೆ ಅವನನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡ ಪಾವನೆ. ಗಂಗಾ, ಯಮುನಾ, ಸರಸ್ವತಿಯರೊಂದಿಗೆ ಸ್ಮರಿಸಲ್ಪಡುವ ಸರಯೂ ಕೈಲಾಸದ ಬಳಿ ಮಾನಸದಲ್ಲಿ ಜನಿಸಿ ದಕ್ಷಿಣಕ್ಕೆ ಧಾವಿಸಿ ಅಯೋಧ್ಯೆಯನ್ನು ಆಲಂಗಿಸಿ ಹರಿದಿದ್ದಾಳೆ. ವಿಷ್ಣುವಿನ ಶೀರ್ಷಸ್ಥಾನವೆಂದು ಭಾವಿಸಲಾಗಿರುವ ಈ ನಗರ ಸೂರ್ಯವಂಶೀಯರ ರಾಜಧಾನಿಯಾಗಿ ಮೆರೆಯಿತು. ಮನುವಿನ ಬಳಿಕ ಇಕ್ಷಾಕು ಅಯೋಧ್ಯೆಯ ಅರಸನಾದ.

ಮನುವಿನಿಂದ 20 ತಲೆಮಾರುಗಳ ಬಳಿಕ ಯವನಾಶ್ವನ ಮಗನಾದ ಮಾಂಧಾತ ಅಯೋಧ್ಯೆಯ ಪ್ರತಿಷ್ಠೆಯನ್ನು ಹೆಚ್ಚು ಮಾಡಿದ. ಮಾಂಧಾತನ ಬಳಿಕ ಬಂದವರಲ್ಲಿ ಹರಿಶ್ಚಂದ್ರನೇ ಅತ್ಯಂತ ಪ್ರಸಿದ್ಧ. ವಿಶ್ವಾಮಿತ್ರನ ಪರೀಕ್ಷೆಗೆ ಗುರಿಯಾದ ಹರಿಶ್ಚಂದ್ರ ಸತ್ಯಕ್ಕಾಗಿ ಸಕಲವನ್ನೂ ತೊರೆದು ಸ್ಮಶಾನವಾಸಿಯಾದ. ಸುಂಕ ಕೊಡದ ಕಾರಣಕ್ಕಾಗಿ ತನ್ನ ಮಗನ ಸಂಸ್ಕಾರಕ್ಕೂ ಅವಕಾಶ ಕೊಡದ ಅವನು ವಿಶ್ವಾಮಿತ್ರರ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಅಯೋಧ್ಯೆಯ ಸಿಂಹಾಸನವನ್ನು ಪುನಃ ಅಲಂಕರಿಸಿದ. ಸಮುದ್ರವನ್ನು ಸಾಗರವನ್ನಾಗಿಸಿದ ಸಗರ ಮತ್ತು ಅವನ ಮಕ್ಕಳು ಅಯೋಧ್ಯೆಯವರೇ. ಅಂಶುಮಂತ, ಭಗೀರಥ, ಅಜ ಮುಂತಾದ ರಾಜರ್ಷಿಗಳನ್ನು ಕಂಡ ನಗರ ಇದು. ಈ ಮಾಲಿಕೆಯಲ್ಲಿ 65ನೇಯವನೇ ಪ್ರಭು ಶ್ರೀ ರಾಮಚಂದ್ರ.

ಸರ್ವರಿಗೂ ಶ್ರದ್ಧಾಕೇಂದ್ರ: ಅಯೋಧ್ಯೆ ಜೈನ ಪಂಥದವರಿಗೂ ಪರಮ ಶ್ರದ್ಧಾಕೇಂದ್ರ. ಜೈನ ಪಂಥದ 24 ತೀರ್ಥಂಕರರಲ್ಲಿ 22 ಮಂದಿ ಸೂರ್ಯವಂಶದವರು. ಆದಿನಾಥನಿಗೆ ಜ್ಞಾನೋದಯ ವಾದದ್ದು ಅಯೋಧ್ಯೆಯ ಬಳಿಯೇ. ಈ ಎಲ್ಲ ಕಾರಣಗಳಿಂದ ಅಯೋಧ್ಯೆ ಜೈನರ ಹೃದಯದಲ್ಲಿ ಅಪೂರ್ವ ಸ್ಥಾನ ಗಳಿಸಿದೆ. ಬೌದ್ಧ ಧರ್ಮವು ಉಚ್ಛಾಯ ಸ್ಥಿತಿಯಲ್ಲಿದ್ದಾಗ ಅಯೋಧ್ಯೆ ಸಾಕೇತ ಎಂದು ಪ್ರಸಿದ್ಧವಾಗಿತ್ತು. ಗಯಾದಲ್ಲಿ ಸಿದ್ಧಾರ್ಥ ಬುದ್ಧನಾದ. ಸಾರನಾಥದಲ್ಲಿ ಮೊದಲ ಪ್ರವಚನ ನೀಡಿದ. ಹೀಗೆ ಮಗಧ ಮತ್ತು ಕಾಶಿಯ ಪುಣ್ಯಭೂಮಿಯಲ್ಲಿ ಬೌದ್ಧ ಪಂಥ ಜನಿಸಿತು.

ಆದರೆ, ಅದಕ್ಕೆ ಮೊದಲ ಪೋಷಣೆ ಸಿಕ್ಕಿದ್ದು ಕೋಸಲದಲ್ಲಿ. ಬೌದ್ಧ ಭಿಕ್ಷುಗಳ ಬದುಕಿಗೆ ಸಂಬಂಧಿ ಸಿದ ವಿ ನಿಷೇಧಗಳ ರಚನೆಯಾದದ್ದೂ ಅಯೋಧ್ಯೆಯಲ್ಲೇ. ಪ್ರಸಿದ್ಧ ಕವಿ, ನಾಟಕಕಾರ, ದಾರ್ಶನಿಕ ಅಶ್ವಘೋಷ ಅಯೋಧ್ಯೆಯವನು. ಬೌದ್ಧ ಧರ್ಮದ ಜ್ಞಾನಕೋಶ ಎಂದು ಪರಿಗಣಿಸಲಾಗಿರುವ “ಅಭಿಧರ್ಮ ಕೋಶ’ ಎನ್ನುವ ಗ್ರಂಥ ರಚನೆಯಾದದ್ದು ಅಯೋಧ್ಯೆಯಲ್ಲಿ. ಸಿಕ್ಖ್ ಪಂಥದ ಸ್ಥಾಪಕ ನಾನಕ್‌ ದೇವ್‌ ಹಾಗೂ ಗುರು ಅಮರ ದಾಸ್‌, ತೇಗ ಬಹದ್ದೂರ್‌, ಗುರುಗೋವಿಂದ ಸಿಂಹರು ಅಯೋಧ್ಯೆಯನ್ನು ಸಂದರ್ಶಿಸಿದ್ದಾರೆ. ಗುರುನಾನಕರಿಗೆ ದೈವ ಸಾಕ್ಷಾತ್ಕಾರ ಆಗಿದ್ದೂ ಇಲ್ಲಿಯೇ.

ಮೇಲಿಂದ ಮೇಲೆ ಆಕ್ರಮಣ: ರಾಜಾ ವಿಕ್ರಮಾದಿತ್ಯನ ಸಮಯದಲ್ಲಿ ಗುಪ್ತರ ಕಾಲದಲ್ಲಿ ಗೌರವದ ಸ್ಥಿತಿಗೆ ತಲುಪಿದ್ದರೂ ನಂತರ ಮುಸಲ್ಮಾನರ ಆಕ್ರಮಣಗಳಿಂದ ಜರ್ಝರಿತವಾಯಿತು. 1193ರಲ್ಲಿ ಶಹಾಬುದ್ದೀನ್‌ ಘೋರಿ ಅಯೋಧ್ಯೆಯನ್ನು ಆಕ್ರಮಿಸಿದ. 1526ರಲ್ಲಿ ಭಾರತಕ್ಕೆ ಬಂದೆರಗಿದ ಬಾಬರ್‌ 1528ರಲ್ಲಿ ಅಯೋಧ್ಯೆಯ ಮೇಲೆ ಆಕ್ರಮಣ ಮಾಡಿದ. ಅಲ್ಲಿಂದ ಅಯೋಧ್ಯೆಯ ಬಾಳಿನಲ್ಲಿ ದೌರ್ಭಾಗ್ಯದ ದಿನಗಳು ಪ್ರಾರಂಭವಾದವು. ಆ ವೇಳೆಗೆ ಅಯೋಧ್ಯೆಯಲ್ಲಿ ನೆಲೆಸಿದ್ದ ಫಕೀರನ ಆಸೆ ಪೂರೈಸಲಿಕ್ಕಾಗಿ, ತನ್ನ ಸೇನಾಧಿಕಾರಿ ಆಗಿದ್ದ ಮೀರ್‌ ಬಾಕಿಖಾನ್‌ನ ಮೂಲಕ ಶ್ರೀರಾಮ ಜನ್ಮಸ್ಥಾನದ ಭವ್ಯ ದೇಗುಲವನ್ನು ಧ್ವಂಸಗೊಳಿಸಿದ ನಂತರ ಅದೇ ಸ್ಥಳದಲ್ಲಿ ದೇಗುಲದ ಸಾಮಗ್ರಿಗಳನ್ನೇ ಬಳಸಿ ಮಸೀದಿಗೆ ಅಡಿಪಾಯ ಹಾಕಲಾಯಿತು. ಆದರೆ, ಅದು ಪೂರ್ಣಗೊಳ್ಳಲಿಲ್ಲ. ಅದರ ಮುಕ್ತಿಗಾಗಿ ನಿರಂತರ ಸಂಘರ್ಷ ನಡೆಯಿತು. ಸ್ವಾತಂತ್ರ ನಂತರವೂ ಅದರ ದಾಸ್ಯ ಕೊನೆಗೊಳ್ಳಲಿಲ್ಲ.

ರಾಮಜಪ ಶುರು…: 1940ರಿಂದ ಅಲ್ಲಿ ನಿರಂತರ “ರಾಮಚರಿತಮಾನಸ’ದ ಪಠಣ ಪ್ರಾರಂಭವಾಯಿತು. 1949ನೇ ಡಿಸೆಂಬರ್‌ನಲ್ಲಿ ಶ್ರೀರಾಮನ ವಿಗ್ರಹ ಅಲ್ಲಿ ಮರು ಪ್ರತಿಷ್ಠಾಪಿಸಲಾಯಿತು. ಆ ಕ್ಷಣದಿಂದ ನಿರಂತರ ಅಖಂಡ ಭಜನೆ ಪ್ರಾರಂಭವಾಗಿದೆ. ವಿವಾದ ಮುಗಿಯುತ್ತಾ ಇಲ್ಲ. ಗರ್ಭಗುಡಿಗೆ ಬೀಗ, ಆ ಬೀಗವನ್ನು 1986ರಲ್ಲಿ ತೆರೆಯಲಾಯಿತು. ನಂತರ ಶಿಲಾಪೂಜನ, ಪಾದುಕಾಯಾತ್ರೆ, ಸಂತ ಯಾತ್ರೆಗಳು ಹಾಗೂ ಕರಸೇವೆಗಳೂ ನಡೆದವು. 1992ರ ಡಿ. 6ರಂದು ವಿವಾದಿತ ಕಟ್ಟಡ ಅನಿರೀಕ್ಷಿತವಾಗಿ ಕರಸೇವಕರ ಆಕ್ರೋಶಕ್ಕೆ ತುತ್ತಾಯಿತು. ಆದರೆ, ಭವ್ಯ ಮಂದಿರ ನಿರ್ಮಾಣದ ಆಶಯ ಇನ್ನೂ ಅಪೂರ್ಣವಾಗಿಯೇ ಉಳಿದಿದೆ.

ಇದು “ಭಾರತ ದರ್ಶನ’ ಉಪನ್ಯಾಸದ ಆಯ್ದ ಭಾಗ
ಕೃಪೆ: ಗೀತಭಾರತಿ, ಬೆಂಗಳೂರು

* ಬಿ.ವಿ. ವಿದ್ಯಾನಂದ ಶೆಣೈ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.