ಭಾರತ ರತ್ನ ಬಿಸ್ಮಿಲ್ಲಾ ಖಾನ್‌ ಶೆಹನಾಯ್‌ ಕದ್ದ ಮೊಮ್ಮಗ ಅರೆಸ್ಟ್‌


Team Udayavani, Jan 11, 2017, 10:56 AM IST

Bismillah Kahn-700.jpg

ವಾರಾಣಸಿ : ವಿಶ್ವ ವಿಖ್ಯಾತ ಶೆಹನಾಯ್‌ ಮಾಂತ್ರಿಕ, ಭಾರತ ರತ್ನ ಪುರಸ್ಕೃತ ಬಿಸ್ಮಿಲ್ಲಾ ಖಾನ್‌ ಅವರ ಮನೆಯಲ್ಲಿ ಈಚೆಗೆ ನಡೆದಿದ್ದ ಅತ್ಯಮೂಲ್ಯ ಶೆಹನಾಯ್‌ ವಾದ್ಯಗಳ ನಿಗೂಢ ಕಳವಿನ ಪ್ರಕರಣವನ್ನು ವಾರಾಣಸಿ ಪೊಲೀಸ್‌ನ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ಭೇದಿಸಿದೆ.  ಖಾನ್‌ ಅವರ ಮೊಮ್ಮಗ ಮತ್ತು ಇಬ್ಬರು ಜ್ಯುವೆಲ್ಲರ್‌ಗಳ ಸಹಿತ ಮೂವರನ್ನು ಬಂಧಿಸುವ ಮೂಲಕ ಎಸ್‌ಟಿಎಫ್ ಮಹತ್ತರ ಸೀಮೋಲ್ಲಂಘನ ಸಾಧಿಸಿದೆ. 

ಶೆಹನಾಯ್‌ ವಾದ್ಯಗಳನ್ನು ಕದ್ದು ನಗರದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರ ಮೊಮ್ಮಗ ನಜ್ರೆ ಹಸನ್‌ ನನ್ನು ಎಸ್‌ಟಿಎಫ್ ಬಂಧಿಸಿರುವುದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. 

ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರ ಅತ್ಯಮೂಲ್ಯ ಶೆಹನಾಯ್‌ ವಾದ್ಯಗಳು ಕಳವಾದ ಒಡನೆಯೇ ಪೊಲೀಸರು ಖಾನ್‌ ಅವರ ಮೊಮ್ಮಗನ ಚಲನ ವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. ಬಿಸ್ಮಿಲ್ಲಾ ಖಾನ್‌ ಅವರ ಮನೆಯಿಂದ ಕದಿಯಲಾಗಿದ್ದ ನಾಲ್ಕು ಬೆಳ್ಳಿಯ ಶೆಹನಾಯ್‌ಗಳಲ್ಲಿ ಮೂರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಈ ಶೆಹನಾಯ್‌ಗಳಲ್ಲಿನ ಬೆಳ್ಳಿಯನ್ನು ಜ್ಯುವೆಲ್ಲರ್‌ಗಳು ಅದಾಗಲೇ ಕರಗಿಸಿರುವುದು ಆಘಾತಕಾರಿಯಾಗಿದೆ.

ಹಾಗಿದ್ದರೂ ಪೊಲೀಸರು ಈ ಶೆಹನಾಯ್‌ಗಳಿಂದ ಕರಗಿಸಲಾದ 1.066 ಕಿಲೋ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಉಸ್ತಾದ್‌ ಅವರ ವಿಶ್ವ ಖ್ಯಾತಿಯ ಈ ಶೆಹನಾಯ್‌ಗಳನ್ನು ಸ್ಥಳೀಯವಾಗಿ ಕೇವಲ 17,000 ರೂ.ಗಳಿಗೆ ಮಾರಾಟ ಮಾಡಲಾಗಿತ್ತು. 

ಕೆಲವು ಜನರಿಂದ ತಾನು ಪಡೆದಿದ್ದ ಸಾಲವನ್ನು ತೀರಿಸಲು ತಾನು ತನ್ನ ಅಜ್ಜನ ಶೆಹಾನಾಯ್‌ಗಳನ್ನು ಕದ್ದಿರುವುದು ಹೌದೆಂದು ಮೊಮ್ಮಗ ಹಸನ್‌ ತನಿಖಾಧಿಕಾರಿಗಳಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ಎಎಸ್‌ಪಿ ಎಸ್‌ಟಿಎಫ್ ಅಮಿತ್‌ ಪಾಠಕ್‌ ತಿಳಿಸಿದ್ದಾರೆ.

ಹಸನ್‌ ತನ್ನ ಅಜ್ಜನ ಅಮೂಲ್ಯ ಶೆಹನಾಯ್‌ಗಳನ್ನು ಸ್ಥಳೀಯ ಪಿಯಾರಿ ಪ್ರದೇಶದಲ್ಲಿನ ಜ್ಯುವೆಲ್ಲರ್‌ಗಳಾದ ಶಂಕರ್‌ಲಾಲ ಸೇಟ್‌ ಮತ್ತು ಸುಜಿತ್‌ ಸೇಟ್‌ ಅವರಿಗೆ ಮಾರಿದ್ದ.  ಹಸನ್‌ನಿಂದ 4,200 ರೂ. ನಗದನ್ನು ವಶಪಡಿಸಿಕೊಂಡ ಪೊಲೀಸರು ಆ ಬಳಿಕ ಇಬ್ಬರೂ ಜ್ಯುವೆಲ್ಲರ್‌ಗಳನ್ನು ಬಂಧಿಸಿದ್ದಾರೆ. 

ಇಲ್ಲಿನ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದ್ದು ಪ್ರಕರಣದ ತನಿಖೆ ಮುಂದುವರಿದಿದೆ. 

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.