ಸಂತಾನ ಹರಣ ಶಸ್ತ್ರ ಚಿಕಿತ್ಸೆ ಬಳಿಕವೂ ಗರ್ಭಿಣಿ :11 ಲಕ್ಷ ರೂ.ಪರಿಹಾರಕ್ಕೆ ಮಹಿಳೆ ಆಗ್ರಹ
Team Udayavani, Mar 12, 2021, 9:17 PM IST
ಬಿಹಾರ : ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ನಂತರವೂ ಮಹಿಳೆಯೋರ್ವಳು ಗರ್ಭ ಧರಿಸಿರುವ ಘಟನೆ ಮುಜಾಫರ್ ಜಿಲ್ಲೆಯಲ್ಲಿ ನಡೆದಿದೆ.
ನಾಲ್ಕು ಮಕ್ಕಳ ತಾಯಿ 30 ವರ್ಷದ ಫುಲಕುಮಾರಿ ದೇವಿಗೆ ಮತ್ತೊಂದು ಮಗು ಹೊಂದುವುದು ಬೇಡವಾಗಿತ್ತು. 2019ರ ಜುಲೈ ತಿಂಗಳಿನಲ್ಲಿ ಮೋತಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬ ಕಲ್ಯಾಣ ಯೋಜನೆಯಡಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯ ಸುಧೀರ್ ಕುಮಾರ್ ಈಕೆಗೆ ಶಸ್ತ್ರಚಿಕಿತ್ಸೆ ಕೈಗೊಂಡಿದ್ದರು. ಆದರೆ, ಶಸ್ತ್ರ ಚಿಕಿತ್ಸೆ ಪಡೆದ ಎರಡು ವರ್ಷಗಳ ನಂತರ ಆಕೆ ಪುನಃ ಗರ್ಭವತಿಯಾಗಿದ್ದಾಳೆ.
ವೈದ್ಯರ ನಿರ್ಲಕ್ಷ್ಯದ ಪರಿಣಾಮ ತಾನು ಗರ್ಭವತಿಯಾದೆ ಎಂದು ಫುಲಕುಮಾರಿ ಆರೋಪಿಸಿದ್ದಾರೆ. ನನಗೆ ಮತ್ತೊಂದು ಮಗು ಬೇಕಾಗಿರಲಿಲ್ಲ. ಅದಕ್ಕಾಗಿಯೇ ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದೆ.ಆದರೆ, ಸರ್ಕಾರಿ ವೈದ್ಯರ ಕರ್ತವ್ಯಲೋಪದಿಂದ ಮತ್ತೊಮ್ಮೆ ಗರ್ಭಧರಿಸುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಗರ್ಭಿಣಿ ಫುಲಕುಮಾರಿ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಈ ಬಗ್ಗೆ ದೂರು ನೀಡಿರುವ ಆಕೆ, ತನಗೆ ಸರ್ಕಾರ 11 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾಳೆ.
ಇನ್ನು ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುವ ನಮಗೆ ಹೆಚ್ಚು ಮಕ್ಕಳ ಸಾಕುವ ಸಾಮರ್ಥ್ಯ ಇಲ್ಲ. ಈ ಹಿನ್ನೆಲೆ ನನ್ನ ಪತ್ನಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದೆ. ಆದರೆ, ವ್ಯದ್ಯರ ನಿರ್ಲಕ್ಷ್ಯದಿಂದ ಅವಳು ಪುನಃ ತಾಯಿಯಾಗುತ್ತಿದ್ದಾಳೆ. ಈ ಬಗ್ಗೆ ವ್ಯದ್ಯ ಸುಧೀರ್ ಕುಮಾರ್ ಅವರನ್ನ ಪ್ರಶ್ನಿಸಿದ್ದರೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಆದ್ದರಿಂದ ದೂರು ನೀಡಿದ್ದು, ಪರಿಹಾರ ನೀಡಬೇಕು ಎಂದು ಫುಲಕುಮಾರಿ ಪತಿ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ