ಸ್ಮಾರ್ಟ್ ಫೋನ್ ಕೊಳ್ಳಲು ದುಡ್ಡಿಲ್ಲದೆ ತನ್ನ ರಕ್ತವನ್ನೇ ಮಾರಲು ಮುಂದಾದ 16 ವರ್ಷದ ಬಾಲಕಿ
ಬಾಲಕಿಯ ಮಾತು ಕೇಳಿ ದಂಗಾದ ಆಸ್ಪತ್ರೆ ವೈದ್ಯ
Team Udayavani, Oct 20, 2022, 1:45 PM IST
ಪಶ್ಚಿಮ ಬಂಗಾಲ : ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ಫೋನ್ಗಳ ಕ್ರೇಝ್ ಹೆಚ್ಚಾಗತೊಡಗಿದೆ.
ಆದರೆ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಸ್ಮಾರ್ಟ್ ಫೋನ್ ಗೆ ಎಷ್ಟು ಹೊಂದಿಕೊಂಡಿದ್ದಾರೆ ಎಂದರೆ ಫೋನ್ ಇಲ್ಲದೆ ಜೀವನವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ದಾಸರಾಗಿದ್ದಾರೆ, ಮೊಬೈಲ್ ಇದ್ದರೆ ಬೇರೇನೂ ಬೇಡ ಎಂಬ ಮಟ್ಟಕ್ಕೆ ಮಕ್ಕಳ ಮನಸ್ಥಿತಿ ಬೆಳೆದುಬಿಟ್ಟಿದೆ ಅದಕ್ಕೆ ಪೂರಕ ಎಂಬಂತೆ ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಸನ್ನಿವೇಶ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ 16 ವರ್ಷದ ಬಾಲಕಿಯೊಬ್ಬಳು ಸ್ಮಾರ್ಟ್ ಫೋನ್ ಖರೀದಿಸಲು ದುಡ್ಡಿಲ್ಲದೆ ತನ್ನ ರಕ್ತವನ್ನೇ ಮಾರಿ ಮೊಬೈಲ್ ಖರೀದಿಸಲು ಮುಂದಾಗಿರುವ ಆತಂಕಕಾರಿ ಘಟನೆ ನಡೆದಿದೆ.
ಘಟನೆ ವಿವರ : ಎಲ್ಲರಲ್ಲೂ ಸ್ಮಾರ್ಟ್ ಫೋನ್ ಇದೆ ತನ್ನ ಬಳಿ ಇಲ್ಲ ಹೇಗಾದರೂ ಮಾಡಿ ಫೋನ್ ಖರೀದಿಸಬೇಂದು ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ ಜಿಲ್ಲೆಯ 16 ವರ್ಷದ ಬಾಲಕಿಯೊಬ್ಬಳು ಆನ್ ಲೈನ್ ಮೂಲಕ 9,000 ಮೌಲ್ಯದ ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದಾಳೆ ಆದರೆ ಫೋನ್ ಏನೋ ಆರ್ಡರ್ ಆಯಿತು ಆದರೆ ಖರೀದಿಸಲು ಅವಳ ಬಳಿ ದುಡ್ಡು ಇರಲಿಲ್ಲ, ಅದಕ್ಕೆ ಆಕೆ ಎಲ್ಲಾ ರೀತಿಯ ಆಲೋಚನೆ ಮಾಡಿ ಕೊನೆಗೆ ತನ್ನ ರಕ್ತವನ್ನು ಮಾರಾಟ ಮಾಡಿ ದುಡ್ಡು ಸಂಗ್ರಹಕ್ಕೆ ಮುಂದಾಗಿದ್ದಾಳೆ.
ಇದನ್ನೂ ಓದಿ : ಇಂಡೋನೇಷ್ಯಾದ ಮಸೀದಿಯಲ್ಲಿ ಅಗ್ನಿ ಅವಘಡ : ಧರೆಗುರುಳಿದ ಬೃಹತ್ ಗುಮ್ಮಟ
ಪೋಷಕರಲ್ಲಿ ಟ್ಯೂಷನ್ ಗೆ ಹೋಗುವುದಾಗಿ ಹೇಳಿ ಹೋದ ಅಪ್ರಾಪ್ತ ಬಾಲಕಿ ಬಸ್ನಲ್ಲಿ ಸುಮಾರು 30 ಕಿಮೀ ಪ್ರಯಾಣಿಸಿ ನೇರವಾಗಿ ಬಲೂರ್ಘಾಟ್ ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗಿ ತನ್ನ ರಕ್ತವನ್ನು ಮಾರಾಟ ಮಾಡಲು ವೈದ್ಯರಲ್ಲಿ ಕೇಳಿಕೊಂಡಿದ್ದಾಳೆ ಈ ವಿಚಾರ ಕೇಳಿ ಗಾಬರಿಗೊಂಡ ವೈದ್ಯರು ಬಾಲಕಿಯನ್ನು ಸಮಾಧಾನವಾಗಿ ವಿಚಾರಿಸಿದ್ದಾರೆ ಈ ವೇಳೆ ಬಾಲಕಿ ತನ್ನ ಸಹೋದರನಿಗೆ ಹುಷಾರಿಲ್ಲ ಹಾಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದಾಳೆ, ಆದರೂ ಬಿಡದ ವೈದ್ಯರು ಮತ್ತೆ ವಿಚಾರಣೆ ನಡೆಸಿದಾಗ ತಾನು ಆನ್ ಲೈನ್ ನಲ್ಲಿ ಫೋನ್ ಆರ್ಡರ್ ಮಾಡಿದ್ದು ಅದಕ್ಕಾಗಿ ಹಣದ ಅವಶ್ಯಕತೆ ಇದೆ ಎಂದು ಸತ್ಯ ಹೇಳಿಕೊಂಡಿದ್ದಾಳೆ ಈ ವಿಚಾರ ಕೇಳಿದ ವೈದ್ಯರೇ ಒಮ್ಮೆ ದಂಗಾಗಿದ್ದಾರೆ ಬಳಿಕ ಬಾಲಕಿಯನ್ನು ಸಮಾಧಾನಪಡಿಸಿ ಪೋಷಕರನ್ನು ಆಸ್ಪತ್ರೆಗೆ ಬರಹೇಳಿ ಬಾಲಕಿಗೆ ಬುದ್ದಿವಾದ ಹೇಳಿ ಪೋಷಕರೊಂದಿಗೆ ಕಳುಹಿಸಿಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ